ಭಾರತೀಯರ ವಾರ್ಷಿಕ ಹಜ್ ಕೋಟಾ ಹೆಚ್ಚಳ
ನವದೆಹಲಿ, ಜನವರಿ 12: ಭಾರತದಿಂದ ಹಜ್ ಯಾತ್ರೆ ಕೈಗೊಳ್ಳುವ ಹಜ್ ಯಾತ್ರಿಕರಿಗೊಂದು ಸಿಹಿ ಸುದ್ದಿಯಿದೆ. ಸೌದಿ ಅರೇಬಿಯಾ ಸರ್ಕಾರದ ವತಿಯಿಂದ ನಿಗದಿಗೊಳಿಸಲಾಗಿದ್ದ ಭಾರತೀಯ ಹಜ್ ಯಾತ್ರಿಕರ ವಾರ್ಷಿಕ ಕೋಟಾವನ್ನು 1.36 ಲಕ್ಷದಿಂದ 1.70 ಲಕ್ಷಕ್ಕೆ ಏರಿಸಲಾಗಿದೆ. ಇದರಿಂದಾಗಿ, ಭಾರತದಿಂದ ಹಜ್ ಯಾತ್ರೆ ಕೈಗೊಳ್ಳಲು ಹೆಚ್ಚು ಜನರಿಗೆ ಅನುಕೂಲವಾಗಲಿದೆ.
ಜೆಡ್ಡಾದಲ್ಲಿ ಇತ್ತೀಚೆಗೆ, ಕೇಂದ್ರ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ ನಖ್ವಿ ಹಾಗೂ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವರಾದ ಡಾ. ಮೊಹಮ್ಮದ್ ಸಲೇಹ್ ಅವರು ಹಜ್ ಯಾತ್ರೆಯ ಕೋಟಾ ಹೆಚ್ಚಳಕ್ಕೆ ಸಂಬಂಧಿಸಿದ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದರು. ಅದರ ಫಲವಾಗಿ ಈಗ ಈ ಸೌಲಭ್ಯ ಹಜ್ ಯಾತ್ರಿಕರಿಗೆ ಲಭ್ಯವಾಗಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಕ್ತಾರ್ ಅಬ್ಬಾಸ್ ನಖ್ವಿ, "ಕಳೆದ 29 ವರ್ಷಗಳಿಂದ ಇಲ್ಲಿಯವರೆಗೆ ಹೆಚ್ಚಿಸಲಾಗಿರುವ ಕೋಟಾಗಳಲ್ಲೇ ಇದು ಗರಿಷ್ಠ ಹೆಚ್ಚಳವಾಗಿದೆ. ಪ್ರಸಕ್ತ ವರ್ಷದಿಂದಲೇ ಇದು ಜಾರಿಗೆ ಬರಲಿದ್ದು, ಈ ಹೊಸ ಕೋಟಾದಿಂದ ವಾರ್ಷಿಕವಾಗಿ ಹೆಚ್ಚುವರಿ 34 ಸಾವಿರ ಜನರ ಹಜ್ ಯಾತ್ರೆಯ ಕನಸು ನನಸಾಗಲಿದೆ'' ಎಂದು ತಿಳಿಸಿದರು.
ಅನಿಸಿಕೆ...
ಜೀವಮಾನದಲ್ಲೊಮ್ಮೆ ಹಜ್ ಯಾತ್ರೆ ಕೈಗೊಳ್ಳಬೇಕೆಂಬುದು ಬಹು ಜನರ ಕನಸಾಗಿರುತ್ತದೆ. ಅದಕ್ಕಾಗಿ ಎಷ್ಟೋ ವರ್ಷಗಳಿಂದ ದುಡ್ಡು ಕೂಡಿಡು ವ ರೂಢಿ ಹಲವಾರು ಮುಸ್ಲಿಂ ಕುಟುಂಬದಲ್ಲಿರುತ್ತದೆ. ಆದರೆ, ಕೊನೆ ಕ್ಷಣದಲ್ಲಿ ಕೋಟಾ ಭರ್ತಿಯಾಗಿ ಹಲವರ ಕನಸು ಕೈಗೂಡದ ಸಂದರ್ಭಗಳೂ ಬಂದೊದಗುತ್ತಿದ್ದವು. ಈಗ, ಕೋಟಾ ಹೆಚ್ಚಳ ಮಾಡಿರುವುದು ಮತ್ತಷ್ಟು ಜನರಿಗೆ ಉಪಯೋಗವಾಗಲಿದೆ.
- ಸಾದಿಯಾ, ಅಂಕಣಗಾರ್ತಿ, ಬೆಂಗಳೂರು
ಆರ್ಥಿಕವಾಗಿ ಅನುಕೂಲವಿರುವ ಮುಸ್ಲಿಮರಿಗೆ ಜೀವಮಾನದಲ್ಲಿ ಒಮ್ಮೆ ಹಜ್ ಗೆ ಹೋಗಿ ಬರಬೇಕೆಂಬ ನಿಯಮವಿದೆ. ಆದರೆ, ಇಂತಿಷ್ಟೇ ಜನರು ಹೋಗಬೇಕೆಂಬ ನಿಯಮದಿಂದಾಗಿ ಹೆಚ್ಚಿನ ಜನರಿಗೆ ಅದು ಸಾಧ್ಯವಾಗುವುದಿಲ್ಲ. ಇದೀಗ ಕೋಟಾ ಹೆಚ್ಚಿಸಿರುವುದು ಅನೇಕರಿಗೆ ಅದರಲ್ಲೂ ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲ ನೀಡಲಿದೆ.
- ರಹಮಾನ್, ಬಳ್ಳಾರಿ
ಕೋಟಾ ಹೆಚ್ಚಳವು ಹೆಚ್ಚು ಜನರ ಹಜ್ ಯಾತ್ರೆಯ ಕನಸನ್ನು ಸಾಕಾರಗೊಳಿಸಲಿದೆ. ಬಕ್ರೀದ್ ಗೂ ಮುನ್ನ ಅಲ್ಲಿಗೆ ಹೋಗಬೇಕೆಂಬ ಅಭಿಲಾಷೆ ಹಲವಾರು ಭಕ್ತರಲ್ಲಿರುತ್ತದೆ. ಈಗ ಕೋಟಾ ಹೆಚ್ಚಳವು ಹಲವರಿಗೆ ವರದಾನವಾಗಲಿದೆ.
- ರಿಸ್ವಾನಾ, ಉಪನ್ಯಾಸಕಿ, ಬೆಂಗಳೂರು
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications