ಮೀಸಲಾತಿ ರದ್ದುಗೊಳಿಸುವ ರಾಹುಲ್ ಗಾಂಧಿ ಹೇಳಿಕೆ: ಭಾರತದಲ್ಲಿ ಸಮಾನತೆಗೆ ಬೆದರಿಕೆ
ಅಮೆರಿಕ ಪ್ರವಾಸದಲ್ಲಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜಾರ್ಜ್ ಟೌನ್ ವಿಶ್ವವಿದ್ಯಾಲಯದಲ್ಲಿ ಮೀಸಲಾತಿ ಕುರಿತು ನೀಡಿದ ಹೇಳಿಕೆ ವಿವಾದ ಹುಟ್ಟುಹಾಕಿದೆ. ಭವಿಷ್ಯದಲ್ಲಿ ಭಾರತದಲ್ಲಿ ಮೀಸಲಾತಿ ಕುರಿತು ಕೇಳಿದಾಗ, ರಾಹುಲ್ ಗಾಂಧಿ, "ಭಾರತ ನ್ಯಾಯಯುತ ಸ್ಥಳವಾದಾಗ ನಾವು ಮೀಸಲಾತಿಯನ್ನು ರದ್ದು ಮಾಡುವ ಕುರಿತು ಯೋಚಿಸುತ್ತೇವೆ. ಆದರೆ ಭಾರತ ನ್ಯಾಯಯುತ ಸ್ಥಳವಲ್ಲ" ಎಂದು ಹೇಳಿದರು. ಈ ಹೇಳಿಕೆ ಸಮಾನತೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಮಾತ್ರವಲ್ಲ ಜೊತೆಗೆ ಭಾರತದ ಸಾಮಾಜಿಕ ವ್ಯವಸ್ಥೆಯ ಕುರಿತು ವ್ಯಾಪಕ ಚರ್ಚೆ ಹುಟ್ಟುಹಾಕಿದೆ.
ಸಮಾನತೆಯ ವಿರುದ್ಧದ ಇತಿಹಾಸ
ಸಮಾನತೆ ಮತ್ತು ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಸಂಕೀರ್ಣ ಸಂಬಂಧವನ್ನು ಹೊಂದಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಗುಂಪುಗಳ ಪರವಾಗಿದೆ ಎಂದು ತೋರಿಸಿದರೂ ಸಹ ಆಳವಾಗಿ ಪರಿಶೀಲನೆ ನಡೆಸಿದರೆ ಹೆಚ್ಚು ಸಂಕೀರ್ಣವಾದ ನಿರೂಪಣೆಯನ್ನು ನೋಡಬಹುದು. ಪಕ್ಷದ ಸಂಸ್ಥಾಪಕ ನಾಯಕ ಜವಾಹರ್ಲಾಲ್ ನೆಹರು ಸಮಾನತೆಯನ್ನು ಜಾರಿಗೊಳಿಸಲು ವ್ಯಾಪಕವಾಗಿ ಹಿಂದೇಟು ಹಾಕಿದ್ದರು.

ಬಳಿಕ ಇಂದಿರಾ ಗಾಂಧಿ ಅವಧಿಯಲ್ಲಿ, ಮೀಸಲಾತಿ ನೀತಿಗಳಿಗೆ ಪ್ರಮುಖವಾಗಿ ವಿರೋಧ ಎದುರಾಗಿತ್ತು. ರಾಹುಲ್ ಗಾಂಧಿ ತಂದೆ ಮತ್ತು ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಒಬಿಸಿ ಸಮಯದಾಯವನ್ನು "ಬುದ್ಧು" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು, ಇದು ಹಿಂದುಳಿದ ವರ್ಗದಲ್ಲಿ ಆಕ್ರೋಶವನ್ನು ಹುಟ್ಟುಹಾಕಿತ್ತು.
ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ನೋಡಿದರೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಸಶಕ್ತಗೊಳಿಸಲು ಪಕ್ಷದ ಬದ್ಧತೆಯ ಕುರಿತು ಪ್ರಶ್ನೆಗಳು ಏಳುತ್ತವೆ. ರಾಹುಲ್ ಗಾಂಧಿ ಇತ್ತೀಚಿನ ಹೇಳಿಕೆ ಇದೇ ಹಾದಿಯಲ್ಲಿದೆ, ಪಕ್ಷಕ್ಕೆ ಅವಕಾಶ ನೀಡಿದರೆ ಮೀಸಲಾತಿ ರದ್ದುಪಡಿಸಬಹುದು ಅಥವ ದುರ್ಬಲಗೊಳಿಸಬಹುದು ಎಂಬ ಭಯವನ್ನು ಹುಟ್ಟಿಸಿದೆ.
ಸಮಾನತೆಯ ನಿರ್ಣಾಯಕ ಅಗತ್ಯ
ಭಾರತ ಸಂಕೀರ್ಣವಾದ, ಆಳವಾದ ಜಾತಿ ವ್ಯವಸ್ಥೆ, ವರ್ಗ ಮತ್ತು ಸಮುದಾಯವನ್ನು ಒಳಗೊಂಡ ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದೆ. ದಶಕಗಳ ಕಾಲದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗಳ ಬಳಿಕವೂ ಜಾತಿ ಆಧಾರಿತವಾದ ಅಸಮಾನತೆ ಕಟು ವಾಸ್ತವವಾಗಿದೆ. ಮೀಸಲಾತಿ ರೂಪದಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಕ್ಕೆ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಅವಕಾಶವನ್ನು ನೀಡುವಲ್ಲಿ ಭಾರತದ ಪ್ರಯತ್ನವೂ ಸಾಗಿದೆ.
ಮೊದಲು ಮೀಸಲಾತಿ ಪರಿಚಯಿಸಿದಾಗ ಇದ್ದ ಅನಿವಾರ್ಯತೆ ಇಂದಿಗೂ ಸಹ ಅಗತ್ಯವಾಗಿದೆ. ಭಾರತ "ನ್ಯಾಯಯುತ ಸ್ಥಳ" ವಾಗಲು ಬಹಳ ದೂರದಲ್ಲಿದೆ, ಸಾಮಾಜಿಕ ಚಲನಶೀಲತೆ ನಿರ್ಣಾಯಕ ಅರ್ಹತೆ ಹಂತದಲ್ಲಿದೆ. ಜಾತಿ, ಸಾಮಾಜಿಕ ಸ್ಥಾನಮಾನದ ಆಧಾರದಲ್ಲಿ ಶಿಕ್ಷಣ, ಉದ್ಯೋಗ ಮತ್ತು ಕೋಟ್ಯಾಂತರ ಜನರನ್ನು ತಾರತಮ್ಯ ಮಾಡುವುದು ನಿಂತರವಾಗಿ ಮುಂದುವರೆದಿದೆ. ಇಂತಹ ಸಮಯದಲ್ಲಿ ಸಮಾನತೆ ಸಶಕ್ತಗೊಳಿಸುವುದು ಕೇವಲ ಒಂದು ಅಸ್ತ್ರವಲ್ಲ, ಇದು ಐತಿಹಾಸದ ತಪ್ಪುಗಳನ್ನು ಸರಿ ಪಡಿಸಿಕೊಳ್ಳುವ ಅಗತ್ಯ. ಬಿಜೆಪಿ ಸರ್ಕಾರ ಹಲವಾರು ಕಾನೂನುಗಳನ್ನು ಸಮಾನತೆಯನ್ನು ಜಾರಿಗೊಳಿಸಲು ಪರಿಚಯಿಸಿದೆ.
ಕಾಂಗ್ರೆಸ್ನ ಹಾದಿ: ಕಾಳಜಿ ಕುರಿತು ಪ್ರಶ್ನೆಗಳು?
ಟೀಕಾಕಾರರ ಪ್ರಕಾರ ರಾಹುಲ್ ಗಾಂಧಿ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ದೀರ್ಘಕಾಲದ, ಸ್ಥಿರವಾದ ಸಮಾನತೆಯನ್ನು ದುರ್ಬಲಗೊಳಿಸುವ ಕಾರ್ಯಸೂಚಿಯ ಭಾಗ. ಹಲವಾರು ನ್ಯಾಯಾಂಗ ತೀರ್ಪುಗಳನ್ನು ಮತ್ತು ಪರಿಚಯಿಸಿದ ನೀತಿಗಳನ್ನು ನೋಡಿದಾಗ ಅವುಗಳು ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಕ್ಕೆ ಅನಾನುಕೂಲವಾಗಿಯೇ ಇವೆ.
ಒಂದು ನಿದರ್ಶನ ಎಂಬಂತೆ 2005ರ ಡಿಸೆಂಬರ್ನಲ್ಲಿ ಕಾಂಗ್ರೆಸ್ 93ನೇ ತಿದ್ದುಪಡಿ ಪರಿಚಯಿಸಿತು, ಅಲ್ಪಸಂಖ್ಯಾತ ಸಂಸ್ಥೆಗಳು ಕಾನೂನು ಬದ್ಧ ಮೀಸಲಾತಿಯನ್ನು ಅನುಸರಿಸುವುದರಿಂದ ವಿನಾಯಿತಿ ನೀಡಲಾಯಿತು. ಈ ನಡೆ ರಾಜಕೀಯಲಾಭಕ್ಕಾಗಿ ಐತಿಹಾಸಿಕವಾಗಿ ಹಿಂದುಳಿದವರನ್ನು ಅಲ್ಪಸಂಖ್ಯಾತರಿಂದ ರಕ್ಷಣೆ ಮಾಡುವ ಪ್ರಯತ್ನದಂತೆ ಇತ್ತು.
ಹೆಚ್ಚುವರಿಯಾಗಿ ಕಾಂಗ್ರೆಸ್ ಸರ್ಕಾರಿ ಅನುದಾನ ಪಡೆಯುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ, ಜಾಮೀಯಾ ಮಾಲೀಯಾ ಇಸ್ಲಾಮಿಯಾದಲ್ಲಿ ಮೀಸಲಾತಿ ನಿರ್ವಹಣೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳನ್ನು ಮತ್ತಷ್ಟು ದೂರಗೊಳಿಸಿತು. ಪಕ್ಷವು ಸಮಾನತೆಯ ಬದಲು ಅಲ್ಪಸಂಖ್ಯಾತ ಸಮುದಾಯಗಳ ಒಲೈಕೆಗೆ ಹೆಚ್ಚು ಆದ್ಯತೆ ನೀಡಿದಂತೆ ಕಂಡುಬಂದಿತು.
ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಹೇಳಿಕೆ ಅಲ್ಪ ಸಂಖ್ಯಾತ ಮತಗಳನ್ನು ಅದರಲ್ಲೂ ಮುಸ್ಲಿಂ ಮತಗಳನ್ನು ಕ್ರೋಢಿಕರಿಸಲು ಹಿಂದೂ ಸಮಯದಾಯವನ್ನು ಒಡೆಯುವ ಅಸ್ತ್ರದಂತೆ ಟೀಕಿಸಲಾಯಿತು. ಈ ನಿರೂಪಣೆ, ವಿವಾದಗಳು ಮೀಸಲಾತಿ ವಿಚಾರದಲ್ಲಿ ಪಕ್ಷದ ನಿಲುವು ಸಾಮಾಜಿಕ ಉದ್ದೇಶಿಕ್ಕಿಂತ ರಾಜಕೀಯ ಉದ್ದೇಶ ಹೊಂದಿದೆ ಎಂದು ನೋಡುವಂತೆ ಮಾಡಿದೆ.
ವಿಶಾಲ ಪರಿಣಾಮಗಳು
ರಾಹುಲ್ ಗಾಂಧಿ ಹೇಳಿಕೆ ಉದ್ದೇಶಪೂರ್ವಕವೋ, ಅಲ್ಲವೋ, ಭಾರತದಲ್ಲಿ ಭವಿಷ್ಯದಲ್ಲಿ ಸಮಾನತೆಯ ವಿಚಾರದಲ್ಲಿನ ದೊಡ್ಡ ಮಟ್ಟದ ಚರ್ಚೆಗೆ ಬಾಗಿಲನ್ನು ತೆರದಿದೆ. ಕಾಂಗ್ರೆಸ್ ಪಕ್ಷ ನಿಜವಾಗಿಯೂ ಭವಿಷ್ಯದಲ್ಲಿ ಮೀಸಲಾತಿ ರದ್ದುಪಡಿಸುವ ಚಿಂತನೆಯಲ್ಲಿದೆಯೇ ಎಂಬುದು ನಿಜವಾಗಿಯೂ ಭಾರತದಲ್ಲಿನ ಸಾಮಾಜಿಕತೆ, ರಾಜಕೀಯ ಏಳುಬೀಳಿನ ಪ್ರಶ್ನೆಯನ್ನು ಹುಟ್ಟುಹಾಕಿದೆ. ವೈವಿಧ್ಯಮಯ ಮತ್ತು ಐತಿಹಾಸಿಕವಾಗಿ ಅಸಮಾನ ದೇಶವಾಗಿರುವುದರಿಂದ ಸಮಾನತೆ ಖಚಿತಪಡಿಸಿಕೊಳ್ಳಲು ಇದು ಒಂದು ಪ್ರಮುಖ ಸಾಧನ ಎಂಬುದನ್ನು ತೆಗೆದುಹಾಕಲು ಸಾಧ್ಯವೇ?.
ಅಂತಿಮ ಷರಾ
"ಭಾರತ ನ್ಯಾಯಯುತ ಸ್ಥಳವಲ್ಲ" ಎಂಬ ರಾಹುಲ್ ಗಾಂಧಿ ಹೇಳಿಕೆ ನಿಸ್ಸಂದೇಹವಾಗಿ ನೀತಿಗಳ ವಿಚಾರದಲ್ಲಿ ಸಮಾನತೆ ಕಾಪಾಡಿಕೊಳ್ಳುವುದನ್ನು ಒತ್ತಿ ಹೇಳುತ್ತಿದೆ. ಆದರೆ "ಮೀಸಲಾತಿ ರದ್ದು" ಎಂಬುದು ಸಮಸ್ಯಾತ್ಮಕವಾಗಿದೆ.
ವಿಶಾಲವಾದ ಮತ್ತು ವೈವಿದ್ಯಮಯ ಸಾಮಾಜಿಕ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ನಿಗದಿತ ಗುರಿಯನ್ನು ನಿರ್ದಿಷ್ಟ ಸಮಯದಲ್ಲಿ ಸಾಧಿಸುತ್ತೇವೆ ಎಂದು ನೋಡಲಾಗದು. ಆಳವಾಗಿ ಬೇರೂರಿರುವ ಇದನ್ನು ಪರಿಹರಿಸಲು ನಿರಂತರ ಪ್ರಕ್ರಿಯೆಯ ಅಗತ್ಯತೆ ಇದೆ.
ಸಮಾನತೆಯ ಮಾರ್ಗ ಭಾರತಕ್ಕೆ ದೀರ್ಘ ಮತ್ತು ಸಂಕೀರ್ಣವಾಗಿದೆ ಮತ್ತು ಇದು ಈ ಕಾರ್ಯಾಚರಣೆಯ ಪ್ರಮುಖ ಭಾಗವಾಗಿದೆ. ಮೀಸಲಾತಿ ರದ್ದುಗೊಳಿಸುವುದು ದಶಕಗಳ ಪ್ರಗತಿಯನ್ನು ಹಿಂದಕ್ಕೆ ತಳ್ಳಿ, ದುರ್ಬಲರನ್ನು ಇನ್ನೂ ಹಿಂದಕ್ಕೆ ತಳ್ಳಬಹುದಾಗಿದೆ.












Click it and Unblock the Notifications