Get Updates
Get notified of breaking news, exclusive insights, and must-see stories!

ರಾಜಸ್ಥಾನ: ಕಾಂಗ್ರೆಸ್ ನಾಯಕರು ವಿಧಾನಸಭೆಯಿಂದ ನನ್ನನ್ನು ಹೊರಗೆ ಎಳೆದರು ಎಂದ ವಜಾಗೊಂಡ ಕಾಂಗ್ರೆಸ್ ಸಚಿವ!

ಜೈಪುರ, ಜುಲೈ. 24: ಇತ್ತೀಚೆಗಷ್ಟೇ ತಮ್ಮದೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಮಾತನಾಡಿ ವಜಾಗೊಂಡ ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ಗುಢಾ ಅವರನ್ನು ರಾಜ್ಯ ವಿಧಾನಸಭೆಯಿಂದ ಹೊರಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ರಾಜಕೀಯವಾಗಿ ಸ್ಫೋಟಕವಾಗಲಿದೆ ಎಂದು ಅವರು ಹೇಳುವ "ಕೆಂಪು ಡೈರಿ" ಅನ್ನು ಪ್ರಸ್ತುತಪಡಿಸಲು ಪ್ರಯತ್ನಿಸಿದ ವೇಳೆ ಸ್ವಪಕ್ಷದ ನಾಯಕರೇ ತನ್ನನ್ನು ಹೊಹಾಕಿದ್ದಾರೆ ಎಂದು ಹೇಳಿದ್ದಾರೆ.

ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ವಿಧಾನಸಭೆಯಲ್ಲಿ ಟೀಕಿಸಿದ ನಂತರ ರಾಜೇಂದ್ರ ಸಿಂಗ್ ಗುಢಾ ಅವರನ್ನು ಶುಕ್ರವಾರ ರಾಜ್ಯ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ. ಸೋಮವಾರ ಅವರು ಕೆಂಪು ಡೈರಿಯೊಂದಿಗೆ ಸ್ಪೀಕರ್ ಸಿಪಿ ಜೋಶಿ ಅವರ ಪೀಠದ ಬಳಿಗೆ ತಲುಪಿ, ಶೂನ್ಯ ವೇಳೆಯಲ್ಲಿ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ.

rajendra-gudha-dragged-out-of-assembly

ಸ್ವಲ್ಪ ಸಮಯದ ನಂತರ, ರಾಜೇಂದ್ರ ಸಿಂಗ್ ಗುಢಾ ಆಕ್ರಮಣಕಾರಿಯಾಗಿ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ಅವರ ಬಳಿಗೆ ಹೊರಟರು, ಅವರು ಮಾತನಾಡಲು ನಿಂತಾಗ ಅವರನ್ನು ಎದುರಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ ಕಾಂಗ್ರೆಸ್ ಶಾಸಕ ರಫೀಕ್ ಖಾನ್ ಅವರು ರಾಜೇಂದ್ರ ಸಿಂಗ್ ಗುಢಾ ಅವರನ್ನು ತಳ್ಳಿದ್ದಾರೆ. ನಂತರ ಪಕ್ಷದ ಇತರ ಶಾಸಕರು ಅವರತ್ತ ಧಾವಿಸಿ ಉದಯಪುರವತಿ ಶಾಸಕರನ್ನು ಹೊರಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ.

ಬಿಜೆಪಿ ಶಾಸಕರು ತಮ್ಮ ಆಸನಗಳಿಂದ ಎದ್ದು ಕೋಲಾಹಲ ಸೃಷ್ಟಿಸಿ "ಕೆಂಪು ಡೈರಿ" ಬಗ್ಗೆ ಪ್ರಶ್ನಿಸಿದ್ದಾರೆ. ಕೆಂಪು ಡೈರಿ ವಿಚಾರವಾಗಿ ಬಿಜೆಪಿ ಶಾಸಕರು ಕೋಲಾಹಲ ಸೃಷ್ಟಿಸಿ ಸದನದ ಬಾವಿಗೆ ನುಗ್ಗಿದರು. ಬೆಳಗ್ಗೆ ಸದನ ಪ್ರಾರಂಭವಾಗುವ ಮೊದಲು, ರಾಜೇಂದ್ರ ಸಿಂಗ್ ಗುಢಾ ಅವರು ವಿಧಾನಸಭೆಯಲ್ಲಿ ಕೆಂಪು ಡೈರಿ ಬಗ್ಗೆ ವಿವರಗಳನ್ನು ಬಹಿರಂಗಪಡಿಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಡೈರಿಯಲ್ಲಿ ಕೆಲವು ರಹಸ್ಯಗಳಿವೆ ಎಂದು ಅವರು ಮಾಹಿತಿ ನೀಡಿದ್ದರು.

rajendra-gudha-dragged-out-of-assembly

ಸದನವನ್ನು ಮುಂದೂಡಿದ ಬಳಿಕ ವಿಧಾನಸಭೆ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ ಸಿಂಗ್ ಗುಢಾ ಅವರು ಕೆಂಪು ಡೈರಿ ಕುರಿತು ಹೇಳಿಕೆ ನೀಡಲು ಬಯಸಿದ್ದರು ಆದರೆ ಸ್ಪೀಕರ್ ಅದಕ್ಕೆ ಅವಕಾಶ ನೀಡಲಿಲ್ಲ. "ಶಾಂತಿ ಧಾರಿವಾಲ್ ಮಾತನಾಡಲು ನಿಂತರು ಮತ್ತು ನಾನು ಅವರ ಬಳಿಗೆ ಹೋಗಿ ನಾನು ಸದನದಲ್ಲಿ ಹೇಳಿಕೆ ನೀಡಬೇಕೆಂದು ಹೇಳಿದ್ದೇನೆ. ಆದರೆ ಕಾಂಗ್ರೆಸ್ ಶಾಸಕರು ನನ್ನನ್ನು ನೆಲಕ್ಕೆ ತಳ್ಳಿ ನನ್ನನ್ನು ಬೀಳಿಸಿದರು. ಶಾಂತಿ ಧರಿವಾಲ್ ಸೇರಿದಂತೆ ಕೆಲವರು ನನಗೆ ಒದ್ದು ಡೈರಿಯನ್ನು ಕಸಿದುಕೊಂಡರು. ಆದರೆ ಡೈರಿಯ ಕೆಲವು ಭಾಗ ನನ್ನ ಬಳಿ ಉಳಿದಿದೆ" ಎಂದು ಆರೋಪಿಸಿದ್ದಾರೆ.

ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಿಯಂತ್ರಿಸುವಲ್ಲಿ ತಮ್ಮದೇ ಸರ್ಕಾರದ ಕ್ರಮದ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆಗಳನ್ನು ಎತ್ತಿದ ಕೆಲವು ಗಂಟೆಗಳ ನಂತರ ರಾಜೇಂದ್ರ ಸಿಂಗ್ ಗುಢಾ ಅವರನ್ನು ಕಳೆದ ವಾರ ವಜಾಗೊಳಿಸಲಾಯಿತು. ಅವರನ್ನು ವಜಾಗೊಳಿಸಿದ ಕುರಿತು ಶನಿವಾರ ಪ್ರತಿಕ್ರಿಯಿಸಿದ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ, "ಸಚಿವರ ಸೇರ್ಪಡೆ ಅಥವಾ ಅವರನ್ನು ವಜಾಗೊಳಿಸುವುದು ಮುಖ್ಯಮಂತ್ರಿಗೆ ಬಿಟ್ಟದ್ದು ಮತ್ತು ಅವರು ಅದರಂತೆ ನಡೆದುಕೊಂಡಿದ್ದಾರೆ. ಇದು ಮುಖ್ಯಮಂತ್ರಿಯ ಹಕ್ಕು" ಎಂದು ಹೇಳಿದ್ದಾರೆ.

"ಮಹಿಳಾ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ವಿಫಲರಾಗಿದ್ದೇವೆ ಎಂಬುದು ನಿಜ ಮತ್ತು ಒಪ್ಪಿಕೊಳ್ಳಬೇಕು. ಮಣಿಪುರದ ಬದಲಿಗೆ, ನಾವು ನಮ್ಮೊಳಗೆ ನೋಡಬೇಕು. ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಏಕೆ ಹೆಚ್ಚಿವೆ ಎಂಬುದನ್ನು ತಿಳಿಯಬೇಕು. ತಾವು ಸಚಿನ್ ಪೈಲಟ್ ಪರವಾಗಿ ಮಾತನಾಡುವ ಕಾರಣ ತನ್ನನ್ನು ಗುರಿಯಾಗಿಸಲಾಗುತ್ತಿದೆ" ಎಂದು ರಾಜೇಂದ್ರ ಸಿಂಗ್ ಗುಢಾ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+