ಸಿಂಗಪುರ: ಭಾರತೀಯ ಮೂಲದ ಸಿಇಒಗಳ ಜೊತೆ ರಾಹುಲ್ ಚರ್ಚೆ
ಸಿಂಗಪುರ, ಮಾರ್ಚ್ 08: ಮೂರು ದಿನಗಳ ಸಿಂಗಪುರ ಮತ್ತು ಮಲೇಶಿಯಾ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಲ್ಲಿನ ಭಾರತೀಯ ಮೂಲದ ಸಿಇಒಗಳ ಜೊತೆ ಮಾತುಕತೆ ನಡೆಸಿದರು.
ಉದ್ಯೋಗ, ಬಂಡವಾಳ ಮತ್ತು ಭಾರತದ ಆರ್ಥಿಕ ಸ್ಥಿತಿಗತಿಯ ಬಗ್ಗೆ ರಾಹುಲ್ ಗಾಂಧಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 'ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಕ್ಕೆ ವಲಸೆ ಬರುವ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿದೆ. ಎಲ್ಲರನ್ನೂ ಒಟ್ಟಾಗಿ ಪ್ರಗತಿಯ ಪಥದತ್ತ ಕೊಂಡೊಯ್ಯುವ ಬದಲಾವಣೆ ನಮಗೆ ಅಗತ್ಯವಿದೆ' ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
Congress President Rahul Gandhi will address the Lee Kuan Yew School of Public Policy, National University of Singapore.
— Congress (@INCIndia) March 6, 2018
Catch him live at https://t.co/H6AuFgT0lH on March 8, 2018 at 2.45 PM pic.twitter.com/xP9wo0peql
ಇಂದು(ಮಾ.8) ಅವರು ಸಿಂಗಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ ಲೀ ಕೌನ್ ಯು ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಲಾಗಿದೆ.












Click it and Unblock the Notifications