Get Updates
Get notified of breaking news, exclusive insights, and must-see stories!

ತೆಲಂಗಾಣದ ಬೀದಿಬದಿ ಅಂಗಡಿಯಲ್ಲಿ ದೋಸೆ ತಯಾರಿಸಿದ ರಾಹುಲ್ ಗಾಂಧಿ

ಹೈದರಾಬಾದ್‌, ಅಕ್ಟೋಬರ್‌ 20: ತೆಲಂಗಾಣ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸತತ ಮೂರನೇ ದಿನವೂ ತೆಲಂಗಾಣದಲ್ಲಿ ಪ್ರಚಾರ ನಡೆಸಿದರು. ಶುಕ್ರವಾರ ಜಗ್ತಿಯಾಲ್ ಜಿಲ್ಲೆಯಲ್ಲಿ ಅವರು ತಮ್ಮ ವಿಜಯಭೇರಿ ಬಸ್ ಯಾತ್ರೆಯಲ್ಲಿ ಆಡಳಿತಾರೂಢ ಬಿಆರ್‌ಎಸ್ ಮತ್ತು ಪ್ರತಿಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಜಗ್ತಿಯಾಲ್‌ಗೆ ತೆರಳುತ್ತಿದ್ದ ಅವರು ಮಾರ್ಗ ಮಧ್ಯೆ ನೂಕಪಲ್ಲಿ ಗ್ರಾಮದ ರಸ್ತೆ ಬದಿಯ ಟಿಫಿನ್‌ ಸೆಂಟರ್‌ನಲ್ಲಿ ದೋಸೆ ತಯಾರಿಸಿದರು. ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಮೈಸೂರಿನಲ್ಲಿ ದೋಸೆ ತಯಾರಿಸಿ ಸವಿದಿದ್ದರು. ಈ ವೇಳೆ ಡಿಕೆ ಶಿವಕುಮಾರ್‌ ಜೊತೆಗಿದ್ದರು.

rahul-gandhi-made-dosa

ಜಗ್ತಿಯಾಲ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕೆಸಿಆರ್ ರಾಜ್ಯದಲ್ಲಿ ರಾಜಪ್ರಭುತ್ವವನ್ನು ನಡೆಸುತ್ತಿದ್ದಾರೆ. ತೆಲಂಗಾಣದೊಂದಿಗಿನ ನಮ್ಮ ಸಂಬಂಧವು ರಾಜಕೀಯವಲ್ಲ. ಆದರೆ ಪ್ರೀತಿ ಮತ್ತು ವಾತ್ಸಲ್ಯದಿಂದ ಕೂಡಿದೆ. ನಾವು ಅರಿಶಿಣ ರೈತರಿಗೆ ಕ್ವಿಂಟಾಲ್‌ಗೆ 15 ಸಾವಿರ ಬೆಂಬಲ ಬೆಲೆ ನೀಡುವುದಾಗಿ ಭರವಸೆ ನೀಡಿದರು.

ಚುನಾವಣೆಯು ಶ್ರೀಮಂತರು ಮತ್ತು ತೆಲಂಗಾಣದ ಜನರ ನಡುವೆ ಇದೆ. ತೆಲಂಗಾಣ ಬಂದರೂ ಜನರ ಆಶೋತ್ತರಗಳು ಈಡೇರಿಲ್ಲ. ಅವರು ಇಲ್ಲಿ ರಾಜಪ್ರಭುತ್ವ ನಡೆಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಅದು ಆಗದಂತೆ ತಡೆಯುತ್ತೇವೆ. ತೆಲಂಗಾಣ ಜನತೆಯೊಂದಿಗಿನ ನನ್ನ ಸಂಬಂಧ ರಾಜಕೀಯವಲ್ಲ, ಪ್ರೀತಿ. ಈ ಸಂಬಂಧ ಇಂದಿನದಲ್ಲ. ಇದು ನೆಹರೂ ಮತ್ತು ಇಂದಿರಮ್ಮ ಅವರಿಂದಲೂ ಮುಂದುವರೆದಿದೆ ಎಂದರು.

ಬಿಜೆಪಿ, ಬಿಆರ್‌ಎಸ್ ಮತ್ತು ಎಂಐಎಂ ಒಂದೇ. ಅವರ ನಡುವೆ ಕರಾಳ ಒಪ್ಪಂದವಿದೆ. ಬಿಆರ್‌ಎಸ್ ಮತ್ತು ಎಂಐಎಂ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿಗೆ ಸಹಕಾರ ನೀಡುತ್ತಿವೆ. ನಾನು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದರೆ ನನ್ನ ವಿರುದ್ಧ ಕೇಸ್ ಹಾಕಲಾಗಿದೆ. ಬಿಆರ್‌ಎಸ್, ಎಂಐಎಂ ಪರಸ್ಪರ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಿದರು.

rahul-gandhi-made-dosa

ಬಿಜೆಪಿ ವಿರುದ್ಧ ಹೋರಾಟ ನಡೆಸಿದ್ದರಿಂದ ಅವರ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ನನ್ನ ಸದಸ್ಯತ್ವ ಮತ್ತು ನನ್ನ ಮನೆಯನ್ನು ಕಸಿದುಕೊಳ್ಳಲಾಯಿತು. ನಿಮ್ಮ ಮುಖ್ಯಮಂತ್ರಿ ಕೆಸಿಆರ್ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಅದಕ್ಕಾಗಿಯೇ ಸಿಬಿಐ ಮತ್ತು ಇಡಿ ಅವರ ಮೇಲೆ ದಾಳಿ ಮಾಡುತ್ತಿಲ್ಲ. ಎಂಐಎಂ ದೇಶಾದ್ಯಂತ ಚುನಾವಣೆಗಳಲ್ಲಿ ಭಾಗವಹಿಸಿ ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೆಸಿಆರ್ ಚುನಾವಣೆಯಲ್ಲಿ ಸೋಲುತ್ತಾರೆ. ಇದು ಸಾಮಾನ್ಯ ನಾಗರಿಕರು ಮತ್ತು ಸಂಸ್ಥೆಯ ನಡುವಿನ ಹೋರಾಟವಾಗಿದೆ. ಹತ್ತು ವರ್ಷಗಳ ನಂತರವೂ ಅವರು ಜನರಿಂದ ದೂರ ಉಳಿದಿದ್ದಾರೆ. ಸಂಸತ್ತಿನಲ್ಲಿ ಒಬಿಸಿ ಜನಸಂಖ್ಯೆ ಎಷ್ಟು? ದೇಶವನ್ನು 90 ಅಧಿಕಾರಿಗಳು ಆಳುತ್ತಿದ್ದಾರೆ. ಅವರಲ್ಲಿ ಮೂವರು ಮಾತ್ರ ಒಬಿಸಿಗಳು. ಅದಕ್ಕಾಗಿಯೇ ದೇಶಕ್ಕೆ ಎಕ್ಸ್ ರೇ ಅಗತ್ಯವಿದೆ ಎಂದು ಹೇಳಲಾಗುತ್ತದೆ. ನೀವು ವೈದ್ಯರ ಬಳಿ ಹೋದಾಗ, ಅವರು ಕಾಯಿಲೆ ಏನೆಂದು ತಿಳಿಯಲು ಎಕ್ಸ್-ರೇ ತರುತ್ತಾರೆ. ನಮ್ಮ ಸರ್ಕಾರ ಬಂದಾಗ, ನಾವು ಮೊದಲು ತೆಲಂಗಾಣದ ಎಕ್ಸ್-ರೇ (ಜಾತಿ ಗಣತಿ) ತೆಗೆದುಕೊಳ್ಳುತ್ತೇವೆ ಎಂದು ಗಾಂಧಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+