Get Updates
Get notified of breaking news, exclusive insights, and must-see stories!

ಆಡಬಾರದ ಮಾತಾಡಿ ತಪರಾಕಿ ಬಿದ್ದ ಮೇಲೆ ಕೈ ಜೋಡಿಸಿದಳೆ ರಾಖಿ!

ತಮಿಳುನಾಡಿನಲ್ಲಿ ಉಪ ಚುನಾವಣೆ ರಂಗೇರಿದೆ ಜಯಲಲಿತಾ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಎಐಎಡಿಎಂಕೆಯಲ್ಲಿ ಎರಡು ಬಣವಾಗಿ ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಬಣದಿಂದ ಪ್ರತ್ಯೇಕವಾಗಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಅದರಲ್ಲೂ ಒಪಿಎಸ್ ಬಣದವರು ಜಯಲಲಿತಾ ಪಾರ್ಥಿವ ಶರೀರದ ಪ್ರತಿಕೃತಿ ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ.

ಇನ್ನು ವಾಲ್ಮೀಕಿ ಬಗ್ಗೆ ಬಾಯಿಗೆ ಬಂದಹಾಗೆ ಮಾತನಾಡಿದ್ದ ಬಾಲಿವುಡ್ ನಟಿ ಗುರುವಾರ ಮುಂಬೈನಲ್ಲಿ ಮಾಧ್ಯಮದವರ ಎದುರು ಕೈ ಮುಗಿದು ಕ್ಷಮೆ ಕೇಳಿದ್ದಾರೆ. ಬಾಲಿವುಡ್ ಚಿತ್ರಗಳ ನಿರ್ಮಾಪಕಿ ಏಕ್ತಾ ಕಪೂರ್ ತನ್ನ ತಂದೆ ಜತೆಗೂಡಿ ಅಜ್ಮೇರ್ ನ ಖ್ವಾಜಾ ಮೊಯಿನುದ್ದೀನ್ ದರ್ಗಾಕ್ಕೆ ಭೇಟಿ ನೀಡಿದ್ದಾರೆ.[ನಟಿ ರಾಖಿ ಸಾವಂತ್ ಬಂಧಿಸಿದ ಪಂಜಾಬ್ ಪೊಲೀಸರು]

ಉತ್ತರಪ್ರದೇಶದಲ್ಲಿ ವರ್ಷಾನುಗಟ್ಟಲೆ ಮಂಗಗಳ ಜತೆಗೆ ವಾಸವಿದ್ದು, ಅವುಗಳ ಗುಣಾವಳಿಗಳೇ ರೂಢಿಸಿಕೊಂಡಿದ್ದ ಎಂಟು ವರ್ಷದ ಬಾಲಕಿಯ ರಕ್ಷಣೆ ಮಾಡಲಾಗಿದೆ. ಪಾಪ, ಆಕೆ ಮಾತೇ ಬರುತ್ತಿರಲಿಲ್ಲವಂತೆ. ಕೈ-ಕಾಲು ಎರಡೂ ಬಳಸಿ ನಡೆದಾಡುತ್ತಿದ್ದವಳಿಗೆ ಈಗ ಮನುಷ್ಯರಂತೆ ಬದುಕುವ ತರಬೇತಿ ಕೊಡಲಾಗುತ್ತಿದೆ.

ಇವುಗಳ ಜತೆಗೆ ಎಲ್ ಕೆ ಅಡ್ವಾಣಿ ಹಾಗೂ ದಲೈ ಲಾಮಾರ ಫೋಟೋಗಳು ಇವೆ. ಇವುಗಳು ಹೇಗಿವೆ ಎಂಬುದನ್ನು ತಿಳಿಸಿ.[ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಪುನರ್ ಪರಿಶೀಲನೆಗೆ ಸಿಬಿಐ ಮನವಿ]

ಮಂಗಗಳ ಜತೆಗೆ ಇದ್ದವಳ ರಕ್ಷಣೆ

ಮಂಗಗಳ ಜತೆಗೆ ಇದ್ದವಳ ರಕ್ಷಣೆ

ಉತ್ತರ ಪ್ರದೇಶದಲ್ಲಿ ಈ ಎಂಟು ವರ್ಷದ ಬಾಲಕಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಯ್ಯೋ, ರಕ್ಷಣೆ ಮಾಡುವಂಥದ್ದು ಏನಾಯಿತು ಅಂತೀರಾ? ಕಟಾರ್ನಿಘಾಟ್ ಸಂರಕ್ಷಿತಾರಣ್ಯದ ಮೋಟಿಪುರ್ ಭಾಗದಲ್ಲಿ ಈಕೆ ಮಂಗಗಳ ಗುಂಪಿನೊಂದಿಗೆ ಇರುವಾಗ ಪೊಲಿಸರಿಗೆ ಕಂಡುಬಂದಿದ್ದಾಳೆ. ಅವುಗಳ ಜತೆಗೆ ವಾಸವಿದ್ದ ಈ ಬಾಲಕಿಗೆ ಮಾತು ಸಹ ಬರುತ್ತಿಲ್ಲ.

ಅಜ್ಮೇರ್ ದರ್ಗಾದಲ್ಲಿ ಏಕ್ತಾ ಕಪೂರ್

ಅಜ್ಮೇರ್ ದರ್ಗಾದಲ್ಲಿ ಏಕ್ತಾ ಕಪೂರ್

ಹಿಂದಿ ಚಿತ್ರನಟ ಜಿತೇಂದ್ರ ತಮ್ಮ ಮಗಳು ಏಕ್ತಾ ಕಪೂರ್ ಜತೆಗೆ ಅಜ್ಮೇರ್ ನ ಹಜರತ್ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ದರ್ಗಾಗೆ ಗುರುವಾರ ಭೇಟಿ ನೀಡಿದಾಗ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಚಿತ್ರವಿದು.

ರಾಖಿ ಸಾವಂತ್ ನಮಸ್ಕಾರ

ರಾಖಿ ಸಾವಂತ್ ನಮಸ್ಕಾರ

ವಾಲ್ಮೀಕಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ, ಸುದ್ದಿಯಾಗಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ಗುರುವಾರ ಮಾಧ್ಯಮದವರ ಎದುರು ಕೈ ಮುಗಿಯುತ್ತಾ ಕಂಡುಬಂದಿದ್ದು ಹೀಗೆ.

ಚುನಾವಣೆ ಪ್ರಚಾರ ಹೀಗೂ ಮಾಡ್ತಾರೆ

ಚುನಾವಣೆ ಪ್ರಚಾರ ಹೀಗೂ ಮಾಡ್ತಾರೆ

ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಹೋಲುವಂಥ ಪ್ರತಿಕೃತಿಯನ್ನು ಇಟ್ಟುಕೊಂಡು ಒ ಪನ್ನೀರ್ ಸೆಲ್ವಂ ಬಣ ಆರ್ ಕೆ ನಗರ್ ಉಪಚುನಾವಣೆಯಲ್ಲಿ ಪ್ರಚಾರ ನಡೆಸುತ್ತಿದೆ.

ಹೃಷಿಕೇಶದಲ್ಲಿ ಪೂಜೆ

ಹೃಷಿಕೇಶದಲ್ಲಿ ಪೂಜೆ

ಹೃಷಿಕೇಶದ ಪರಮಾರ್ಥ್ ನಿಕೇತನದಲ್ಲಿ ಗುರುವಾರ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಸ್ವಾಮಿ ಚಿದಾನಂದ ಸರಸ್ವತಿಜೀ ಜತೆಗೂಡಿ ಪೂಜೆ ಸಲ್ಲಿಸಿದರು.

ದಲೈ ಲಾಮಾ ಅಧ್ಯಾತ್ಮ

ದಲೈ ಲಾಮಾ ಅಧ್ಯಾತ್ಮ

ಟಿಬೆಟನ್ ಧರ್ಮ ಗುರು ದಲೈ ಲಾಮಾ ಅವರು ಅರುಣಾಚಲ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಂಡುಬಂದಿದ್ದು ಹೀಗೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+