ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ; ಮೂವರು ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ಹಲ್ಲೆ

ಕೇರಳದಲ್ಲಿ ಮತ್ತೆ ಆರ್‍ಎಸ್‍ಎಸ್-ಸಿಪಿಐಎಂ ನಡುವೆ ಸಂಘರ್ಷ ಭುಗಿಲೆದ್ದಿದೆ. ಕೋಯಿಕ್ಕೋಡಿನಲ್ಲಿ ಮೂವರು ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ಹರಿತ ಆಯುಧಗಳಿಂದ ದಾಳಿ ನಡೆಸಿದ್ದು ಸಿಪಿಎಂ ಕಾರ್ಯಕರ್ತರೇ ನಡೆಸಿದ್ದಾರೆ ಎಂದು ಕೊಳ್ಳಲಾಗಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಕೋಝಿಕ್ಕೋಡ್, ಮಾರ್ಚ್ 5: ಕೇರಳದಲ್ಲಿ ಮತ್ತೆ ಆರ್‍ಎಸ್‍ಎಸ್-ಸಿಪಿಐಎಂ ನಡುವೆ ಸಂಘರ್ಷ ಭುಗಿಲೆದ್ದಿದೆ. ಕೋಯಿಕ್ಕೋಡಿನಲ್ಲಿ ಮೂವರು ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ಹರಿತ ಆಯುಧಗಳಿಂದ ದಾಳಿ ನಡೆಸಿದ್ದು ಸಿಪಿಎಂ ಕಾರ್ಯಕರ್ತರೇ ನಡೆಸಿದ್ದಾರೆ ಎಂದು ಕೊಳ್ಳಲಾಗಿದೆ.

ಘಟನೆಯಲ್ಲಿ ಮೂವರು ಸಂಘ ಪರಿವಾರದ ಮಂದಿಗೆ ಗಾಯವಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಶುಕ್ರವಾರ ಮೂವರು ಡಿವೈಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.[ಕೇರಳ: ಆರ್ ಎಸ್ಎಸ್ ಕಛೇರಿ ಬಳಿ ಬಾಂಬ್ ಸ್ಫೋಟ; ನಾಲ್ವರಿಗೆ ಗಾಯ]

RSS workers attacked by CPM men in Kerala

ಇನ್ನು ಗುರುವಾರ ರಾತ್ರಿ ಇದೇ ಕೋಯಿಕ್ಕೋಡ್ ನಲ್ಲಿ ಆರ್.ಎಸ್.ಎಸ್ ಕಚೇರಿಯ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿತ್ತು. ಘಟನೆಯಲ್ಲಿ 4 ಜನ ಗಾಯಗೊಂಡಿದ್ದರು.[ಕೇರಳ ರಾಜಕೀಯ ಸಂಘರ್ಷ: ಡಿವೈಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆ]

ಹಿಂದಿನಿದಂಲೂ ಕೇರಳಲದಲ್ಲಿ ಆರ್.ಎಸ್.ಎಸ್ ಮತ್ತು ಸಿಪಿಎಂ ನಡುವೆ ನಡೆಯುತ್ತಿದ್ದ ಸೈದ್ಧಾಂತಿಕ ಸಂಘರ್ಷ ಸದ್ಯ ಹಿಂಸೆಯ ರೂಪವನ್ನು ಪಡೆದುಕೊಂಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ದಿನಂಪ್ರತಿ ಒಂದಲ್ಲ ಒಂದು ಹಲ್ಲೆ ಕೊಲೆಯ ಘಟನೆಗಳು ಬೆಳಕಿಗೆ ಬರುತ್ತಿವೆ.

English summary
Three RSS men were attacked allegedly by a group of CPM workers in Kozhikode, Kerala. The police said that the three men were attacked with sharp weapons by the CPM men.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X