ಈ ಸರ್ಕಾರದ್ದು 'ನಾವಿಬ್ಬರು, ನಮಗಿಬ್ಬರು ನೀತಿ': ರಾಹುಲ್ ಗಾಂಧಿ ವಾಗ್ದಾಳಿ
ನವದೆಹಲಿ, ಫೆಬ್ರವರಿ 11: ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶವನ್ನು 'ನಾವಿಬ್ಬರು ನಮಗಿಬ್ಬರು' ನೀತಿಯಡಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ನಲ್ಲಿ ಗುರುವಾರ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು.
'ಹಮ್ ದೋ ಹಮಾರೆ ದೋ' ನೀತಿಯು ಅಪನಗದೀಕರಣ, ಸರಕು ಮತ್ತು ಸೇವೆಗಳ ತೆರಿಗೆ, ಲಾಕ್ಡೌನ್ ಮತ್ತು ಇತ್ತೀಚಿನ ಮೂರು ಕೃಷಿ ಕಾಯ್ದೆಗಳಲ್ಲಿ ಜಾರಿಯಲ್ಲಿದೆ ಎಂದು ರಾಹುಲ್ ಟೀಕಿಸಿದರು.
''ಕುಟುಂಬ ಯೋಜನೆಗೆ ನಾವು ಬಳಸುತ್ತಿದ್ದ 'ನಾವಿಬ್ಬರು, ನಮಗಿಬ್ಬರು' ಎಂಬ ಘೋಷಣೆ ನಿಮಗೆಲ್ಲರಿಗೂ ನೆನಪಿರಬೇಕು. ಆ ಘೋಷಣೆಗೆ ಈ ಸರ್ಕಾರ ಹೊಸ ಅರ್ಥ ನೀಡುತ್ತಿದೆ. ಈ ಸರ್ಕಾರವು ನಾಲ್ಕು ಜನರಿಂದ ನಡೆಯುತ್ತಿದೆ. 'ನಾವಿಬ್ಬರು. ನಮಗಿಬ್ಬರು''' ಎಂದು ಲೇವಡಿ ಮಾಡಿದರು.
ಆದರೆ ರಾಹುಲ್ ಯಾರ ಹೆಸರನ್ನೂ ಉಲ್ಲೇಖಿಸಲಿಲ್ಲ. ಬದಲಾಗಿ ಪ್ರತಿಯೊಬ್ಬರಿಗೂ ಅವರು ಗೊತ್ತು ಎಂದರು. ರೈತರ ಪ್ರತಿಭಟನೆ ಕಾಣಿಸುವ ರೀತಿಯಂತೆ ಇಲ್ಲ. ಇದು ಅನೇಕರಿಗೆ ಉಳಿವಿನ ಹೋರಾಟ ಕೂಡ. ಇದು ರೈತರ ಪ್ರತಿಭಟನೆ ಎಂದಷ್ಟೇ ನೀವು ಭಾವಿಸುತ್ತಿದ್ದೀರಿ. ಆದರೆ ಅದು ತಪ್ಪು. ಇದು ಭಾರತದ ಪ್ರತಿಭಟನೆ. ರೈತರು ಅದನ್ನು ಮುನ್ನಡೆಸುತ್ತಿದ್ದಾರಷ್ಟೇ ಎಂದರು. ಮುಂದೆ ಓದಿ.

ಆರ್ಥಿಕತೆಯೇ ನಾಶವಾಗಲಿದೆ
'ಇದಕ್ಕೆ ಕೃಷಿ ಕಾಯ್ದೆಗಳು ಕಾರಣ. ಇದು ರೈತರನ್ನು ಸಂಕಷ್ಟಕ್ಕೆ ನೂಕುವುದು ಮಾತ್ರವಲ್ಲ, ಮಧ್ಯವರ್ತಿಗಳನ್ನು ಮುಗಿಸುತ್ತದೆ ಮತ್ತು ಸಣ್ಣ ಅಂಗಡಿ ಮಾಲೀಕರಿಗೆ, ಸಣ್ಣ ಉದ್ಯಮಗಳ ಪಾಲಿಗೆ ವಿನಾಶಕಾರಿ ಪರಿಣಾಮ ಬೀರುತ್ತದೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮಶೀಲರಿಗೆ ಭಾರಿ ಹೊಡೆತ ನೀಡುತ್ತದೆ. ಇದರಿಂದ ದೇಶದ ಗ್ರಾಮೀಣ ಆರ್ಥಿಕತೆ ನಾಶವಾಗುತ್ತದೆ' ಎಂದು ಆರೋಪಿಸಿದರು.

ಗದ್ದಲ ಸೃಷ್ಟಿಸಿದ ಬಿಜೆಪಿ
ರಾಹುಲ್ ಗಾಂಧಿ ಭಾಷಣದ ಮಧ್ಯೆ ಬಿಜೆಪಿ ಸಂಸದರು ತೀವ್ರ ಗದ್ದಲ ಸೃಷ್ಟಿಸುವ ಮೂಲಕ ಅವರ ಮಾತಿಗೆ ಅಡ್ಡಿಪಡಿಸಿದರು. ಇದು ಬಜೆಟ್ ಅಧಿವೇಶನ ಬಜೆಟ್ ಕುರಿತಾದ ವಿಚಾರದ ಬಗ್ಗೆ ಚರ್ಚಿಸಿ ಎಂದು ಆಡಳಿತ ಪಕ್ಷದವರು ಆಗ್ರಹಿಸಿದರು. 'ಕೃಷಿ ಕೂಡ ಬಜೆಟ್ನ ಭಾಗ' ಎಂದು ರಾಹುಲ್ ತಿರುಗೇಟು ನೀಡಿದರು.

ಸ್ನೇಹಿತರಿಗೆ ಲಾಭ
'ಪ್ರಮುಖ ಉದ್ಯಮಿಗಳಿಗೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಮೊದಲ ಕೃಷಿ ಕಾಯ್ದೆಯ ಉದ್ದೇಶ. ಅವರಲ್ಲಿ ಒಬ್ಬ ಉದ್ಯಮಿ ಎಲ್ಲರಿಗೂ ತಿಳಿದಿರುವಂತೆ ಸರ್ಕಾರದ ಮೊದಲ ಸ್ನೇಹಿತ. ಎರಡನೆಯ ಕಾಯ್ದೆಯ ಉದ್ದೇಶವೆಂದರೆ ಕಾನೂನಿನ ಲಾಭವು ಅವರ ಎರಡನೆಯ ಸ್ನೇಹಿತನಿಗೆ ಸಿಗುವಂತೆ ಮಾಡುವುದಾಗಿದೆ' ಎಂದು ಆರೋಪಿಸಿದರು.

ಬೆನ್ನೆಲುವು ತುಂಡು ಮಾಡಿ ತಿನ್ನಿಸುತ್ತಾರೆ
'ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ. ಅವರು ರೈತರು, ಕಾರ್ಮಿಕರು, ಸಣ್ಣ ಪುಟ್ಟ ಅಂಗಡಿ ಮಾಲೀಕರು, ಮಧ್ಯವರ್ತಿಗಳನ್ನು ಒಡೆಯುವುದರ ಮೂಲಕ ಭಾರತದ ಬೆನ್ನೆಲುಬನ್ನು ತುಂಡುಮಾಡುವುದು ಮತ್ತು ಅದರ ತುಣುಕುಗಳನ್ನು ಈ ಸ್ನೇಹಿತರಾದ ದೊಡ್ಡ ಉದ್ಯಮಿಗಳಿಗೆ ತಿನ್ನಿವುದಾಗಿದೆ' ಎಂದು ಟೀಕಿಸಿದರು.

ನಿಮ್ಮ ಸೋಲು ಖಚಿತ
'ಈ ದೇಶದ ರೈತರು ಮತ್ತು ಕಾರ್ಮಿಕರು ನಿಮ್ಮನ್ನು ನಾಶ ಮಾಡುತ್ತಾರೆ. ಅವರ ಎದುರು ನೀವು ಗೆಲ್ಲಲಾರಿರಿ. ರೈತರು ಒಂದು ಇಂಚ್ ಕೂಡ ಹಿಂದೆ ಸರಿಯಲಾರರು. ನೀವು ಈ ಕಾಯ್ದೆಗಳನ್ನು ರದ್ದುಪಡಿಸಲೇಬೇಕು. ಕೊನೆಯಲ್ಲಿ ನೀವು ಸೋಲುತ್ತೀರಿ. ಇದು ಖಚಿತ' ಎಂದು ಎಚ್ಚರಿಸಿದರು.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications