ರಾಜಸ್ಥಾನ: ಕಾಂಗ್ರೆಸ್ ನಾಯಕರು ವಿಧಾನಸಭೆಯಿಂದ ನನ್ನನ್ನು ಹೊರಗೆ ಎಳೆದರು ಎಂದ ವಜಾಗೊಂಡ ಕಾಂಗ್ರೆಸ್ ಸಚಿವ!
ಜೈಪುರ, ಜುಲೈ. 24: ಇತ್ತೀಚೆಗಷ್ಟೇ ತಮ್ಮದೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಮಾತನಾಡಿ ವಜಾಗೊಂಡ ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ಗುಢಾ ಅವರನ್ನು ರಾಜ್ಯ ವಿಧಾನಸಭೆಯಿಂದ ಹೊರಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ರಾಜಕೀಯವಾಗಿ ಸ್ಫೋಟಕವಾಗಲಿದೆ ಎಂದು ಅವರು ಹೇಳುವ "ಕೆಂಪು ಡೈರಿ" ಅನ್ನು ಪ್ರಸ್ತುತಪಡಿಸಲು ಪ್ರಯತ್ನಿಸಿದ ವೇಳೆ ಸ್ವಪಕ್ಷದ ನಾಯಕರೇ ತನ್ನನ್ನು ಹೊಹಾಕಿದ್ದಾರೆ ಎಂದು ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ವಿಧಾನಸಭೆಯಲ್ಲಿ ಟೀಕಿಸಿದ ನಂತರ ರಾಜೇಂದ್ರ ಸಿಂಗ್ ಗುಢಾ ಅವರನ್ನು ಶುಕ್ರವಾರ ರಾಜ್ಯ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ. ಸೋಮವಾರ ಅವರು ಕೆಂಪು ಡೈರಿಯೊಂದಿಗೆ ಸ್ಪೀಕರ್ ಸಿಪಿ ಜೋಶಿ ಅವರ ಪೀಠದ ಬಳಿಗೆ ತಲುಪಿ, ಶೂನ್ಯ ವೇಳೆಯಲ್ಲಿ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ.

ಸ್ವಲ್ಪ ಸಮಯದ ನಂತರ, ರಾಜೇಂದ್ರ ಸಿಂಗ್ ಗುಢಾ ಆಕ್ರಮಣಕಾರಿಯಾಗಿ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ಅವರ ಬಳಿಗೆ ಹೊರಟರು, ಅವರು ಮಾತನಾಡಲು ನಿಂತಾಗ ಅವರನ್ನು ಎದುರಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ ಕಾಂಗ್ರೆಸ್ ಶಾಸಕ ರಫೀಕ್ ಖಾನ್ ಅವರು ರಾಜೇಂದ್ರ ಸಿಂಗ್ ಗುಢಾ ಅವರನ್ನು ತಳ್ಳಿದ್ದಾರೆ. ನಂತರ ಪಕ್ಷದ ಇತರ ಶಾಸಕರು ಅವರತ್ತ ಧಾವಿಸಿ ಉದಯಪುರವತಿ ಶಾಸಕರನ್ನು ಹೊರಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ.
ಬಿಜೆಪಿ ಶಾಸಕರು ತಮ್ಮ ಆಸನಗಳಿಂದ ಎದ್ದು ಕೋಲಾಹಲ ಸೃಷ್ಟಿಸಿ "ಕೆಂಪು ಡೈರಿ" ಬಗ್ಗೆ ಪ್ರಶ್ನಿಸಿದ್ದಾರೆ. ಕೆಂಪು ಡೈರಿ ವಿಚಾರವಾಗಿ ಬಿಜೆಪಿ ಶಾಸಕರು ಕೋಲಾಹಲ ಸೃಷ್ಟಿಸಿ ಸದನದ ಬಾವಿಗೆ ನುಗ್ಗಿದರು. ಬೆಳಗ್ಗೆ ಸದನ ಪ್ರಾರಂಭವಾಗುವ ಮೊದಲು, ರಾಜೇಂದ್ರ ಸಿಂಗ್ ಗುಢಾ ಅವರು ವಿಧಾನಸಭೆಯಲ್ಲಿ ಕೆಂಪು ಡೈರಿ ಬಗ್ಗೆ ವಿವರಗಳನ್ನು ಬಹಿರಂಗಪಡಿಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಡೈರಿಯಲ್ಲಿ ಕೆಲವು ರಹಸ್ಯಗಳಿವೆ ಎಂದು ಅವರು ಮಾಹಿತಿ ನೀಡಿದ್ದರು.

ಸದನವನ್ನು ಮುಂದೂಡಿದ ಬಳಿಕ ವಿಧಾನಸಭೆ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ ಸಿಂಗ್ ಗುಢಾ ಅವರು ಕೆಂಪು ಡೈರಿ ಕುರಿತು ಹೇಳಿಕೆ ನೀಡಲು ಬಯಸಿದ್ದರು ಆದರೆ ಸ್ಪೀಕರ್ ಅದಕ್ಕೆ ಅವಕಾಶ ನೀಡಲಿಲ್ಲ. "ಶಾಂತಿ ಧಾರಿವಾಲ್ ಮಾತನಾಡಲು ನಿಂತರು ಮತ್ತು ನಾನು ಅವರ ಬಳಿಗೆ ಹೋಗಿ ನಾನು ಸದನದಲ್ಲಿ ಹೇಳಿಕೆ ನೀಡಬೇಕೆಂದು ಹೇಳಿದ್ದೇನೆ. ಆದರೆ ಕಾಂಗ್ರೆಸ್ ಶಾಸಕರು ನನ್ನನ್ನು ನೆಲಕ್ಕೆ ತಳ್ಳಿ ನನ್ನನ್ನು ಬೀಳಿಸಿದರು. ಶಾಂತಿ ಧರಿವಾಲ್ ಸೇರಿದಂತೆ ಕೆಲವರು ನನಗೆ ಒದ್ದು ಡೈರಿಯನ್ನು ಕಸಿದುಕೊಂಡರು. ಆದರೆ ಡೈರಿಯ ಕೆಲವು ಭಾಗ ನನ್ನ ಬಳಿ ಉಳಿದಿದೆ" ಎಂದು ಆರೋಪಿಸಿದ್ದಾರೆ.
ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಿಯಂತ್ರಿಸುವಲ್ಲಿ ತಮ್ಮದೇ ಸರ್ಕಾರದ ಕ್ರಮದ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆಗಳನ್ನು ಎತ್ತಿದ ಕೆಲವು ಗಂಟೆಗಳ ನಂತರ ರಾಜೇಂದ್ರ ಸಿಂಗ್ ಗುಢಾ ಅವರನ್ನು ಕಳೆದ ವಾರ ವಜಾಗೊಳಿಸಲಾಯಿತು. ಅವರನ್ನು ವಜಾಗೊಳಿಸಿದ ಕುರಿತು ಶನಿವಾರ ಪ್ರತಿಕ್ರಿಯಿಸಿದ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ, "ಸಚಿವರ ಸೇರ್ಪಡೆ ಅಥವಾ ಅವರನ್ನು ವಜಾಗೊಳಿಸುವುದು ಮುಖ್ಯಮಂತ್ರಿಗೆ ಬಿಟ್ಟದ್ದು ಮತ್ತು ಅವರು ಅದರಂತೆ ನಡೆದುಕೊಂಡಿದ್ದಾರೆ. ಇದು ಮುಖ್ಯಮಂತ್ರಿಯ ಹಕ್ಕು" ಎಂದು ಹೇಳಿದ್ದಾರೆ.
"ಮಹಿಳಾ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ವಿಫಲರಾಗಿದ್ದೇವೆ ಎಂಬುದು ನಿಜ ಮತ್ತು ಒಪ್ಪಿಕೊಳ್ಳಬೇಕು. ಮಣಿಪುರದ ಬದಲಿಗೆ, ನಾವು ನಮ್ಮೊಳಗೆ ನೋಡಬೇಕು. ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಏಕೆ ಹೆಚ್ಚಿವೆ ಎಂಬುದನ್ನು ತಿಳಿಯಬೇಕು. ತಾವು ಸಚಿನ್ ಪೈಲಟ್ ಪರವಾಗಿ ಮಾತನಾಡುವ ಕಾರಣ ತನ್ನನ್ನು ಗುರಿಯಾಗಿಸಲಾಗುತ್ತಿದೆ" ಎಂದು ರಾಜೇಂದ್ರ ಸಿಂಗ್ ಗುಢಾ ಹೇಳಿದ್ದಾರೆ.
-
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ದರ: ಇಂದು 10 ಗ್ರಾಂ ಬಂಗಾರದ ಬೆಲೆ 1,58,620 ರೂಪಾಯಿ -
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು












Click it and Unblock the Notifications