ರಾಮ ಮಂದಿರ ಬಿಕ್ಕಟ್ಟು: ರವಿಶಂಕರ್-ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ಭೇಟಿ
ಬೆಂಗಳೂರು, ಅಕ್ಟೋಬರ್ 31: ರಾಮ ಮಂದಿರ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಇಂದು ನಗರದ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ವಾಸಿಮ್ ರಿಜ್ವಿ ಭೇಟಿ ನೀಡಿ ಶ್ರೀ ಶ್ರೀ ರವಿಶಂಕರ್ ಜತೆ ಚರ್ಚೆ ನಡೆಸಿದರು.
ನಂತರ ಮಾಧ್ಯಮಗಳ ಜತೆ ಮಾತನಾಡಿದ ವಾಸಿಮ್ ರಿಜ್ವಿ, "ಶ್ರೀ ಶ್ರೀ ರವಿಶಂಕರ್ ರನ್ನು ಇಡೀ ದೇಶವೇ ಗೌರವಿಸುತ್ತದೆ. ಈ ಸಮಸ್ಯೆ ಶೀಘ್ರ ಬಗೆಹರಿಯುತ್ತದೆ ಎಂಬ ಭರವಸೆ ತಮಗಿದೆ," ಎಂದು ಹೇಳಿದ್ದಾರೆ.

ಯಾರಿಗೆಲ್ಲಾ ಒಪ್ಪಂದ ಬೇಕೋ ಅವರ ಜತೆಗೆ ಮಾತ್ರ ಮಾತುಕತೆ ನಡೆಸಬೇಕು ಎಂದು ಶ್ರೀ ಶ್ರೀ ರವಿಶಂಕರ್ ರ ಬಳಿಯಲ್ಲಿ ತಾವು ಮನವಿ ಮಾಡಿಕೊಂಡಿರುವುದಾಗಿ ವಾಸಿಮ್ ರಿಜ್ವಿ ಹೇಳಿದ್ದಾರೆ.

ಸೋಮವಾರವಷ್ಟೇ ಆಯೋಧ್ಯೆ ಬಿಕ್ಕಟ್ಟಿಗೆ ಸಂಧಾನ ನಡೆಸಲು ಶ್ರೀ ಶ್ರೀ ರವಿಶಂಕರ್ ಸೂಕ್ತ ವ್ಯಕ್ತಿಯಲ್ಲ ಎಂದು ಬಿಜೆಪಿ ಮಾಜಿ ಸಂಸದ ರಾಮ್ ವಿಲಾಸ್ ವೇದಾಂತಿ ಹೇಳಿಕೆ ನೀಡಿದ್ದರು. ಇದರಿಂದ ಶ್ರೀ ಶ್ರೀ ರವಿಶಂಕರ್ ಸಂಧಾನ ಯತ್ನಕ್ಕೆ ಹಿನ್ನಡೆ ಉಂಟಾಗಿತ್ತು.












Click it and Unblock the Notifications