ಮೊರ್ಬಿ ಸೇತುವೆ ಕುಸಿತದ ಕುರಿತು ಟ್ವೀಟ್ ಮಾಡಿದ್ದಕ್ಕೆ ಸಾಕೇತ್ ಗೋಖಲೆ ಬಂಧನ
ಕೋಲ್ಕತ್ತಾ, ಡಿಸೆಂಬರ್ 06: ಮೋರ್ಬಿ ಸೇತುವೆ ಕುಸಿತದ ಬಗ್ಗೆ ಟ್ವೀಟ್ ಮಾಡಿದ ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಬಿಜೆಪಿಯ "ರಾಜಕೀಯ ಸೇಡು" ಎಂದು ಆರೋಪಿಸಿದ್ದಾರೆ.
ಈ ಕುರಿತು ಪಕ್ಷವು ನಿಖರವಾಗಿ ಯಾವ ಟ್ವೀಟ್ ಅನ್ನು ನಿರ್ದಿಷ್ಟಪಡಿಸಿಲ್ಲ, ಆದರೆ ಸರ್ಕಾರದ ಸತ್ಯ-ಪರಿಶೀಲನಾ ಘಟಕವು ಇತ್ತೀಚೆಗೆ ಶ್ರೀ ಗೋಖಲೆ ಅವರ ಟ್ವೀಟ್ ಅನ್ನು ಗುರುತಿಸಿದೆ. ಅದರಲ್ಲಿ ಅವರು "ಆರ್ಟಿಐಯಿಂದ ಮೋರ್ಬಿಗೆ ಪ್ರಧಾನಿಯವರ ಭೇಟಿ ವೇಳೆ 30 ಕೋಟಿ ವೆಚ್ಚವಾಗಿದೆ," ಎಂದು ಉಲ್ಲೇಖಿಸಲಾಗಿದೆ.
ಸಾಕೇತ್ ಗೋಖಲೆ ಅವರು ಸೋಮವಾರ ರಾತ್ರಿ ನವದೆಹಲಿಯಿಂದ ರಾಜಸ್ಥಾನದ ಜೈಪುರಕ್ಕೆ ವಿಮಾನದಲ್ಲಿ ತೆರಳಿದ್ದರು. ಅಲ್ಲಿಂದ ಅವರನ್ನು ಗುಜರಾತ್ ಪೊಲೀಸರು "ಪಿಕ್ ಅಪ್" ಮಾಡಿದ್ದಾರೆ ಎಂದು ಬಂಗಾಳದ ಆಡಳಿತ ಪಕ್ಷದ ಹಿರಿಯ ನಾಯಕ ಡೆರೆಕ್ ಒಬ್ರಿಯಾನ್ ಟ್ವೀಟ್ ಮಾಡಿದ್ದಾರೆ.

ಅಹ್ಮದಾಬಾದ್ಗೆ ತೆರಳುತ್ತಿದ್ದನ್ನು ತಿಳಿದು ವಶಕ್ಕೆ:
ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ತನ್ನ ತಾಯಿಗೆ ಕರೆ ಮಾಡಿ ಅಹ್ಮದಾಬಾದ್ಗೆ ಕರೆದುಕೊಂಡು ಹೋಗುತ್ತಿದ್ದು, ಇಂದು ಮಧ್ಯಾಹ್ನದ ವೇಳೆಗೆ ಅಹ್ಮದಾಬಾದ್ಗೆ ತಲುಪುವುದಾಗಿ ತಿಳಿಸಿದರು. ಪೋಲೀಸರು ಆ ಒಂದು ಎರಡು ನಿಮಿಷಗಳ ಫೋನ್ ಕರೆ ಮಾಡಲು ಅವಕಾಶ ಮಾಡಿಕೊಟ್ಟರು. ನಂತರ ಅವರ ಫೋನ್ ಮತ್ತು ಅವರ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡರು," ಎಂದು ಓಬ್ರಿಯಾನ್ ಹೇಳಿದರು.
ಆರ್ಟಿಐ ಕಾರ್ಯಕರ್ತ-ರಾಜಕಾರಣಿಯ ವಿರುದ್ಧದ ಪ್ರಕರಣವನ್ನು "ಮೊರ್ಬಿ ಸೇತುವೆ ಕುಸಿತದ ಕುರಿತು ಸಾಕೇತ್ ಅವರ ಟ್ವೀಟ್ ಕುರಿತು ಅಹಮದಾಬಾದ್ ಸೈಬರ್ ಸೆಲ್ನಿಂದ ಬೇಯಿಸಲಾಗಿದೆ," ಎಂದು ಹೇಳಿದರು. ಗುಜರಾತ್ನ ಮೊರ್ಬಿ ಪಟ್ಟಣದಲ್ಲಿ ವಸಾಹತುಶಾಹಿ ಯುಗದ ತೂಗು ಸೇತುವೆಯು ಅಕ್ಟೋಬರ್ 30ರಂದು ಕುಸಿದು 130ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದರು. ಗುತ್ತಿಗೆದಾರರು ನಿಯಮಾವಳಿಗಳನ್ನು ಪಾಲಿಸದ ಕಾರಣ ನಗರಸಭೆ ಅಧಿಕಾರಿಗಳ ವೈಫಲ್ಯದತ್ತ ತನಿಖೆಯು ಬೊಟ್ಟು ಮಾಡಿತು.
ಟಿಎಂಸಿಯನ್ನು ಹೀಗೆ ನಿಯಂತ್ರಿಸಲು ಸಾಧ್ಯವಿಲ್ಲ:
"ಈ ರೀತಿಯ ಕ್ರಮದಿಂದಾಗಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳನ್ನು ಮೌನಗೊಳಿಸಲು ಸಾಧ್ಯವಿಲ್ಲ. ಬಿಜೆಪಿ ರಾಜಕೀಯ ಸೇಡಿನ ಕ್ರಮವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ," ಎಂದು ರಾಜ್ಯಸಭಾ ಸದಸ್ಯರು ಹೇಳಿದರು. ಆದರೆ ಈ ಬಗ್ಗೆ ಬಿಜೆಪಿಯಾಗಲಿ, ಗುಜರಾತ್ ಸರಕಾರವಾಗಲಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. "ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾರೂ ನಮಗೆ ಮಾಹಿತಿ ನೀಡಿಲ್ಲ. ಜೈಪುರ ವಿಮಾನ ನಿಲ್ದಾಣದ ಪೊಲೀಸ್ ಉಸ್ತುವಾರಿ ದಿಗ್ಪಾಲ್ ಸಿಂಗ್ ಅವರನ್ನು ಸಂಪರ್ಕಿಸಿದೆ ಎಂದು ಅವರು ಹೇಳಿದರು.












Click it and Unblock the Notifications