ಸಂಕಟದಲ್ಲಿ ವಿಜ್ಞಾನಿ: ಪತ್ನಿ ಮೇಲೆ ಪತಿ ಅತ್ಯಾಚಾರ
ರಾಯಪುರ, ಸೆ.23: ಡಿಫೆನ್ಸ್ ರಿಸರ್ಚ್ ಅಂಡ್ ಡೆವೆಲಪ್ಮೆಂಟ್ ಆರ್ಗನೈಜೇಷನ್(ಡಿಆರ್ ಡಿಒ) ವಿಜ್ಞಾನಿ ತಪಸ್ ಕುಮಾರ್ ಮುಜುಂದಾರ್ ಅವರ ವಿರುದ್ಧ ಅತ್ಯಾಚಾರ ಆರೋಪ ಹೊರೆಸಿ ದೂರು ದಾಖಲಾಗಿದೆ. ದೂರು ನೀಡಿದವರು ತಪಸ್ ಕುಮಾರ್ ಅವರ ಸಂತ್ರಸ್ತ ಪತ್ನಿ ಎಂಬುದು ವಿಶೇಷ.
ಮುಜುಂದಾರ್ ಅವರ ಪತ್ನಿ ನೀಡಿರುವ ಹೇಳಿಕೆಯಂತೆ, ತಪಸ್ ಅವರನ್ನು 2011ರಲ್ಲಿ ಮದುವೆಯಾದರಂತೆ. ಆದರೆ, ಇದಕ್ಕೂ ಮುನ್ನ ತಪಸ್ ಗೆ ಮದುವೆಯಾಗಿದ್ದರೂ ವಿಷಯ ಮುಚ್ಚಿಟ್ಟಿದ್ದರು. ನಾನು ರಾಯಪುರದಲ್ಲಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದೇನೆ.
ನಮ್ಮಿಬ್ಬರ ನಡುವೆ ಕಾರ್ಯಕ್ರಮವೊಂದರಲ್ಲಿ ಗೆಳೆತನ ಮೂಡಿತು. ಗೆಳೆತನ ಪ್ರೇಮವಾಗುವ ಹೊತ್ತಿಗೆ ಆತನಿಗೆ ಮದುವೆಯಾಗುವುದು ಗೊತ್ತಾಯಿತು. ಆದರೆ, ಮೊದಲ ಪತ್ನಿಗೆ ವಿವಾಹ ವಿಚ್ಛೇದನ ನೀಡಿದ್ದೇನೆ.ನಮ್ಮ ಮದುವೆಗೆ ಯಾವುದೇ ಅಡ್ಡಿಯಿಲ್ಲ ಎಂದು ಸೂಕ್ತ ದಾಖಲೆಗಳನ್ನು ತಪಸ್ ತೋರಿಸಿದರು.

ನಾನು ಅವರನ್ನು ನಂಬಿಬಿಟ್ಟೆ. ಆದರೆ, ಮೊದಲ ಪತ್ನಿಗೆ ವಿಚ್ಛೇದನ ನೀಡಿಲ್ಲ. ನನಗೆ ತೋರಿಸಿದ ದಾಖಲೆಗಳೆಲ್ಲ ಸುಳ್ಳು ಎಂದು ನನಗೆ ತಿಳಿಯಿತು. ಆದರೆ, ಈ ವೇಳೆಗಾಗಲೇ ನನ್ನ ನಂಬಿಕೆಯನ್ನು ಆತ ದುರುಪಯೋಗ ಪಡಿಸಿಕೊಂಡಿದ್ದ. ನನ್ನ ಮೇಲೆ ಬಲಾತ್ಕಾರ ಎಸಗಿದ್ದ. ಮದುವೆ ಎಂಬುದು ಕೇವಲ ಆಚರಣೆಯಾಗಿ ಉಳಿಯಿತು. ನನ್ನ ನಂಬಿಕೆ ನಾಶವಾಯಿತು ಎಂದು ತಪಸ್ ಪತ್ನಿ ದೂರಿನಲ್ಲಿ ಹೇಳಿದ್ದಾರೆ.
ಡಿಆರ್ ಡಿಒ ಸಂಸ್ಥೆಯ ಆಹಾರ ಸಂಶೋಧನಾ ಪ್ರಯೋಗಲಯದಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ತಪಸ್ ಕುಮಾರ್ ಮುಜುಂದಾರ್ ಮೇಲೆ ದೂರು ದಾಖಲಿಸಲಾಗಿದ್ದು, ಅವರ ಪತ್ನಿಯೇ ದೂರು ನೀಡಿದ್ದಾರೆ ಎಂದು ಸೂಪರಿಂಟೆಂಡ್ ಆಫ್ ಪೊಲೀಸ್ ಒಪಿ ಪಾಲ್ ಹೇಳಿದ್ದಾರೆ.
ವಿಜ್ಞಾನಿ ತಪಸ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376(ಅತ್ಯಾಚಾರ), 419, 496 ಹಾಗೂ 498 (A) ಅನ್ವಯ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಡಿಆರ್ ಡಿಒ ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಒಪಿ ಪಾಲ್ ಹೇಳಿದ್ದಾರೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications