ವಸುಂಧರಾ ರಾಜೇ ನಮ್ಮ ಫ್ಯಾಮಿಲಿ ಫ್ರೆಂಡ್: ಲಲಿತ್
ನವದೆಹಲಿ, ಜೂ.16: ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ವೀಸಾ ಒದಗಿಸಿದ ಪ್ರಕರಣದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಂತರ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹೆಸರು ಕೇಳಿ ಬಂದಿದೆ. ಲಲಿತ್ ಮೋದಿ ಕೂಡಾ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ, ರಾಜೇ ಅವರು ನಮ್ಮ ಫ್ಯಾಮಿಲಿ ಫ್ರೆಂಡ್ ಎಂದಿದ್ದಾರೆ.
ಮಾಂಟೆನೆಗ್ರೋದಲ್ಲಿ ಹಾಲಿಡೇ ಮೂಡ್ ನಲ್ಲಿದ್ದ ಲಲಿತ್ ಮೋದಿ ಅವರನ್ನು ಇಂಡಿಯಾ ಟುಡೇ ಟಿವಿಯ ರಾಜದೀಪ್ ಸರ್ದೇಸಾಯಿ ಅವರು ಸಂದರ್ಶಿಸಿದ್ದಾರೆ. ಸಂದರ್ಶನದ ವೇಳೆ ಲಲಿತ್ ಮೋದಿ ಅವರು ಅನೇಕ ವಿಷಯಗಳನ್ನು ಹೊರ ಹಾಕಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗಾಗಿ ತಮ್ಮ ಪತ್ನಿಯನ್ನು ಕರೆದೊಯ್ದಿದ್ದೆ ವಸುಂಧರಾ ರಾಜೇ, ಲಂಡನ್ ನಲ್ಲಿ ನೆಲೆಸಲು, ಲಂಡನ್ನಿಂದ ಪೋರ್ಚುಗಲ್ ಆಸ್ಪತ್ರೆಗೆ ತೆರಳಲು ರಾಜೇ ನೆರವಾದರು ಎಂದಿದ್ದಾರೆ.
ಆದರೆ, ಕ್ಯಾನ್ಸರ್ ಪೀಡಿತ ಪತ್ನಿ ಶಸ್ತ್ರಚಿಕಿತ್ಸೆಯಾದ ಮೂರು ದಿನಗಳ ಬಳಿಕ ಇಡೀ ಕುಟುಂಬ ಸಂಭ್ರಮಾಚರಣೆಯಲ್ಲಿ ತೊಡಗಿದ್ದರ ಬಗ್ಗೆ ರಾಜದೀಪ್ ಕೇಳಿದ ಪ್ರಶ್ನೆಗೆ ಲಲಿತ್ ಸಮರ್ಪಕ ಉತ್ತರ ನೀಡಲಿಲ್ಲ. ಮಾರಾಣಾಂತಿಕ ಕಾಯಿಲೆ ದೂರಾದ ಖುಷಿಯನ್ನು ಆಚರಿಸಿದ್ದು ತಪ್ಪೇ ಎಂದಿದ್ದಾರೆ. ಮೋದಿ ಹೇಳಿದ ಮಾತುಗಳು ಹಾಗೂ ಮೋದಿ ಹಾಗೂ ರಾಜೇ ಕುಟುಂಬ ಗೆಳೆತನ ವಿವರ ಇಂತಿದೆ:

* 2011ರಲ್ಲಿ ರಾಜಸ್ಥಾನದ ಪ್ರತಿಪಕ್ಷ ನಾಯಕಿಯಾಗಿದ್ದ ವಸುಂಧರಾ ಅವರು ಲಲಿತ್ ಮೋದಿ ಅವರ ವಲಸೆ ದಾಖಲೆಗಳಿಗೆ 'ವಿಟ್ನೆಸ್' ಆಗಿದ್ದರು.
* ಲಲಿತ್ ಮೋದಿ ಅವರ ವಕೀಲ ಮೆಹಮೂದ್ ಅಬ್ದಿ ಅವರ ತಂಡ ಮಾಧ್ಯಮಗಳಿಗೆ ನೀಡಿದ ಪತ್ರದಲ್ಲಿ ರಾಜೇ ಅವರ ನೆರವಿನ ಬಗ್ಗೆ ಮಾಹಿತಿ ಇದೆ.
* ಲಲಿತ್ ಮೋದಿ ಅವರ ಪತ್ನಿ ಪೋರ್ಚುಗಲ್ನಲ್ಲಿರುವ ಲಂಡನ್ ಮೂಲದ "ಚಾಂಪ್ಲಿಮೌಡ್ ಫೌಂಡೇಷನ್' ಆಸ್ಪತ್ರೆಯೊಂದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. 2014ರಲ್ಲಿ ವಸುಂಧರಾ ರಾಜೇ ಅವರು ರಾಜಸ್ಥಾನದ ಸಿಎಂ ಆದ ಬಳಿಕ ಇದೇ ಚಾಂಪ್ಲಿಮೌಡ್ ಫೌಂಡೇಷನ್ಗೆ ರಾಜಸ್ಥಾನದಲ್ಲಿ ಆಸ್ಪತ್ರೆಗೆ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
* ಆಸ್ಪತ್ರೆಗೆ ನಿರ್ಮಿಸಲು ಲಂಡನ್ ಮೂಲದ ಕಂಪನಿಗೆ 35000 ಚದರಅಡಿಯಷ್ಟು ಜಾಗವನ್ನು ರಾಜಸ್ಥಾನ ಸರ್ಕಾರ ನೀಡಿದೆ.
* ಲಲಿತ್ ಮೋದಿ ಕುಟುಂಬದ ಪರಿಚಯ ನನಗೆ ಚೆನ್ನಾಗಿದೆ. ಮಾಧ್ಯಮಗಳಲ್ಲಿ ತೋರಿಸುತ್ತಿರುವ ಪತ್ರ(2011ರ ಸಾಕ್ಷಿ ಹೇಳಿಕೆ)ದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications