ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ಇಲಿಗಳ ಕಾಟ: ಎಎಸ್‌ಐ ಸಹಾಯ ಕೇಳಿದ ನಿದ್ದೆಗೆಟ್ಟ ಅರ್ಚಕರು

ಪುರಿ ಜೂನ್ 24: ಜಗನ್ನಾಥ ಪುರಿ ದೇಗುಲದಲ್ಲಿ ಇಲಿಗಳು ಭಯ ಹುಟ್ಟಿಸಿವೆ. ದೇವಸ್ಥಾನದ ಆಡಳಿತ ಮಂಡಳಿ ನಿದ್ದೆಯಿಲ್ಲದೆ ರಾತ್ರಿ ಕಳೆಯುತ್ತಿದೆ. ಇತ್ತೀಚಿಗೆ ಈ ಇಲಿಗಳು ಭಗವಾನ್ ಬಲಭದ್ರ ಮತ್ತು ಸುಭದ್ರ ದೇವಿಯ ಬಟ್ಟೆಗಳನ್ನು ಕಚ್ಚಿ ಹಾಕಿವೆ. ಈಗ ಮರದಿಂದ ಮಾಡಿದ ದೇವತೆಗಳ ವಿಗ್ರಹಗಳಿಗೂ ಹಾನಿ ಮಾಡಬಹುದೆಂಬ ಭಯ ಕಾಡುತ್ತಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಸೋಮವಾರ ದೇವಾಲಯದಲ್ಲಿ ಆಚರಣೆ ಪ್ರಾರಂಭವಾಗಲಿದೆ. ಮುಖ್ಯ ವಿಧಿಗಳನ್ನು ನೆರವೇರಿಸಲು ತಂದಿದ್ದ ದೇವತೆಗ ಬಟ್ಟೆಗಳನ್ನು ಇಲಿಗಳು ಹಾಳು ಮಾಡಿವೆ. ಜೊತೆಗೆ ಮಾಲೆಗಳನ್ನು ಕಚ್ಚಿ ಹಾಕಿವೆ.

Rats Terro in puri jagannath temple priests are having sleepless nights help sought from asi to catch rats

ದೇವಾಲಯದ ಗರ್ಭಗುಡಿಯಲ್ಲಿಯೂ ಇಲಿಗಳು ಕೊಳಕನ್ನು ಹರಡುತ್ತಿವೆ. ಇಲಿ, ಕೋತಿ, ಪಾರಿವಾಳಗಳ ಕಾಟಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಇತ್ತೀಚೆಗೆ ವಿಭಿನ್ನ ವಿಧಾನ ಅನುಸರಿಸಿತ್ತು. ಇಲಿ, ಕೋತಿ, ಪಾರಿವಾಳಗಳನ್ನು ಓಡಿಸಲು ಶಬ್ದ ಬಳಸಿ ಭಕ್ತರೊಬ್ಬರು ನೀಡಿದ ಯಂತ್ರವನ್ನು ಅಳವಡಿಸಿದ್ದರು. ಆದರೆ ಈ ಶಬ್ದ ಭಗವಾನ್ ಬಲಭದ್ರ ಮತ್ತು ಸುಭದ್ರಾ ದೇವಿಯ ನಿದ್ರೆಯನ್ನು ಕೆಡಿಸುತ್ತದೆ ಎಂದು ಸೇವಾದಾರರು ಹೇಳಿದರು. ನಂತರ ಈ ಯಂತ್ರವನ್ನು ತೆಗೆದುಹಾಕಲಾಯಿತು.

ವರದಿಗಳ ಪ್ರಕಾರ, ಸೋಮವಾರದ ಧಾರ್ಮಿಕ ಕ್ರಿಯೆ ದೇವಾಲಯದಲ್ಲಿ ನಡೆಯಲಿದೆ. ಇದಕ್ಕಾಗಿ ವಿನಾಯಕನಿಗೆ ಹಾಗೂ ದೇವತೆಗಳ ಮೂರ್ತಿ ನಿರ್ಮಾಣಕ್ಕೆ ಮರದ ದೇಹ ತರಲಾಗಿತ್ತು. ಇದಕ್ಕೆ ಯಾವುದೇ ಹಾನಿಯಾಗಿಲ್ಲ. ಆದರೆ ಇಲಿಗಳು ದೇವತೆಗಳ ಉಡುಗೆ, ಹೂವುಗಳು ಮತ್ತು ತುಳಸಿ ಎಲೆಗಳನ್ನು ಹಾನಿಗೊಳಿಸಿವೆ.

Rats Terro in puri jagannath temple priests are having sleepless nights help sought from asi to catch rats

ಸಾಮಾನ್ಯವಾಗಿ ದೇವಾಲಯ ರಾತ್ರಿ ಮುಚ್ಚಿದ ನಂತರ ಇಲಿಗಳ ಕಾಟ ಹೆಚ್ಚಾಗುತ್ತದೆ. ಇವು ಸಾಮಾನ್ಯವಾಗಿ ಪವಿತ್ರ ಬಲಿಪೀಠದ ಮೇಲೆ ಅಡಗಿಕೊಳ್ಳುತ್ತದೆ. ಮಾತ್ರವಲ್ಲದೆ ಗಲಾಟೆಯನ್ನು ಸೃಷ್ಟಿಸುತ್ತವೆ. ಇವುಗಳ ಕಾಟದಿಂದಾಗಿ ದೇವಸ್ತಾನದ ಅರ್ಚಕರು ಬೇಸತ್ತು ಹೋಗಿದ್ದಾರೆ. ರಾತ್ರಿಯಲ್ಲಾ ನಿದ್ದೆಗೆಟ್ಟು ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಮಾತನಾಡಿದ ಸೇವಕ ರಾಮಚಂದ್ರ ದಶಮೋಹಪಾತ್ರ, ಈ ಅನಾಹುತವನ್ನು ತಡೆಯಲು ದೇವಾಲಯದ ಆಡಳಿತ ಮಂಡಳಿಗೆ ನಾವು ತಕ್ಷಣ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ದೇವತೆಗಳನ್ನು ನಿಯಮಿತವಾಗಿ ಶ್ರೀಗಂಧ ಮತ್ತು ಕರ್ಪೂರದಿಂದ ಪಾಲಿಶ್ ಮಾಡಲಾಗುತ್ತಿದೆ ಎಂದು ಹೇಳಿದರು.

ಒಡಿಶಾದ ಈ ಅತ್ಯಂತ ಜನಪ್ರಿಯ ಧಾರ್ಮಿಕ ಸ್ಥಳವನ್ನು ನಿರ್ವಹಿಸುವ ಮತ್ತು ನೋಡಿಕೊಳ್ಳುವ ಭಾರತೀಯ ಪುರಾತತ್ವ ಸಮೀಕ್ಷೆಯ (ಎಎಸ್‌ಐ) ಮಧ್ಯಸ್ಥಿಕೆಗೆ ಕರೆ ನೀಡಿದ ದಾಸಮೋಹಪಾತ್ರ ಇಲಿಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ದೇವಾಲಯದ ಆಡಳಿತ ಮತ್ತು ಎಎಸ್‌ಐನ ಸಂಘಟಿತ ಪ್ರಯತ್ನಗಳ ಅಗತ್ಯವಿದೆ ಎಂದು ಹೇಳಿದರು. ಇದರಿಂದ ವಾರ್ಷಿಕ ರಥಯಾತ್ರೆ ಆರಂಭಕ್ಕೂ ಮುನ್ನ ದೇವಾಲಯವನ್ನು ಇಲಿಗಳಿಂದ ಮುಕ್ತಗೊಳಿಸಬಹುದಾಗಿದೆ.

Rats Terro in puri jagannath temple priests are having sleepless nights help sought from asi to catch rats

ಜಗನ್ನಾಥ ರಥಯಾತ್ರೆಯು ಜೂನ್ 20 ರಿಂದ ಪ್ರಾರಂಭವಾಗಲಿದೆ. ಕೆಲ ದಿನ ಅಂದರೆ ಬುಧವಾರ 28 ಜೂನ್, ಜಗನ್ನಾಥ ರಥಯಾತ್ರೆ ಹಿಂತಿರುಗುತ್ತದೆ. ಈ ಎಂಟು ದಿನಗಳ ರಥಯಾತ್ರೆಯ ಸಮಯದಲ್ಲಿ, ಬಲಭದ್ರ ದೇವರು ಮತ್ತು ಸುಭದ್ರಾ ದೇವಿಯನ್ನು ಅವರ ತಾಯಿಯ ಚಿಕ್ಕಮ್ಮನ ಮನೆಯಲ್ಲಿ ಗುಂಡಿಚಾ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ.

ಪುರಿ ದೇವಸ್ಥಾನದಲ್ಲಿ ಇಲಿಗಳ ಕಾಟ ಹೊಸದೇನಲ್ಲ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸುಮಾರು 2 ವರ್ಷಗಳ ಕಾಲ ದೇವಾಲಯವನ್ನು ಮುಚ್ಚಲಾಗಿತ್ತು. ಈ ಸಮಯದಲ್ಲಿ ಇಲಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಜಗನ್ನಾಥ ಪುರಿ ದೇವಸ್ಥಾನವು ತನ್ನದೇ ಆದ ನಿಯಮವನ್ನು ಹೊಂದಿದೆ. ಇದನ್ನು ರೆಕಾರ್ಡ್ ಆಫ್ ರೈಟ್ಸ್ ಎಂದು ಕರೆಯಲಾಗುತ್ತದೆ. ಈ ನಿಯಮ ಪುಸ್ತಕದಲ್ಲಿ ಆಚರಣೆಗಳು, ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ವಿವರಿಸಲಾಗಿದೆ.

ಇದು ಇಲಿಗಳು, ಮಂಗಗಳು ಮತ್ತು ಪಾರಿವಾಳಗಳಂತಹ ಇತರ ಪ್ರಾಣಿಗಳ ಬೆದರಿಕೆಗಳೊಂದಿಗೆ ವ್ಯವಹರಿಸುವ ನಿಯಮಗಳನ್ನು ಹೊಂದಿದೆ. ದೇವಾಲಯದ ನಿಯಮಪುಸ್ತಕವು ಇಲಿಗಳನ್ನು ಕೊಲ್ಲುವುದನ್ನು ನಿಷೇಧಿಸುತ್ತದೆ, ಆದ್ದರಿಂದ ಆಡಳಿತವು ಅವುಗಳನ್ನು ಜೀವಂತವಾಗಿ ಹಿಡಿಯಲು ಬಲೆಗಳನ್ನು ಹೊಂದಿಸುತ್ತದೆ ಮತ್ತು ನಂತರ ಅವುಗಳನ್ನು ದೇವಾಲಯದ ಆವರಣದ ಹೊರಗೆ ಬಿಡಲು ಪ್ರಯತ್ನಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+