ಜಾರ್ಖಂಡ್ ನ 10ನೇ ಮುಖ್ಯಮಂತ್ರಿ ರಘುಬರ್ದಾಸ್
ರಾಂಚಿ, ಡಿ.26- : ಜಾರ್ಖಂಡ್ನ ನೂತನ ಮುಖ್ಯಮಂತ್ರಿಯಾಗಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಘುಬರ್ದಾಸ್ ಆಯ್ಕೆಯಾಗಿದ್ದಾರೆ. ಶಾಸಕಾಂಗ ಸಭೆಯಲ್ಲಿ ರಘುಬರ್ದಾಸ್ ಅವರನ್ನು ರಾಜ್ಯದ 10ನೇ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಜಾರ್ಖಂಡ್ನ ಮೊಟ್ಟ ಮೊದಲ ಆದಿವಾಸಿಯೇತರ ಮುಖ್ಯಮಂತ್ರಿಯಾಗಿ ರಘುಬರ್ ದಾಸ್ ಅವರು ಮುಂದಿನ ವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಕಳೆದ 14 ವರ್ಷಗಳಿಂದ ಬುಡಕಟ್ಟು ಜನಾಂಗಕ್ಕೆ ಸೇರಿದ ಮುಖ್ಯಮಂತ್ರಿಗಳನ್ನು ಜಾರ್ಖಂಡ್ ಕಂಡಿತ್ತು.
ಜಾರ್ಖಂಡ್
ರಾಜ್ಯ
ಉಸ್ತುವಾರಿಯಾಗಿ
ನೇಮಕಗೊಂಡಿದ್ದ
ಕೇಂದ್ರ
ಸಚಿವ
ಜೆ.ಪಿ.ನಡ್ಡಾ
ಅವರು
ಶಾಸಕರ
ಅಭಿಪ್ರಾಯ
ಸಂಗ್ರಹಿಸಿ
ರಘುಬರ್ದಾಸ್
ಅವರನ್ನು
ಶಾಸಕಾಂಗ
ಪಕ್ಷದ
ನಾಯಕರನ್ನಾಗಿ
ಆಯ್ಕೆ
ಮಾಡಿ
ಘೋಷಣೆ
ಮಾಡಿದರು.
ಎರಡು ಬಾರಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಜೆಮ್ಷೆಡ್ಪುರ್ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸತತ ಐದು ಬಾರಿ ಗೆದ್ದಿರುವ ರಘುಬರ್ದಾಸ್ ಈ ಹಿಂದೆ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಟಾಟಾ ಸ್ಟೀಲ್ ಕಂಪೆನಿಯಲ್ಲಿ ಕಾರ್ಮಿಕರಾಗಿ ಉದ್ಯೋಗಕ್ಕೆ ಸೇರಿಕೊಂಡಿದ್ದ ಅವರು ನೇರ ವ್ಯಕ್ತಿತ್ವ ಮತ್ತು ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಹೆಸರುವಾಸಿಯಾದವರು.
ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಗಳ ಲ್ಲಿ ಮುಂಚೂಣಿಯಲ್ಲಿದ್ದ ಅವರು ಎಬಿವಿಪಿ ಮೂಲಕ ಗುರುತಿಸಿಕೊಂಡು 1980ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. 2000 ಮತ್ತು 2009ರಲ್ಲಿ ಉಪಮುಖ್ಯಮಂತ್ರಿಯಾಗಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.
ಈ ಹಿಂದಿನ ಸರ್ಕಾರದಲ್ಲಿ ಬುಡಕಟ್ಟು ಜನಾಂಗದವರು ಮಾತ್ರ ಸಿಎಂಗಳಾಗಿದ್ದರು. ಈ ಸಂಪ್ರದಾಯವನ್ನು ಬಿಜೆಪಿ ಮುರಿದಿದೆ. ಅರ್ಜುನ್ ಮುಂಡಾ ಹಾಗೂ ಬಾಬುಲಾಲ್ ಮರಾಂಡಿ ನಂತರ ಪ್ರಥಮ ಬಾರಿಗೆ ರಘುಬರ್ ದಾಸ್ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.(ಪಿಟಿಐ)