ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಪುನರಾವರ್ತನೆಯಾಗುತ್ತಾ ಇಂದಿರಾ ಮ್ಯಾಜಿಕ್?

By ವಿಕಾಸ್ ನಂಜಪ್ಪ
|
Google Oneindia Kannada News

ಹೈದರಾಬಾದ್, ಜೂನ್ 2: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂಗಾರೆಡ್ಡಿ ಜಿಲ್ಲೆಗೆ ಗುರುವಾರ ಭೇಟಿ ನೀಡಿದ್ದಾರೆ. ಅವರ ಭೇಟಿಯನ್ನು 1979ರ ಇಂದಿರಾಗಾಂಧಿ ಭೇಟಿಗೆ ಹೋಲಿಸಲಾಗುತ್ತಿದೆ.

1979ರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ತೆಲಂಗಾಣ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧೀ ಭೇಟಿಯನ್ನೂ ಅದೇ ದೃಷ್ಠಿಯಲ್ಲಿ ನೋಡುತ್ತಿದ್ದಾರೆ.

Rahul Gandhi creates Indira magic in Telangana, Congress says they will return to power

1977ರಲ್ಲಿ ಜನತಾ ಪಕ್ಷದ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋದ ಸಂದರ್ಭದಲ್ಲಿ ಇಂದಿರಾ ಗಾಂಧೀ ಇದೇ ತೆಲಂಗಾಣದಲ್ಲಿ ರ್ಯಾಲಿಯೊಂದನ್ನು ಹಮ್ಮಿಕೊಂಡಿದ್ದರು. ಇದಾದ ಬಳಿಕ 1980ರಲ್ಲಿ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಅವರು ಇದೇ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಬರುವ ಮೇಡಕ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದು ಜಯಶಾಲಿಯಾಗಿದ್ದರು.

ರಾಹುಲ್ ಗಾಂಧಿಯ ರ್ಯಾಲಿಯಲ್ಲೂ ಜನ ಸಾಗರವೇ ಸೇರಿತ್ತು. ಅವತ್ತು ಇಂದಿರಾ ರ್ಯಾಲಿ ನೋಡಿದವರು ಅದೇ ರೀತಿ ರಾಹುಲ್ ಕೂಡಾ ಮ್ಯಾಜಿಕ್ ಮಾಡಲಿದ್ದಾರೆ ಎಂದು ನಂಬಿದ್ದಾರೆ.

ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ಕಾಂಗ್ರೆಸ್ ರಾಜಕಾರಣಿ ನರಸಯ್ಯ, "ತಾನು ಇಂದಿರಾ ಗಾಂಧಿ 1979ರಲ್ಲಿ ರ್ಯಾಲಿ ಮಾಡಿದಾಗ 25 ವರ್ಷದವನಾಗಿದ್ದೆ. ರ್ಯಾಲಿಯಲ್ಲಿ ಇಂದಿರಾ ಗಾಂಧಿ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಮೇಡಕ್ ಕ್ಷೇತ್ರವನ್ನು ಗೆದ್ದುಕೊಂಡ ನಂತರ ಹಲವು ಕೈಗಾರಿಕೆಗಳನ್ನು ಜಿಲ್ಲೆಗೆ ಪರಿಚಯಿಸಿದ್ದರು. ಲಕ್ಷಗಟ್ಟಲೆ ಉದ್ಯೋಗಳು ಸೃಷ್ಟಿಯಾಗಿದ್ದವು," ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಅದೇ ಮ್ಯಾಜಿಕನ್ನು ರಾಹುಲ್ ಗಾಂಧಿ ಮಾಡುತ್ತಾರಾ ಕಾದು ನೋಡಬೇಕು.

English summary
The visit by Rahul Gandhi to the Sangareddy district in Telangana is being compared to the one made by Indira Gandhi in 1979. Many in the Telangana Congress who were present at the 1979 rally drew similarities with the one addressed by Rahul Gandhi on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X