Waqf: ವಕ್ಪ್ ತಿದ್ದುಪಡಿ ಮಸೂದೆಗೆ ಜಂಟಿ ಸಂಸದೀಯ ಸಮಿತಿ ಒಪ್ಪಿಗೆ
ವಿಪಕ್ಷಗಳ ವಿರೋಧದ ನಡುವೆಯೂ ವಕ್ಫ್ ತಿದ್ದುಪಡಿ ಮಸೂದೆಗೆ ಜಂಟಿ ಸಂಸದೀಯ ಸಮಿತಿ (JLP) ಸೋಮವಾರ (ಜನವರಿ 27) ಅನುಮೋದನೆ ನೀಡಿದೆ. 2024ರ ಆಗಸ್ಟ್ ತಿಂಗಳಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಕರಡು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ವಿಪಕ್ಷಗಳ ಅಸಮಾಧಾನದ ನಡುವೆಯೂ ಮಸೂದೆ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಸೋಮವಾರ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ನಡೆದ ಸಭೆಯಲ್ಲಿ, ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಎನ್ಡಿಎ ಸದಸ್ಯರು ಮಂಡಿಸಿದ್ದ 14 ತಿದ್ದುಪಡಿಗಳನ್ನು ಜೆಪಿಸಿ ಅಂಗೀಕರಿಸಿದ್ದರೆ, ಜೆಎಲ್ಪಿಯ ವಿಪಕ್ಷಗಳ ಸದಸ್ಯರು ಮಂಡಿಸಿದ ತಿದ್ದುಪಡಿಗಳನ್ನು ತಿರಸ್ಕರಿಸಲಾಗಿದೆ.

ಈ ಮಸೂದೆಯು ದೇಶಾದ್ಯಂತ ಮುಸ್ಲಿಂ ದತ್ತಿ ಆಸ್ತಿಗಳ ನಿರ್ವಹಣೆ ವಿಧಾನದಲ್ಲಿ 44 ಬದಲಾವಣೆಗಳನ್ನು ತರಲಿದೆ. ಧಾರ್ಮಿಕ ಉದ್ದೇಶಗಳಿಗಾಗಿ ವಕ್ಫ್ ಆಸ್ತಿಗಳನ್ನು ಬಳಕೆಯ ನೀತಿಯ ಆಧಾರದ ಮೇಲೆ ಪ್ರಶ್ನಿಸದೇ ಇರುವ ಅಧಿಕಾರವನ್ನು ತೆಗೆದುಹಾಕುತ್ತಿರುವುದು ಮುಸ್ಲಿಂ ಸಮುದಾಯದ ವಿರೋಧಕ್ಕೆ ಕಾರಣವಾಗಿದೆ.
ಮತದಾನದ ಮೂಲಕ ತಿದ್ದುಪಡಿಗೆ ಒಪ್ಪಿಗೆ
ಜಂಟಿ ಸಂಸದೀಯ ಸಮಿತಿಯಲ್ಲಿ ಆಡಳಿತಾರೂಢ ಎನ್ಡಿಎ ದಿಂದ 16 ಸದಸ್ಯರು ಹಾಗೂ ವಿಪಕ್ಷಗಳ 10 ಸದಸ್ಯರು ಭಾಗವಹಿಸಿದ್ದರು. ತಿದ್ದುಪಡಿಗಳ ಅಂಗೀಕಾರ ಕುರಿತ ಸಭೆಯಲ್ಲಿ ಬಹುಮತದ ಆಧಾರದ ಮೇಲೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ. ಆಡಳಿತ ಪಕ್ಷದ ಸದಸ್ಯರು 14 ತಿದ್ದುಪಡಿಗಳನ್ನು ಬಹುಮತದ ಆಧಾರದ ಮೇಲೆ ಸ್ವೀಕರಿಸಿದ್ದರೆ, ವಿಪಕ್ಷಗಳ ಸದಸ್ಯರು ಸೂಚಿಸಿದ್ದ 44 ತಿದ್ದುಪಡಿಗಳನ್ನು ಬಹುಮತ ಕೊರತೆಯಿಂದ ತಿರಸ್ಕರಿಸಲಾಗಿದೆ.
ಏನೇನು ತಿದ್ದುಪಡಿ?
ಕಡ್ಡಾಯವಾಗಿ ಇಬ್ಬರು ಮುಸ್ಲಿಮೇತರ ಸದಸ್ಯರು - ಮಸೂದೆಯ ಮೂಲ ಕರಡಿನಲ್ಲಿ ನಿರ್ದಿಷ್ಟಪಡಿಸಿದಂತೆ - ಮತ್ತು ನಾಮನಿರ್ದೇಶಿತ ಎಕ್ಸ್-ಆಫಿಸಿಯೊ ಸದಸ್ಯರು (ಮುಸ್ಲಿಂ ಅಥವಾ ಮುಸ್ಲಿಮೇತರರು) ನಡುವೆ ವ್ಯತ್ಯಾಸವನ್ನು ಗುರುತಿಸುವುದು. ರಾಜ್ಯ ಅಥವಾ ದೇಶದ ಮಟ್ಟದಲ್ಲಿ ವಕ್ಫ್ ಮಂಡಳಿಗಳು ಕನಿಷ್ಠ ಇಬ್ಬರು ಮತ್ತು ಹೆಚ್ಚು ಇಸ್ಲಾಂ ಬಗ್ಗೆ ನಂಬಿಕೆಯಿಂದಲ್ಲದ ಸದಸ್ಯರನ್ನು ಹೊಂದಿರಲು ಅವಕಾಶ ನೀಡುತ್ತದೆ.
ಆಸ್ತಿ 'ವಕ್ಫ್' ಆಗಿದೆಯೇ ಎಂದು ನಿರ್ಧರಿಸಲು ಸಂಬಂಧಪಟ್ಟ ರಾಜ್ಯದಿಂದ ನಾಮನಿರ್ದೇಶಿತ ಅಧಿಕಾರಿಗೆ ನಿರ್ದೇಶಿಸುವುದು. ಮೂಲ ಕರಡಿನಲ್ಲಿ ಈ ನಿರ್ಧಾರವನ್ನು ಜಿಲ್ಲಾಧಿಕಾರಿಗೆ ಬಿಡಲಾಗಿತ್ತು.
ಮೂರನೇ ಪ್ರಮುಖ ಬದಲಾವಣೆ ಎಂದರೆ ಪ್ರಶ್ನಾರ್ಹ ಆಸ್ತಿಯನ್ನು ಈಗಾಗಲೇ ನೋಂದಾಯಿಸಿರುವವರೆಗೆ ಹಿಂದಿನ ಕಾನೂನು ಅನ್ವಯಿಸಲ್ಲ. ವಕ್ಫ್ನ 90% ಆಸ್ತಿಗಳು ನೋಂದಾಯಿಸಿಲ್ಲದ ಕಾರಣ ಕಾಂಗ್ರೆಸ್ ನಾಯಕ ಮತ್ತು ಜೆಪಿಸಿ ಸದಸ್ಯ ಇಮ್ರಾನ್ ಮಸೂದ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
14 ಬದಲಾವಣೆಗಳನ್ನು ಅಂಗೀಕರಿಸುವ ಮತದಾನ ಜನವರಿ 29 ರಂದು ನಡೆಯಲಿದ್ದು, ಅಂತಿಮ ವರದಿಯನ್ನು ಜನವರಿ 31 ರೊಳಗೆ ಸಲ್ಲಿಸಲಾಗುವುದು ಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications