ಏರ್ ಪೋರ್ಟಲ್ಲಿ ಮಗನನ್ನ ಅನಾಥವಾಗಿ ಬಿಟ್ಟುಹೋದ ಅಮ್ಮ!
ದಾಬೋಲಿಮ್ (ಗೋವಾ), ಮೇ 11: ಇಂದು ಅಮ್ಮಂದಿರ ದಿನ. ಆದರೆ ನಾಲ್ಕು ದಿನಗಳ ಹಿಂದೆ ನಿರ್ದಯಿ ಅಮ್ಮ ಮತ್ತು ಅಪ್ಪ ತಮ್ಮ 11 ವರ್ಷದ ಮುದ್ದಿನ ಮಗನನ್ನು ದುಬೈಗೆ ಕರೆದುಕೊಂಡು ಹೋಗುವುದಾಗಿ ಹೇಳಿ, ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಅವನ ಜೇಬಿನಲ್ಲಿ 500 ರೂ ತುರುಕಿ, ಏಕಾಂಗಿಯಾಗಿ ಬಿಟ್ಟುಹೋಗಿದ್ದಾರೆ.
ಸಮೀರ ಬಗೋಡಾ ಎಂಬ ದುರ್ದೈವಿ ಬಾಲಕ ಹೆತ್ತಮ್ಮ-ಅಪ್ಪನ ವಂಚನೆಯಿಂದ ಬಳಲಿ ಬೆಂಡಾಗಿದ್ದಾನೆ. ಪೊಲೀಸರ ತನಿಖೆಯ ಪ್ರಕಾರ ಸಮೀರ ಮತ್ತು ಅವನ ಅಪ್ಪ-ಅಮ್ಮ ಮಹಾರಾಷ್ಟ್ರದ ಸತಾರಾ ಪಟ್ಟಣದವರು ಎಂದು ತಿಳಿದುಬಂದಿದೆ. ಸಮೀರನ ಅಪ್ಪ-ಅಮ್ಮ ತಾವು ಮಾತ್ರ ದುಬೈಗೆ ಹಾರಿದ್ದು, ಮಗ ಸಮೀರನನ್ನು ವಾಪಸು ಸತಾರಾಗೆ ಹೋಗಿಬಿಡು ಎಂದು ಹೇಳಿ ಅವನ ಕೈಗೆ ಒಂದಷ್ಟು ದುಡ್ಡು, ಬಟ್ಟೆ ಬರೆ, ತಿನಿಸು ನೀಡಿ ಅವನೊಬ್ಬನನ್ನೇ ಬಿಟ್ಟು ಹೋಗಿದ್ದಾರೆ.

ಪಾಪ ಅವರಿಗೆ ಅಂತಹ ದರ್ದು ಏನಿತ್ತೋ? ಏನು ಅರ್ಜೆಂಟಿತ್ತೋ? ಅಂತೂ ಕಂದಮ್ಮನನ್ನು ಅನಾಥವಾಗಿ ಬಿಟ್ಟು ಹೋಗಿದ್ದಾರೆ. ಬಾಲಕ ಒಬ್ಬನೇ ಅಳುತ್ತಾ ನಿಂತಿರುವುದನ್ನು ಕಂಡು ವಿಮಾನ ನಿಲ್ದಾಣದ ಅಧಿಕಾರಿಗಳು ಮೆದು ಮಾತಿನಲ್ಲಿ ವಿಚಾರಿಸಿಕೊಂಡಿದ್ದರು. ಆದರೆ ಭಯಗ್ರಸ್ಥನಾಗಿ ದಿಕ್ಕುತೋಚದಂತೆ ನಿಂತಿದ್ದ ಸಮೀರ ಏನೊಂದೂ ಹೇಳದೆ ಮೌನಕ್ಕೆ ಜಾರಿದ್ದಾನೆ.
ನಂತರ ನಿಧಾನವಾಗಿ ಅವನನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಚಾರಿಸಲಾಗಿ ತನ್ನ ಅಪ್ಪ-ಅಮ್ಮನ ಹೆಸರು ಶಿವಾನಿ ಮತ್ತು ಶೋಭಾ ಬಗೋಡಾ ಎಂದೂ, ಮಂಗಳವಾರ ಮಧ್ಯಾಹ್ನ ವಿಮಾನ ನಿಲ್ದಾಣಕ್ಕೆ ಬಂದಿದ್ದೆವೆಂದೂ ತಿಳಿಸಿದ್ದಾನೆ.
ನನ್ ಅಮ್ಮ ನನ್ನನ್ನೂ ದುಬೈಗೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದಳು. ನಾನು ದುಬೈಗೆ ಹೋಗುವ ಆಸೆಯಲ್ಲಿದ್ದೆ. ಆದರೆ ಅಮ್ಮ ಹೀಗೇಕೆ ಮಾಡಿದಳೋ ಗೊತ್ತಿಲ್ಲ ಎಂದು ತನ್ನ ವೃತ್ತಾಂತವನ್ನು ಸಂಕ್ಷಿಪ್ತವಾಗಿ ಹೇಳಿದ್ದಾನೆ.
ಗೋವಾ ಪೊಲೀಸರು ತಕ್ಷಣ ಸತಾರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಹೆಚ್ಚಿನ ಫಲ ಸಿಕ್ಕಿಲ್ಲ. ಇತ್ತ ವಿಮಾನ ನಿಲ್ದಾನದಲ್ಲಿ ಇದ್ದಬದ್ದ ದಾಖಲೆಗಳನ್ನೆಲ್ಲಾ ನೋಡಿದ್ದಾರೆ. ಏನೂ ಪ್ರಯೋಜನವಾಗಿಲ್ಲ. ಇದರಿಂದ ಬಾಲಕನ ವಿಷಯ ನಿಗೂಢವಾಗಿದೆ. ನಿಲ್ದಾಣದಲ್ಲಿದ್ದ ಸಿಸಿಟಿವಿಯಲ್ಲಿ ನೋಡಿದರೂ ಸಮೀರನ ಅಪ್ಪ-ಅಮ್ಮ ಕಾಣಿಸಿಕೊಂಡಿಲ್ಲ. ದುಬೈ ವಿಮಾನ ಪ್ರಯಾಣಿಕರ ಪಟ್ಟಿಯಲ್ಲೂ ಆವರುಗಳ ಹೆಸರುಗಳು ಕಾಣಿಸಿಕೊಂಡಿಲ್ಲ. ಹಾಗಾಗಿ ಪ್ರಕರಣ ಗೋಜಲುಗೋಜಲಾಗಿದೆ.
ಇತ್ತ ಮರಗಟ್ಟಿದಂತಾಗಿರುವ ಬಾಲಕ ಸಮೀರನಿಗೆ ಧೈರ್ಯ ತುಂಬಿರುವ ವಾಸ್ಕೋ ಉಪವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಲಾರೆನ್ಸ್ ಡಿಸೋಜಾ ಅವರು ಸತಾರಾಕ್ಕೆ ತೆರಳಿ ಹೇಗಾದರೂ ಮಾಡಿ ಅವರ ಮನೆಯವರನ್ನು ಪತ್ತೆ ಹಚ್ಚುವ ಪಣ ತೊಟ್ಟಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications