ಕೊನೆಗೂ ಸಲ್ಲೂಗೆ ಜೈಲು... 'ಕೃಷ್ಣಮೃಗದ ನಾಲ್ಕನೇ ಸಂತತಿಗೆ ಸಿಕ್ತು ನ್ಯಾಯ!'
Recommended Video

ನವದೆಹಲಿ, ಏಪ್ರಿಲ್ 05: "ಸದ್ಯ, ಕೊನೆಗೂ ಕೃಷ್ಣ ಮೃಗದ ಮರಿಮಕ್ಕಳಿಗೆ ನ್ಯಾಯ ಸಿಕ್ಕಿತು...!" ಹಾಗೆಂದು ಕೃಷ್ಣಮೃಗ ಪ್ರಕರಣದ ತೀರ್ಪು, ವಿಚಾರಣೆಯಲ್ಲಿನ ವಿಳಂಬ ನೀತಿಯನ್ನು ಟ್ವಿಟ್ಟರ್ ನಲ್ಲಿ ಹಲವರು ಛೇಡಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು 20 ವರ್ಷಗಳ ಹಿಂದೆ (1998) ನಡೆದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ದೋಷಿ ಎಂದು ಕೊನೆಗೂ ಕೋರ್ಟು ತೀರ್ಪು ನೀಡಿದೆ. ಪ್ರಕರಣದ ಉಳಿದ ಆರೋಪಿಗಳಾದ ಸೈಫ್ ಅಲಿಖಾನ್, ಸೊನಾಲಿ ಬೇಂದ್ರೆ, ನೀಲಮ್ ಮತ್ತು ಟಬು ಅವರನ್ನು ಖುಲಾಸೆಗೊಳಿಸಲಾಗಿದೆ.
ರಾಜಸ್ಥಾನದ ಜೋಧಪುರ ನ್ಯಾಯಾಲಯದಿಂದ ಇಂದು ತೀರ್ಪು ಹೊರಬೀಳುತ್ತಿದ್ದಂತೆಯೇ ಸಲ್ಲೂ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಲ್ಮಾನ್ ಖಾನ್ ಮಟ್ಟಿಗೆ ಇದೇನು ಹೊಸತಲ್ಲ. ಇನ್ನು ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಹೊರಬಂದರೂ ಅಚ್ಚರಿಯೇನಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ!
| Array |
ಕೆಲವು ವರ್ಷಗಳ ನಂತರ....
ಇಂದು- ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ದೋಷಿ.
ಕೆಲ ದಿನಗಳ ನಂತರ- ಜಾಮೀನು ಪಡೆದು ಹೊರಬಂದ ಸಲ್ಮಾನ್ ಖಾನ್
ಮತ್ತಷ್ಟು ದಿನಗಳ ನಂತರ- 'ಬೀಯಿಂಗ್ ಬ್ಲಾಕ್ ಬಕ್' ಟಿ ಶರ್ಟ್ ಬಿಡುಗಡೆಗೊಳಿಸಿದ ಸಲ್ಮಾನ್ ಖಾನ್. ಇದರ 3% ಲಾಭ ಚಾರಿಟಿಗೆ!
ಇವೆಲ್ಲವುಗಳ ನಂತರ- 'ಟೈಗರ್ ಇನ್ನೋಸೆಂಟ್ ಹೆ' ಎಂಬ ವನ್ಯಜೀವಿ ಸಂರಕ್ಷಕನ ಸಲ್ಮಾನ್ ಚಿತ್ರದಿಂದ 2 ಬಿಲಿಯನ್ ಡಾಲರ್ ಸಂಪಾದನೆ!
ಹೀಗೆಂದು ಟ್ವೀಟ್ ಮಾಡಿದ್ದಾರೆ ಸೋರಭ್ ಪಂಥ್
|
ಮರುಜನ್ಮ ಪಡೆದ ಕೃಷ್ಣಮೃಗ
20 ವರ್ಷಗಳ ನಂತರ ಸಲ್ಮಾನ್ ಖಾನ್ ರನ್ನು ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ದೋಷಿ ಎಂದು ಕೋರ್ಟು ತೀರ್ಪು ನೀಡಿದೆ. ಕೃಷ್ಣಮೃಗ 1998 ರಲ್ಲೇ ಸತ್ತಿದೆ. ಬಹುಶಃ ಇನ್ನು ಮೇಲೆ ಕೃಷ್ಣಮೃಗ ಎಲ್ಲೋ ಪುನರ್ಜನ್ಮ ಪಡೆಯಬಹುದು. ಈ ತೀರ್ಪನ್ನು ಅದು ಕೇಳಿಸಿಕೊಂಡು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಹೊಗಳಿರಬಹುದದು! ನೋಡೋಣ ಇನ್ನೆಷ್ಟು ದಿನದಲ್ಲಿ ಸಲ್ಮಾನ್ ಖಾನ್ ಜಾಮೀನು ಪಡೆಯುತ್ತಾರೆ ಅಂತ! ಎಂದಿದ್ದಾರೆ ಅಂಶುಲ್ ಸಕ್ಸೆನಾ.
|
ಕೊನೆಗೂ ಕೃಷ್ಣಮೃಗದ ಮರಿಮೊಮ್ಮಕ್ಕಳಿಗೆ ನ್ಯಾಯದೊರಕಿದೆ!
ಸಲ್ಮಾನ್ ಖಾನ್ ರನ್ನು ಕೃಷ್ಣ ಮೃಗ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಲಾಗಿದೆ. ಕೊನೆಗೂ ಕೃಷ್ಣಮೃಗದ ಮರಿಮೊಮ್ಮಕ್ಕಳಿಗೆ ನ್ಯಾಯ ದೊರಕಿದೆ ಎಂದು ಛೇಡಿಸಿದ್ದಾರೆ ರಮೇಶ್ ಶ್ರೀವತ್ಸ್!
|
ಸಲ್ಮಾನ್ ಖಾನ್ ಶಿಕ್ಷೆಗೆ ಅರ್ಹರಲ್ಲ!
ಕಳೆದ 20 ವರ್ಷಗಳಿಂದ ಸಲ್ಮಾನ್ ಖಾನ್ ಸತತವಾಗಿ ಜೋಧಪುರಕ್ಕೆ ಭೇಟಿನೀಡಿದ್ದಾರೆ. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ಸಮಾನವಾದರೂ, ಸಲ್ಮಾನ್ ಖಾನ್ ಶಿಕ್ಷೆಗೆ ಅರ್ಹರಲ್ಲ. ಮೇಲಿನ ನ್ಯಾಯಾಲಯಗಳು ಈ ತೀರ್ಪನ್ನು ವಜಾಗೊಳಿಸುತ್ತದೆಂದು ನಂಬಿಕೆ ಇದೆ ಎಂದು ಸಲ್ಮಾನ್ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications