Waqf: ವಕ್ಪ್ ತಿದ್ದುಪಡಿ ಮಸೂದೆಗೆ ಜಂಟಿ ಸಂಸದೀಯ ಸಮಿತಿ ಒಪ್ಪಿಗೆ
ವಿಪಕ್ಷಗಳ ವಿರೋಧದ ನಡುವೆಯೂ ವಕ್ಫ್ ತಿದ್ದುಪಡಿ ಮಸೂದೆಗೆ ಜಂಟಿ ಸಂಸದೀಯ ಸಮಿತಿ (JLP) ಸೋಮವಾರ (ಜನವರಿ 27) ಅನುಮೋದನೆ ನೀಡಿದೆ. 2024ರ ಆಗಸ್ಟ್ ತಿಂಗಳಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಕರಡು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ವಿಪಕ್ಷಗಳ ಅಸಮಾಧಾನದ ನಡುವೆಯೂ ಮಸೂದೆ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಸೋಮವಾರ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ನಡೆದ ಸಭೆಯಲ್ಲಿ, ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಎನ್ಡಿಎ ಸದಸ್ಯರು ಮಂಡಿಸಿದ್ದ 14 ತಿದ್ದುಪಡಿಗಳನ್ನು ಜೆಪಿಸಿ ಅಂಗೀಕರಿಸಿದ್ದರೆ, ಜೆಎಲ್ಪಿಯ ವಿಪಕ್ಷಗಳ ಸದಸ್ಯರು ಮಂಡಿಸಿದ ತಿದ್ದುಪಡಿಗಳನ್ನು ತಿರಸ್ಕರಿಸಲಾಗಿದೆ.

ಈ ಮಸೂದೆಯು ದೇಶಾದ್ಯಂತ ಮುಸ್ಲಿಂ ದತ್ತಿ ಆಸ್ತಿಗಳ ನಿರ್ವಹಣೆ ವಿಧಾನದಲ್ಲಿ 44 ಬದಲಾವಣೆಗಳನ್ನು ತರಲಿದೆ. ಧಾರ್ಮಿಕ ಉದ್ದೇಶಗಳಿಗಾಗಿ ವಕ್ಫ್ ಆಸ್ತಿಗಳನ್ನು ಬಳಕೆಯ ನೀತಿಯ ಆಧಾರದ ಮೇಲೆ ಪ್ರಶ್ನಿಸದೇ ಇರುವ ಅಧಿಕಾರವನ್ನು ತೆಗೆದುಹಾಕುತ್ತಿರುವುದು ಮುಸ್ಲಿಂ ಸಮುದಾಯದ ವಿರೋಧಕ್ಕೆ ಕಾರಣವಾಗಿದೆ.
ಮತದಾನದ ಮೂಲಕ ತಿದ್ದುಪಡಿಗೆ ಒಪ್ಪಿಗೆ
ಜಂಟಿ ಸಂಸದೀಯ ಸಮಿತಿಯಲ್ಲಿ ಆಡಳಿತಾರೂಢ ಎನ್ಡಿಎ ದಿಂದ 16 ಸದಸ್ಯರು ಹಾಗೂ ವಿಪಕ್ಷಗಳ 10 ಸದಸ್ಯರು ಭಾಗವಹಿಸಿದ್ದರು. ತಿದ್ದುಪಡಿಗಳ ಅಂಗೀಕಾರ ಕುರಿತ ಸಭೆಯಲ್ಲಿ ಬಹುಮತದ ಆಧಾರದ ಮೇಲೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ. ಆಡಳಿತ ಪಕ್ಷದ ಸದಸ್ಯರು 14 ತಿದ್ದುಪಡಿಗಳನ್ನು ಬಹುಮತದ ಆಧಾರದ ಮೇಲೆ ಸ್ವೀಕರಿಸಿದ್ದರೆ, ವಿಪಕ್ಷಗಳ ಸದಸ್ಯರು ಸೂಚಿಸಿದ್ದ 44 ತಿದ್ದುಪಡಿಗಳನ್ನು ಬಹುಮತ ಕೊರತೆಯಿಂದ ತಿರಸ್ಕರಿಸಲಾಗಿದೆ.
ಏನೇನು ತಿದ್ದುಪಡಿ?
ಕಡ್ಡಾಯವಾಗಿ ಇಬ್ಬರು ಮುಸ್ಲಿಮೇತರ ಸದಸ್ಯರು - ಮಸೂದೆಯ ಮೂಲ ಕರಡಿನಲ್ಲಿ ನಿರ್ದಿಷ್ಟಪಡಿಸಿದಂತೆ - ಮತ್ತು ನಾಮನಿರ್ದೇಶಿತ ಎಕ್ಸ್-ಆಫಿಸಿಯೊ ಸದಸ್ಯರು (ಮುಸ್ಲಿಂ ಅಥವಾ ಮುಸ್ಲಿಮೇತರರು) ನಡುವೆ ವ್ಯತ್ಯಾಸವನ್ನು ಗುರುತಿಸುವುದು. ರಾಜ್ಯ ಅಥವಾ ದೇಶದ ಮಟ್ಟದಲ್ಲಿ ವಕ್ಫ್ ಮಂಡಳಿಗಳು ಕನಿಷ್ಠ ಇಬ್ಬರು ಮತ್ತು ಹೆಚ್ಚು ಇಸ್ಲಾಂ ಬಗ್ಗೆ ನಂಬಿಕೆಯಿಂದಲ್ಲದ ಸದಸ್ಯರನ್ನು ಹೊಂದಿರಲು ಅವಕಾಶ ನೀಡುತ್ತದೆ.
ಆಸ್ತಿ 'ವಕ್ಫ್' ಆಗಿದೆಯೇ ಎಂದು ನಿರ್ಧರಿಸಲು ಸಂಬಂಧಪಟ್ಟ ರಾಜ್ಯದಿಂದ ನಾಮನಿರ್ದೇಶಿತ ಅಧಿಕಾರಿಗೆ ನಿರ್ದೇಶಿಸುವುದು. ಮೂಲ ಕರಡಿನಲ್ಲಿ ಈ ನಿರ್ಧಾರವನ್ನು ಜಿಲ್ಲಾಧಿಕಾರಿಗೆ ಬಿಡಲಾಗಿತ್ತು.
ಮೂರನೇ ಪ್ರಮುಖ ಬದಲಾವಣೆ ಎಂದರೆ ಪ್ರಶ್ನಾರ್ಹ ಆಸ್ತಿಯನ್ನು ಈಗಾಗಲೇ ನೋಂದಾಯಿಸಿರುವವರೆಗೆ ಹಿಂದಿನ ಕಾನೂನು ಅನ್ವಯಿಸಲ್ಲ. ವಕ್ಫ್ನ 90% ಆಸ್ತಿಗಳು ನೋಂದಾಯಿಸಿಲ್ಲದ ಕಾರಣ ಕಾಂಗ್ರೆಸ್ ನಾಯಕ ಮತ್ತು ಜೆಪಿಸಿ ಸದಸ್ಯ ಇಮ್ರಾನ್ ಮಸೂದ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
14 ಬದಲಾವಣೆಗಳನ್ನು ಅಂಗೀಕರಿಸುವ ಮತದಾನ ಜನವರಿ 29 ರಂದು ನಡೆಯಲಿದ್ದು, ಅಂತಿಮ ವರದಿಯನ್ನು ಜನವರಿ 31 ರೊಳಗೆ ಸಲ್ಲಿಸಲಾಗುವುದು ಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications