ರೈಲಿನಲ್ಲಿ ಊಟ ಬೇಕೆ 139ಗೆ ಎಸ್ಎಂಎಸ್ ಮಾಡಿ
ನವದೆಹಲಿ, ಸೆ. 25 : ರೈಲ್ವೆ ಪ್ರಯಾಣಿಕರಿಗೆ ಹೊಟೇಲ್ ಊಟ ಒದಗಿಸುವ ರೈಲ್ವೆ ಇಲಾಖೆಯ ಇ-ಕ್ಯಾಟರಿಂಗ್ ಯೋಜನೆಗೆ ಗುರುವಾರ ಚಾಲನೆ ದೊರೆಯಲಿದೆ. ಪ್ರಾಯೋಗಿಕವಾಗಿ ಆರು ರೈಲುಗಳಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, 139 ನಂಬರ್ಗೆ ಎಸ್ಎಂಎಸ್ ಮಾಡಿದರೆ, ನೀವಿರುವ ಬೋಗಿಗೆ ಊಟ ಬರುತ್ತದೆ.
ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರು ಇಂದು ರೈಲಿನಲ್ಲಿ ಊಟ ಪೂರೈಕೆ ಮಾಡುವ ಯೋಜನೆಗೆ ಚಾಲನೆ ನೀಡಲಿದ್ದಾರೆ. ರೈಲ್ವೆ ಪ್ಯಾಂಟ್ರಿ ಕಾರು ಇಲ್ಲದ ಆರು ರೈಲುಗಳನ್ನು ಈ ಯೋಜನೆಗಾಗಿ ಆಯ್ಕೆ ಮಾಡಲಾಗಿದೆ. ಊಟ ಆರ್ಡರ್ ಮಾಡಲು ಮೀಲ್ ಎಂದು ಇಂಗ್ಲಿಷ್ನಲ್ಲಿ ಬರೆದು ತಮ್ಮ ಪಿಎನ್ಆರ್ ನಂಬರ್ ಜೊತೆ 139 ಸಂಖ್ಯೆಗೆ ಎಸ್ಎಂಎಸ್ ಮಾಡಬೇಕು. [ರೈಲಿನಲ್ಲಿ ಎಸ್ಸೆಂಎಸ್ ಮಾಡಿ ಊಟ ಪಡೆಯಿರಿ!]

ಪ್ರಯಾಣಿಕರ ಎಸ್ಎಂಎಸ್ ತಲುಪಿದ ಕೂಡಲೆ ಮೊದಲು ಪಿಎನ್ಆರ್ ನಂಬರ್ನ ಪರಿಶೀಲನೆಯಾಗುತ್ತದೆ. ನಂತರ ಪ್ರಯಾಣಿಕನನ್ನು ಸಂಪರ್ಕಿಸಿ ಊಟದ ಮೆನು ತಿಳಿಸುತ್ತಾರೆ. ಊಟದ ಹಣವನ್ನು ಊಟ ತಲುಪಿದ ಬಳಿಕ ಪ್ರಯಾಣಿಕರು ಪಾವತಿ ಮಾಡಬಹುದಾಗಿದೆ. ಎಸ್ಎಂಎಸ್ ಜೊತೆಗೆ ಫೋನ್ ಕರೆ ಮಾಡಿಯೂ ಊಟವನ್ನು ತರಿಸಿಕೊಳ್ಳಬಹುದು. ಇದಕ್ಕಾಗಿ ಇಲಾಖೆ 18001034 ಅಥವ 0120-438389299 ಸಂಖ್ಯೆಗಳನ್ನು ಕಾಯ್ದಿರಿಸಿದೆ. [ರೈಲಿನಲ್ಲೂ ಸಿಗುತ್ತೆ ಮಯ್ಯಾಸ್ ಉಪ್ಪಿಟ್ಟು, ಇಡ್ಲಿ]
ಇಂದು ಪ್ರಾಯೋಗಿಕವಾರಿ ಈ ಯೋಜನೆಗೆ ಚಾಲನೆ ದೊರೆಯಲಿದ್ದು, ಪ್ರಯಾಣಿಕರಿಂದ ಬರುವ ಪ್ರತಿಕ್ರಿಯೆ ನೋಡಿಕೊಂಡು, ಇ-ಕ್ಯಾಟರಿಂಗ್ ಸೌಲಭ್ಯವನ್ನು ವಿಸ್ತರಣೆ ಮಾಡಲು ಇಲಾಖೆ ಚಿಂತನೆ ನಡೆಸಿದೆ. ಐಆರ್ಸಿಟಿಸಿಯ ಫುಡ್ ಪ್ಲಾಜಾಗಳಿಂದ, ದೆಹಲಿ-ಅಮೃತಸರ ವಿಭಾಗದ ಕ್ಯಾಟರಿಂಗ್ ಘಟಕಗಳಿಂದ ಊಟ ಮತ್ತು ತಿಂಡಿ ಸರಬರಾಜಾಗುತ್ತದೆ. ಆರಂಭದಲ್ಲಿ ದೆಹಲಿ, ನಿಜಾಮುದ್ದೀನ್, ಅಮೃತಸರ ಮತ್ತು ಲೂಧಿಯಾನ ನಿಲ್ದಾಣಗಳಲ್ಲಿ ಮಾತ್ರ ಊಟ ವಿತರಣೆಯಾಗಲಿದೆ.
ಆರು ರೈಲುಗಳು ಯಾವುವು? : ರೈಲ್ವೆ ಇಲಾಖೆ ಪ್ರಾಯೋಗಿಕವಾಗಿ ಈ ಯೋಜನೆಯನ್ನು ದಿಲ್ಲಿ-ಪಠಾಣ್ಕೋಟ್ ಎಕ್ಸ್ಪ್ರೆಸ್, ಕಟಿಹಾರ್-ಅಮೃತಸರ ಎಕ್ಸ್ಪ್ರೆಸ್, ಅಮೃತಸರ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ಪ್ರೆಸ್, ಶಾನೆ ಪಂಜಾಬ್ ಎಕ್ಸ್ಪ್ರೆಸ್ , ಹೊಸದಿಲ್ಲಿ-ಅಮೃತಸರ ಎಕ್ಸ್ಪ್ರೆಸ್ ಮತ್ತು ಶಹೀದ್ ಎಕ್ಸ್ಪ್ರೆಸ್ ರೈಲುಗಳಲ್ಲಿ ಆರಂಭಿಸಲಿದೆ.
-
Opinion - Kalyana Karnataka Train: ಕೇಂದ್ರ ಸಚಿವ ವಿ ಸೋಮಣ್ಣ ಅವರೇ ಕನ್ನಡಿಗರ ಸಂಕಷ್ಟ ಸ್ವಲ್ಪ ನೋಡಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ












Click it and Unblock the Notifications