Get Updates
Get notified of breaking news, exclusive insights, and must-see stories!

ಪ್ರಸಿದ್ಧ ತಬಲ ವಾದಕ ಜಾಕೀರ್ ಹುಸೇನ್ ಜೊತೆ ಸಚಿನ್ ಸೆಲ್ಫಿ

ಬೆಂಗಳೂರು,ಫೆಬ್ರವರಿ,26: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಪ್ರಸಿದ್ಧ ತಬಲಾ ವಾದಕ ಜಾಕೀರ್ ಹುಸೇನ್ ಜೊತೆ ನವದೆಹಲಿಯಲ್ಲಿ ಸೆಲ್ಫೀ ತೆಗೆದುಕೊಂಡು ತಮ್ಮ ಫೇಸ್ ಬುಕ್ ಪೇಜಿನಲ್ಲಿ ಹಾಕಿ ಸಂಭ್ರಮಿಸಿದರು. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಮತ್ತು ಜವಾಹರಲಾಲ್ ವಿಶ್ವವಿದ್ಯಾಲಯದ ಪಕ್ರಣಗಳು ತಣ್ಣಗಾಗುವಂತೆ ತೋರುತ್ತಿಲ್ಲ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಬಂಧನ ವಿರೋಧಿಸಿ ಚಿಕ್ಕಮಗಳೂರಿನ ಮಂದಿಯೂ ದೊಡ್ಡ ದೊಡ್ಡ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು. ರಾಜ್ಯದಿಂದ ಜಿಲ್ಲೆಗೂ ಕಾಲಿಟ್ಟಿದೆ ಜೆಎನ್ ಯು ಪ್ರಕರಣ.

ರಷ್ಯಾದ ಗಗನಯಾತ್ರಿ ಮೈಕೇಲ್ ಕೊರ್ ನೈನ್ಕೋ ಅವರು 340 ದಿನದ ಬಳಿಕ ಬಾಹ್ಯಾಕಾಶದಿಂದ ಭೂಮಿಗೆ ವಾಪಸಾಗಲಿದ್ದಾರೆ. ಮುರು ವಾರದ ಹಿಂದೆ ಜನಿಸಿದ ಲ್ಯಾಬ್ ಸ್ಟಾರ್ ಎಂಬ ಪ್ರಾಣಿಯ ಚಿತ್ರವು ನ್ಯಾಷನಲ್ ಸೈನ್ಸ್ ಫೌಂಡೇಶನ್ ವಿಶುವಲ್ ಮೀಡಿಯಾ ಪ್ರಶಸ್ತಿ ಪಡೆದುಕೊಂಡಿದೆ. ಹೀಗೆ ನಾನಾ ಘಟನೆಗಳು ದೇಶದಲ್ಲಿ ಘಟಿಸಿದೆ. ಇಲ್ಲಿವೆ ಇನ್ನಷ್ಟು ಸುದ್ದಿಗಳಿವೆ. [ಬೆಂಗಳೂರಲ್ಲಿ ಚಿತ್ರಾಂಗದೆ, ಬಾಹ್ಯಾಕಾಶದಲ್ಲಿ ಗೊರಿಲ್ಲಾ...!]

ಸಚಿನ್ ತೆಗೆದುಕೊಂಡ ಸೆಲ್ಫೀ

ಸಚಿನ್ ತೆಗೆದುಕೊಂಡ ಸೆಲ್ಫೀ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ತಬಲ ಮಾಂತ್ರಿಕ ಜಾಕೀರ್ ಹುಸೇನ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂತಸ ಪಟ್ಟಿದ್ದು ಹೀಗೆ

ಹಳೆಯ ಫೋಟೋಕ್ಕೆ ಪ್ರಶಸ್ತಿ

ಹಳೆಯ ಫೋಟೋಕ್ಕೆ ಪ್ರಶಸ್ತಿ

ಮೈನೇ ಎಂಬ ದೇಶದಲ್ಲಿರುವ ಈಸ್ಟ್ ಬೂತ್ ಡೇಯ ಬಿಗ್ ಲೋ ಲ್ಯಾಬೋರೇಟರಿಯಲ್ಲಿ ಲಾಬ್ ಸ್ಟಾರ್ ಎಂಬ ಜೀವಿಯ ಫೋಟೋವನ್ನು 2015ರ ಬೇಸಿಗೆ ದಿನದ ಶೋದಲ್ಲಿ ಪ್ರದರ್ಶಿಸಲಾಗಿತ್ತು. ಈ ಚಿತ್ರಕ್ಕೆ ನ್ಯಾಷನಲ್ ಸೈನ್ಸ್ ಫೌಂಡೇಶನ್ ವಿಶುವಲ್ ಮೀಡಿಯಾ ಪ್ರಶಸ್ತಿ ದೊರೆತಿದೆ.

ಅಹಮದಾಬಾದಿನಲ್ಲಿ ಹಾರಾಡಿದ ತ್ರಿವರ್ಣ ಧ್ವಜ

ಅಹಮದಾಬಾದಿನಲ್ಲಿ ಹಾರಾಡಿದ ತ್ರಿವರ್ಣ ಧ್ವಜ

ಅಹಮದಬಾದಿನಲ್ಲಿ ಜನರು 605ನೇ ಫೌಂಡೇಶನ್ ದಿನವನ್ನು ಹೂವಿನ ಸುರಿಮಳೆಗೈದು ಭಾರತದ ಬಾವುಟ ಹಿಡಿದು ಸಂಭ್ರಮಪಟ್ಟರು

ಚಿಟ್ ಫಂಡ್ ವಿರುದ್ಧ ಸಿಡಿದೆದ್ದ ಮಹಿಳೆಯರು

ಚಿಟ್ ಫಂಡ್ ವಿರುದ್ಧ ಸಿಡಿದೆದ್ದ ಮಹಿಳೆಯರು

ಪಶ್ವಿಮ ಬಂಗಾಳದಲ್ಲಿ ಚಿಟ್ ಫಂಡ್ ವಿರುದ್ಧ ಪ್ರತಿಭಟನೆಗೆ ಇಳಿದ ಮಹಿಳೆಯರನ್ನು ಪೊಲೀಸರು ಬಂಧಿಸಿದರು

ದೇಶದ್ರೋಹ ಆರೋಪದಡಿ ಬಂಧಿತರಾದ ವಿದ್ಯಾರ್ಥಿಗಳು

ದೇಶದ್ರೋಹ ಆರೋಪದಡಿ ಬಂಧಿತರಾದ ವಿದ್ಯಾರ್ಥಿಗಳು

ಜವಾಹರಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅನಂತ್ ಪ್ರಕಾಶ್, ರಾಮನಾಗ, ಮತ್ತು ಅಶುಂತೋಷ್ ಅವರು ದೇಶ ವಿರೋಧಿ ಘೋಷಣೆ ಕೂಗಿದ ಆರೋಪ ಎದುರಿಸುತ್ತಿದ್ದಾರೆ. ದೇಶದ್ರೋಹ ಆರೋಪದ ಮೇಲೆ ಈ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಯುವಜನ ಹಬ್ಬದಲ್ಲಿ ರಾಗಿಣಿ

ಬೆಂಗಳೂರು ಯುವಜನ ಹಬ್ಬದಲ್ಲಿ ರಾಗಿಣಿ

ಸ್ಯಾಂಡಲ್ ವುಡ್ ನಟಿ ರಾಗಿಣಿ ಅವರು ಬೆಂಗಳೂರು ಯುವಜನ ಹಬ್ಬದಲ್ಲಿ ಪಾಲ್ಗೊಂಡು ಸಂತಸ ಪಟ್ಟಿದ್ದು ಹೀಗೆ. ರಾಗಿಣಿಯು ಮಕ್ಕಳ ಸಂಭ್ರಮ ನೋಡಿ ಖುಷಿ ಪಟ್ಟರು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+