Watch This Video: ರೈಲ್ವೆ ಕೆಲಸಗಾರನಿಂದಲೇ ರೈಲಿನಿಂದ ಹಳಿಗೆ ಕಸ ಎಸೆತ: ವಿಡಿಯೋ ವೈರಲ್
Video Viral: ಸಾರಿಗೆ ಸಂಪರ್ಕ ಸೇವೆಯಲ್ಲಿ ಕ್ರಾಂತಿ ಉಂಟು ಮಾಡುತ್ತಿರುವ ರೈಲ್ವೆ ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇದೆ. ಆದರೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದ್ದು, ಸ್ವತಃ ಇಲಾಖೆ ಕೆಳಗೆ ಕೆಲಸ ಮಾಡುವ ಸಿಬ್ಬಂದಿಗೆ ಸ್ವಚ್ಛತೆಯ ಅರಿವು ಮೂಡಿದಂತಿಲ್ಲ. ಸಲೀಸಾಗಿ ರೈಲಿನ ಒಳಗೆ ಸಂಗ್ರಹಿಸಲಾದ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಟ್ರ್ಯಾಕ್ಗೆ ಬಿಸಾಡಿದ ಘಟನೆ ನಡೆದಿದೆ. ಈ ಕುರಿತು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಹೌದು, ಮಧ್ಯ ರೈಲ್ವೆ, ರೈಲ್ವೆ ಸಚಿವಾಲಯ, ನೈಋತ್ಯ ರೈಲ್ವೆ ಸೇರಿದಂತೆ ಎಲ್ಲ ವಲಯಗಳ ರೈಲು ವಿಭಾಗಗಳು ಸ್ವಚ್ಛತೆ ಆದ್ಯತೆ ನೀಡುತ್ತವೆ. ಆಗಾಗ ಸಿಬ್ಬಂದಿಯಿಂದ ಸ್ವಚ್ಛತಾ ಅಭಿಯಾನ ಸಹ ಕೈಗೊಂಡು, ಟ್ರ್ಯಾಕ್ ಮೇಲೆ, ನಿಲ್ದಾಣಗಳ ನೈರ್ಮಲ್ಯ ಕಾಪಾಡಲಾಗುತ್ತದೆ. ಆದರೆ ರೈಲ್ವೆ ಸಿಬ್ಬಂದಿಯೊಬ್ಬರೇ ಸಹನೀಯವಾಗಿ ವರ್ತಿಸಿದ ವಿಡಿಯೋ ಜನಾಕ್ರೋಶಕ್ಕೆ ಕಾರಣವಾಗಿದೆ.

ರೈಲ್ವೆ ಸಿಬ್ಬಂದಿ ಯೂನಿಫಾರ್ಮ್ ಧರಿಸಿರುವ ವ್ಯಕ್ತಿಯೊಬ್ಬರು ಚಲಿಸುವ ರೈಲಿನಿಂದ ಕಸದ ಚೀಲವನ್ನು ನೇರವಾಗಿ ಹಳಿಗಳಿಗೆ ಎಸೆಯುತ್ತಿರುವುದು ವಿಡಿಯೋದನ್ನು ಕಾಣಬಹುದು. ಈತನ ರೈಲ್ವೆ ಕೆಲಸಗಾರನೇ ಎಂದು ತಿಳಿದು ಬಂದಿದೆ. ರೈಲ್ವೆ ಒಳಗೆ ಪ್ರಯಾಣಿಕರಿಂದ ಉತ್ಪತ್ತಿಯಾದ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡದೇ ನೇರವಾಗಿ ಚಳಿಸುವ ರೈಲಿನಿಂದ ಹಳಿಗೆ ಬೀಸಾಕಿದ್ದಾರೆ. ಅದೇ ಬೋಗಿಯ ಪ್ರಯಾಣಿಕರೊಬ್ಬರು ವಿಡಿಯೋ ಸೇರೆ ಹಿಡಿದಿದ್ದಾರೆ. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ವಚ್ಛ ಭಾರತ್ ಮಷಿನ್ ಅಡಿ ಸಾಕಷ್ಟು ಕಾರ್ಯಕ್ರಮ ಕೇಂದ್ರ ಸರ್ಕಾರ ಹಮ್ಮಿಕೊಳ್ಳುತ್ತಿದೆ. ರೈಲ್ವೆ ಇಲಾಖೆಯು ಈ ಬಗ್ಗೆ ಅರಿವು ಕಾರ್ಯಕ್ರಮ ನಡೆಸುತ್ತಿದೆ. ಒಂದು ಕಡೆ ರೈಲ್ವೆ ಸ್ವಚ್ಛವಾಗಿಡಲು ಉದ್ದೇಶ ಹೊಂದಲಾಗಿದೆ. ಆದರೆ ಅಲ್ಲಿನ ಕೆಲಸಗಾರನೇ ಈ ರೀತಿ ಬೆಜವಾಬ್ದರಿಯಾಗಿ ವರ್ತಿಸಿದರೆ ಹೇಗೆ ಎಂಬ ಪ್ರಶ್ನೆ ಎದ್ದಿದೆ. ದೇಶವಾಗಲಿ, ರೈಲಾಗಲಿ, ರೈಲು ನಿಲ್ದಾಣಗಳ ಸ್ವಚ್ಛತೆಯಾಗಲಿ ಅದು ಕೇವಲ ಕಾಗದದ ಮೇಲೆ ಇದ್ದರಷ್ಟೇ ಸಾಲದು. ಅದು ಅನುಷ್ಠಾನಕ್ಕೂ ಬರಬೇಕು ಎಂಬುದು ಜನರ ಆಶಯವಾಗಿದೆ. ಸದ್ಯ ಈ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹ ಕೇಳಿ ಬಂದಿದೆ.
High-tech garbage disposal of the Indian Railways. pic.twitter.com/cCRebQW0Gl
— Jayant Bhandari (@JayantBhandari5) November 8, 2025
ರೈಲಿನಿಂದ ಕಸ ಎಸೆದ ವ್ಯಕ್ತಿ ವಜಾ, ಸ್ವಚ್ಛತೆಗೆ ಸೂಚನೆ
ರೈಲಿನಿಂದ ಕಸ ಎಸೆಯುವ ದೃಶ್ಯ ಇದೇ ಮೊದಲೇನಲ್ಲ. ಈ ಹಿಂದೆಯು ರೈಲಿನ ಸಿಬ್ಬಂದಿ (IRCTC) ಬೋಗಿ ಒಳಗೆ, ಡೋರ್ ಪಕ್ಕದಲ್ಲಿ ಕಸ ಹಾಕಲು ಇರುವ ಡಬ್ಬದಿಂದ ಕಸ ಎಸೆದಿದ್ದರು. ಚಲಿಸುವ ರೈಲಿನಿಂದ ನೇರವಾಗಿ ಆಚೆ ಎಸೆಯುವ ದೃಶ್ಯ ವೈರಲ್ ಆಗಿತ್ತು. ಆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದ ರೈಲ್ವೆ ಇಲಾಖೆಯು, ಕೆಲಸದಿಂದ ಸಿಬ್ಬಂದಿ ವಜಾಗೊಳಿಸಿದ್ದಾಗಿ ತಿಳಿಸಿತ್ತು.
ಈ ಕೃತ್ಯ ನೋಡಿದ್ದ ಪ್ರಯಾಣಿಕರು ಹತಾಶ ವ್ಯಕ್ತಪಡಿಸಿದ್ದರು. ಕೂಡಲೇ ಪ್ರತಿಕ್ರಿಯಿಸಿದ್ದ ರೈಲ್ವೆ ಇಲಾಖೆಯು, ಈ ರೀತಿ ನಿಯಮ ಉಲ್ಲಂಘನೆ ಆಗಿದೆ. ಸಿಬ್ಬಂದಿ ಮೇಲೆ ದಂಡ ವಿಧಿಸಲಾಗಿದ್ದು, ರೈಲು ಹಾಗೂ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿ, ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿತ್ತು.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications