ಈತನಿಗಿತ್ತು ನಾಲ್ಕರ ಬದಲು ಐದು ಹೃದಯ ಕವಾಟ
ಜೋಧಪುರ, ಸೆ. 26 : ಹಾರ್ಟ್ ಆಪರೇಷನ್ ಆಧುನಿಕ ಯುಗದಲ್ಲಿ ಸಾಮಾನ್ಯವೆನಿಸಿದ್ದರೂ ಜೋಧಪುರದ ವೈದ್ಯರು ಮಾಡಿರುವ ಆಪರೇಷನ್ ಅಂತಿಂಥದ್ದಲ್ಲ. ನಾಲ್ಕರ ಬದಲು ಐದು ಕವಾಟವಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಸಾಮಾನ್ಯ ವ್ಯಕ್ತಿಯ ಹೃದಯದಲ್ಲಿ ನಾಲ್ಕು ಕವಾಟಗಳಿರುತ್ತವೆ. ಆದರೆ 42 ವರ್ಷದ ಪಾಲಿ ದೇವರಂ ಹೃದಯದಲ್ಲಿ ಐದು ಕವಾಟಗಳಿದ್ದವು. ಇದರಿಂದ ಉಸಿರಾಟ ತೊಂದರೆ, ಕಫ ಸಮಸ್ಯೆ ಮತ್ತು ಹೃದಯದ ನೋವು ಅನುಭವಿಸುತ್ತಿದ್ದರು.(ಭಾರತದಲ್ಲಿ ಹೃದಯ ಚಿಕಿತ್ಸೆ ಅಮೆರಿಕಕ್ಕಿಂತಲೂ ದುಬಾರಿ)

ಕಳೆದ ಎರಡು ತಿಂಗಳಿಂದ ಸಮಸ್ಯೆ ಮತ್ತಷ್ಟು ತೀವ್ರಗೊಂಡಿದ್ದು ಹಲವು ಪರೀಕ್ಷೆ ನಡೆಸಿದರೂ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಆದರೆ ಜೋಧಪುರದ ಮೇಡಿಪಲ್ಸ್ ಆಸ್ಪತ್ರೆ ವೈದ್ಯರು ತಪಾಸಣೆ ನಡೆಸಿದ ವೇಳೆ ಹೃದಯಯದಲ್ಲಿ ನಾಲ್ಕರ ಬದಲು ಐದು ಕವಾಟಗಳಿರುವುದು ಪತ್ತೆಯಾಗಿದೆ. ನಾಲ್ಕನೇ ಕವಾಟದ ಮೇಲ್ಘಾಗದಲ್ಲಿ ಪೊರೆಯೊಂದು ಬೆಳೆದು ಐದನೇ ಕವಾಟದಂತೆ ರೂಪುಗೊಂಡಿತ್ತು.
ಸಮಸ್ಯೆ ಪತ್ತೆಯಾದ ನಂತರ ಕಾರ್ಯನಿರತರಾದ ವೈದ್ಯರು ಪೊರೆಯನ್ನು ತೆಗೆದು ಹೃದಯವನ್ನು ಸುಸ್ಥಿತಿಗೆ ತಂದಿದ್ದಾರೆ. ಭಾರತಲ್ಲೇ ಈ ರೀತಿಯ ಆಪರೇಷನ್ ಇದೇ ಮೊದಲಾಗಿದ್ದು ಈ ಹಿಂದೆ ಜರ್ಮನಿ ಮತ್ತಿ ಚೀನಾದಲ್ಲಿ ಮಾತ್ರ ನಡೆಸಲಾಗಿತ್ತು.(ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿದ ಜೀವಂತ ಹೃದಯ!)
ಅನೇಕ ವೈದ್ಯರು ಮತ್ತು ಆಸ್ಪತರೆಗೆ ತೋರಿಸಿದರೂ ರೋಗ ಪತ್ತೆಯಾಗಿರಲಿಲ್ಲ. ಪಾಲಿ ದೇವರಂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಇನ್ನು ಮುಂದೆ ಅವರು ಸಾಮಾನ್ಯರಂತೆ ಜೀವಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ 1.25 ಲಕ್ಷ ರೂ. ವೆಚ್ಚ ತಗುಲಿದೆ ಎಂದು ದೇವಿರಂ ಸಂಬಂಧಿ ದಿನೇಶ್ ಹೇಳಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications