Kanpur: ಬಾಲಕಿಯನ್ನು ಕೊಂದು ಅಂಗಾಂಗ ತಿಂದ ನರಭಕ್ಷಕರಿಗೆ ಈ ಶಿಕ್ಷೆ!
ಕಾನ್ಪುರ ಡಿಸೆಂಬರ್ 18: ಏಳು ವರ್ಷದ ಬಾಲಕಿಯನ್ನು ಕೊಂದು ಆಕೆಯ ಅಂಗಾಂಗಗಳನ್ನು ತಿಂದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ದಂಪತಿ ಈ ಕ್ರೂರ ಕೃತ್ಯವನ್ನು ಎಸಗಿರುವುದು ಸಾಬೀತಾಗಿದೆ. ಇವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ 2020 ನವೆಂಬರ್ 14ರಂದು ಈ ಘಟನೆ ನಡೆದಿತ್ತು. ಪರಶುರಾಮ್ ಮತ್ತು ಸುನೈನಾ ಅವರ ಸೋದರಳಿಯ ಅಂಕುಲ್ ಹಾಗೂ ಅವರ ಸಹವರ್ತಿ ವೀರೇನ್ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಸತತ ಮೂರು ವರ್ಷಗಳ ವಿಚಾರಣೆಯ ಬಳಿಕ ಜಿಲ್ಲಾ ನ್ಯಾಯಾಧೀಶ (ಪೋಕ್ಸೊ ಕಾಯ್ದೆ) ಬಕರ್ ಶಮೀಮ್ ರಿಜ್ವಿ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಅಂಕುಲ್ ಮತ್ತು ವೀರೇನ್ಗೆ ನ್ಯಾಯಾಲಯವು 45,000 ರೂಪಾಯಿ ದಂಡವನ್ನು ವಿಧಿಸಿದ್ದು, ಪರಶುರಾಮ್ ಮತ್ತು ಸುನೈನಾ ಅವರಿಗೆ ತಲಾ 20,000 ರೂಪಾಯಿ ದಂಡ ವಿಧಿಸಿದೆ. ಘಟಂಪುರ ಗ್ರಾಮದ ನಿವಾಸಿ ಕುಮಾರ್ ತ್ರಿಪಾಠಿ ಅವರು ತಮ್ಮ ಏಳು ವರ್ಷದ ಮಗಳು ನವೆಂಬರ್ 14, 2020 ರಂದು ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಮರುದಿನ ಆಕೆಯ ವಿಕೃತ ದೇಹವು ಗ್ರಾಮದ ಹೊರಗಿನ ಹೊಲದಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಪರಶುರಾಮ್, ಸುನೈನಾ, ಅಂಕುಲ್ ಮತ್ತು ವೀರೇನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಆದ್ದರಿಂದ ಒಬ್ಬ ಹುಡುಗಿಯ ಯಕೃತ್ತನ್ನು ಸೇವಿಸುವಂತೆ ಕೇಳಿದರು. ವಿವಾಹವಾಗಿ 19 ವರ್ಷಗಳಾದರೂ ಪರಶುರಾಮ್ ಮತ್ತು ಸುನೈನಾ ಅವರಿಗೆ ಮಗುವನ್ನು ಹೆರಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರಿಗೆ ಬಾಲಕಿಯ ಯಕೃತ್ತನ್ನು ಸೇವಿಸುವಂತೆ ಕೇಳಿದರು.
ಅಂಕುಲ್ ಮತ್ತು ವೀರೇನ್ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿ ಕೊಂದಿದ್ದಾರೆ ಎಂದು ವರದಿ ತಿಳಿಸಿದೆ. ಕೊಂದ ನಂತರ ಅವರು ಬಾಲಕಿಯ ಯಕೃತ್ತನ್ನು ಹೊರತೆಗೆದು ಪರಶುರಾಮ್ ಮತ್ತು ಸುನೈನಾಗೆ ನೀಡಿದ್ದಾರೆ. ನಾಲ್ವರಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಶನಿವಾರ ಪ್ರಕಟಿಸಿದೆ.
ತನಿಖೆಯ ನಂತರ, ಘಟಂಪುರ ಪೊಲೀಸರು 37 ದಿನಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಿದರು. ನ್ಯಾಯಾಲಯವು ಎಲ್ಲಾ ನಾಲ್ವರು ಆರೋಪಿಗಳನ್ನು ಬುಧವಾರ ತಪ್ಪಿತಸ್ಥರೆಂದು ಘೋಷಿಸಿತು ಮತ್ತು ಶನಿವಾರ ಶಿಕ್ಷೆಯ ಪ್ರಮಾಣವನ್ನು ಘೋಷಿಸಿತು. ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ಪ್ರದೀಪ್ ಪಾಂಡೆ, 'ಮುಗ್ದ ಮಗುವನ್ನು ಕೊಂದ ಅವಳ ಪಿತ್ತಜನಕಾಂಗವನ್ನು ಹೊರತೆಗೆದು ತಿನ್ನುವುದು ಅನಾಗರಿಕ ಅಪರಾಧವಾಗಿದೆ. ಮಾತ್ರಿಕ ಅಭ್ಯಾಸವೇ ಕೊಲೆಯ ಹಿಂದಿನ ಮುಖ್ಯ ಕಾರಣವಾಗಿತ್ತು. ನಾವು ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದೆವು ಆದರೆ ನ್ಯಾಯಾಲಯವು ಅವರಿಗೆ ಜೀವಾವಧಿ ಶಕ್ಷೆ ವಿಧಿಸಿತು' ಎಂದು ತಿಳಿಸಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications