Piyush Pandey: ಪಿಯೂಷ್ ನಿಧನ, ಭಾರತೀಯ ಜಾಹೀರಾತು ಕ್ಷೇತ್ರಕ್ಕೆ ತುಂಬಲಾರದ ನಷ್ಟ
ಭಾರತೀಯ ಜಾಹೀರಾತು ಕ್ಷೇತ್ರ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರನ್ನು ಕಳೆದುಕೊಂಡು, ಅದೇ ನೋವಿನಲ್ಲಿ ದಿನಕಳೆಯುತ್ತಿದೆ. ಭಾರತೀಯ ಜಾಹೀರಾತು ಕ್ಷೇತ್ರಕ್ಕೆ ಹೊಸ ರೂಪ ನೀಡಿದ್ದವರು ಪಿಯೂಷ್ ಪಾಂಡೆ, ಭಾರತೀಯ ಸಂವಹನದ ಭಾಷೆ, ಹೃದಯ ಮತ್ತು ಹಾಸ್ಯದ ಸ್ವರೂಪವನ್ನೇ ಬದಲಿಸಿದ ವ್ಯಕ್ತಿ ಆಗಿದ್ದರು. ಆದರೆ 2025 ಅಕ್ಟೋಬರ್ 24 ಅಂದರೆ ಕಳೆದ ಶುಕ್ರವಾರ ಪಿಯೂಷ್ ಪಾಂಡೆ ಅವರು ನಿಧನರಾದರು. ಪೀಳಿಗೆಯಿಂದ ಪೀಳಿಗೆಗೆ ಸೃಜನಾತ್ಮಕ ಚಿಂತನೆಗೆ ಪ್ರೇರಣೆ ಆಗಿದ್ದ ಪರಂಪರೆಯನ್ನು ಅವರು ತಮ್ಮೊಡನೆ ಕೊಂಡೊಯ್ದರು.
ಪಿಯೂಷ್ ಪಾಂಡೆ ಅವರು ಜಾಹೀರಾತು ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುವ ಜೊತೆಗೆ ಒಗಿಲ್ವಿ ಇಂಡಿಯಾ ಸಂಸ್ಥೆ ಹೆಸರನ್ನ ಕೂಡ ಉತ್ತುಂಗಕ್ಕೆ ಏರಿಸಿ, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದರು. ಒಗಿಲ್ವಿ ಇಂಡಿಯಾದ ಮಾಜಿ ಚೀಫ್ ಕ್ರಿಯೇಟಿವ್ ಆಫೀಸರ್ (ವಿಶ್ವಮಟ್ಟದ) ಹಾಗೂ ಎಕ್ಸಿಕ್ಯುಟಿವ್ ಚೇರ್ಮನ್ ಆಗಿ, ಪಿಯೂಷ್ ಪಾಂಡೆ ಅವರು ಈ ಏಜೆನ್ಸಿಯನ್ನು ಭಾರತದ ಅಗ್ರಗಣ್ಯ ಕ್ರಿಯೇಟಿವ್ ಶಕ್ತಿಕೇಂದ್ರವಾಗಿ ರೂಪಿಸಿದ್ದರು. ಕಳೆದ 4 ದಶಕಗಳಿಗಿಂತ ಹೆಚ್ಚು ಕಾಲದ ತಮ್ಮ ವೃತ್ತಿ ಜೀವನದಲ್ಲಿ, ಸಾವಿರಕ್ಕೂ ಹೆಚ್ಚು ಪ್ರಶಸ್ತಿ ಗಳಿಸಿದರು. ಈ ಪಟ್ಟಿಯಲ್ಲಿ ಕ್ಯಾನ್ಸ್ ಲಯನ್ಸ್ & ಅಬ್ಬೀಸ್ ಒಳಗೊಂಡಿವೆ ಎಂಬುದು ಹೆಮ್ಮೆಯ ವಿಚಾರ. ಕ್ರಿಯೇಟಿವಿಟಿ ಕ್ಷೇತ್ರದ ಕ್ಯಾನ್ಸ್ ಲಯನ್ಸ್ ಉತ್ಸವದಲ್ಲಿ ಏಷ್ಯಾದಿಂದ ಮೊದಲ ಜ್ಯೂರಿ ಅಧ್ಯಕ್ಷರಾಗಿ ಆಯ್ಕೆ ಆಗುವುದರ ಮೂಲಕ ಅವರು ಇತಿಹಾಸ ನಿರ್ಮಿಸಿದರು. ಇದು ಅವರ ಜಾಗತಿಕ ಪ್ರಭಾವದ ಸಾಕ್ಷಿಯಾಗಿದೆ.

ಪ್ರಶಸ್ತಿಗಿಂತ ಹೆಚ್ಚಾಗಿ, ಪಾಂಡೆ ಅವರ ಅತ್ಯಂತ ದೊಡ್ಡ ಕೊಡುಗೆ ಎಂದರೆ ಅವರು ಭಾರತವನ್ನು ಅದರದೇ ಶಬ್ದದೊಂದಿಗೆ ಪ್ರೇಮಿಸಲು ಕೋಟ್ಯಂತರ ಜನರಿಗೆ ಕಲಿಸಿದ್ದರು. ಈ ವಿಚಾರವು ಅತ್ಯಂತ ಸ್ಮರಣೀಯ ಎನ್ನಬಹುದು.
ಅದರಲ್ಲೂ ಹಿಂದಿ ಭಾಷೆಯನ್ನು, ಜಾಹೀರಾತು ಚಲನಚಿತ್ರಗಳಲ್ಲಿ & ಟ್ಯಾಗ್ಲೈನ್ಗಳ ಮೂಲಕ ಪೇಮಸ್ ಮಾಡಿದ್ದರು. ಅವರು ಪಾಶ್ಚಾತ್ಯ ಪ್ರಭಾವಗಳಿಂದ ದೂರ ಸರಿದು, ಸೃಜನಾತ್ಮಕತೆಯನ್ನು ಭಾರತೀಯ ದೈನಂದಿನ ಜೀವನದ ಸರಳತೆಯೊಂದಿಗೆ ಜೋಡಿಸಿದರು. ಫೆವಿಕೋಲ್ ಜಾಹೀರಾತು ಆಗಿದ್ದ, ಅಂಟುತ್ತಾ? ಹಾಸ್ಯದಿಂದ ಹಿಡಿದು ಕ್ಯಾಡ್ಬರಿ ಡೈರಿ ಮಿಲ್ಕ್ ಹೃದಯಸ್ಪರ್ಶಿ "ಕುಚ್ ಖಾಸ್ ಹೇ ಜಿಂದಗಿ ಮೇನ್" ತನಕವು ಪಾಂಡೆ ಅವರ ಕೆಲಸ ಭಾರತದ ಸಮೂಹ ಸ್ಮೃತಿಯ ಭಾಗವಾಯಿತು ಎನ್ನಬಹುದು.
'ಅವರು ಸಾಂಸ್ಕೃತಿಕ ಮೈಲುಗಲ್ಲು ನಿರ್ಮಿಸಿದರು'
ಅಂದಹಾಗೆ ವಿಜ್ಕ್ರಾಫ್ಟ್ ಇಂಟರ್ನ್ಯಾಷನಲ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಸಹ-ಸ್ಥಾಪಕರಾದ ಆಂಡ್ರೆ ಟಿಮ್ಮಿನ್ಸ್ ಅವರು ಪಿಯೂಷ್ ಪಾಂಡೆ ಅವರ ಅಗಲಿಕೆಗೆ ಸಂತಾಪ ಸೂಚಿಸುತ್ತಾ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.
'ಇಂದು, ನಾವು ಪಿಯೂಷ್ ಪಾಂಡೆ ಅವರ ಜೀವನ & ಪರಂಪರೆಯನ್ನು ಗೌರವಿಸುತ್ತೇವೆ. ಅವರ ಸೃಜನಾತ್ಮಕ ಶಕ್ತಿ ಪೀಳಿಗೆಯಿಂದ ಪೀಳಿಗೆ ಪ್ರತಿಧ್ವನಿಸುತ್ತಲೇ ಇರುತ್ತದೆ.
ಅವರು ಜಾಹೀರಾತುಗಳನ್ನ ಮಾತ್ರ ಮಾಡಲಿಲ್ಲ, ಸಾಂಸ್ಕೃತಿಕ ಮೈಲುಗಲ್ಲು ಕೂಡ ನಿರ್ಮಿಸಿದರು. ಅವರ ಸೃಜನಾತ್ಮಕ ಭಾಷೆ ಪ್ರತಿ ಭಾರತೀಯರ ಜೀವನದಲ್ಲಿ ನೆಲೆಗೊಂಡಿತ್ತು. ಸರಳ, ಪ್ರಾಮಾಣಿಕ, ಹಾಸ್ಯಾಸ್ಪದ, ಆಳವಾದ ಮಾನವೀಯತೆಯುತ...
ಅವರು ಕೇವಲ ಶ್ರೇಷ್ಠ ಅಭಿಯಾನಗಳನ್ನು ಮಾತ್ರವಲ್ಲ, ಜನಪ್ರಿಯ ಸಂಸ್ಕೃತಿ ರೂಪವನ್ನ ನೀಡಿದ ಕೆಲಸಗಳನ್ನೂ ಮತ್ತು ಆ ಉದಾಹರಣೆಯಿಂದ ದಾರಿತೋರಿಸಲ್ಪಟ್ಟ ಸೃಜನಶೀಲರ ಪೀಳಿಗೆಯನ್ನೂ ಹಿಂದಿಟ್ಟು ಹೋಗಿದ್ದಾರೆ.'
- ಆಂಡ್ರೆ ಟಿಮ್ಮಿನ್ಸ್, ಸಹ-ಸ್ಥಾಪಕ, ವಿಜ್ಕ್ರಾಫ್ಟ್ ಇಂಟರ್ನ್ಯಾಷನಲ್ ಎಂಟರ್ಟೈನ್ಮೆಂಟ್
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications