ಇವಿಎಂ ಟ್ಯಾಂಪರ್ ಮಾಡಿ ತೋರಿಸಿ - ಇಸಿ ಸವಾಲ್
ರಾಜಕೀಯ ಪಕ್ಷಗಳು, ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಚಾಲೆಂಜ್ ಮಾಡಿರುವ ಚುನಾವಣಾ ಆಯೋಗ ಇವಿಎಂ ತಿರುಚಬಹುದು ಎಂಬುದನ್ನು ಬಂದು ಸಾಬೀತುಪಡಿಸಿ ನಮಗೆ ತೋರಿಸಿ ಎಂದು ಹೇಳಿದೆ.
ನವದೆಹಲಿ, ಏಪ್ರಿಲ್ 13: ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಗಳನ್ನು ತಿರುಚಬಹುದು ಎಂಬ ಕಾಂಗ್ರೆಸ್, ಎಡಪಕ್ಷಗಳು ಮತ್ತು ಎಎಪಿಯ ಆರೋಪಕ್ಕೆ ಚುನಾವಣಾ ಆಯೋಗ ಹೊಸ ಚಾಲೆಂಜ್ ಮುಂದಿಟ್ಟಿದೆ.
ರಾಜಕೀಯ ಪಕ್ಷಗಳು, ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಚಾಲೆಂಜ್ ಮಾಡಿರುವ ಚುನಾವಣಾ ಆಯೋಗ ಇವಿಎಂ ತಿರುಚಬಹುದು ಎಂಬುದನ್ನು ಬಂದು ಸಾಬೀತುಪಡಿಸಿ ಎಂದು ಹೇಳಿದೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ LIVE]

ವಿಚಿತ್ರವೆಂದರೆ 2009ರಲ್ಲೂ ಇದೇ ರೀತಿ ಇವಿಎಂಗಳ ವಿರುದ್ಧ ಹಲವು ರಾಜಕೀಯಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದವು. ಆ ಸಂದರ್ಭದಲ್ಲಿಯೂ ಚುನಾವಣಾ ಆಯೋಗ ಇದೇ ರೀತಿಯ ಚಾಲೆಂಜ್ ಮುಂದಿಟ್ಟಿತ್ತು.
ಈ ಹೊಸ ಚಾಲೆಂಜ್ ಪ್ರಕಾರ ಚುನಾವಣಾ ಆಯೋಗ ತನ್ನ ಕೇಂದ್ರ ಕಚೇರಿಯಲ್ಲಿ ಒಂದು ವಾರದಿಂದ 10 ದಿನಗಳ ಕಾಲ ಇವಿಎಂಗಳನ್ನು ಇಡಲಿದೆ. ಸಂಶಯ ಇದ್ದವರು ಬಂದು ಈ ಇವಿಎಂಗಳನ್ನು ಟ್ಯಾಂಪರ್ ಮಾಡಬಹುದು ಎಂಬುದನ್ನು ಸಾಬೀತುಮಾಡಬಹುದು. ಚುನಾವಣಾ ಆಯೋಗದ ತಂತ್ರಜ್ಞರ ತಂಡ ಸಾಬೀತು ಮಾಡಿದನ್ನು ಗಮನಿಸಲಿದೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಸುದ್ದಿ-ಗದ್ದಲ!]
ಈ ಮೂಲಕ ಮತದಾರರ ಮತಗಳು ಸುರಕ್ಷಿತವಾಗಿವೆ ಎಂಬುದನ್ನು ಚುನಾವನಾ ಆಯೋಗ ಬಿಂಬಿಸಲು ಹೊರಟಿದೆ.
ಆದರೆ ಈ ರೀತಿ ನಡೆಸುವ ಪ್ರಯೋಗಗಳನ್ನು ಲೈವ್ ಮಾಡಲು ಯಾವುದೇ ಚಾನಲ್ಲುಗಳಿಗೆ ಅವಕಾಶ ನೀಡಿಲ್ಲ. ಬದಲಿಗೆ ಪ್ರತೀ ಪ್ರದರ್ಶನಗಳನ್ನೂ ವಿಡಿಯೋ ಮಾಡಿ ಚುನಾವಣಾ ಆಯೋಗದ ವೆಬ್ಸೈಟ್ ಗೆ ಅಪ್ಲೋಡ್ ಮಾಡಲಾಗುತ್ತದೆ.
2009ರ ಆಗಸ್ಟ್ 3 ರಿಂದ 8ರ ನಡುವೆ 100 ಇವಿಎಂಗಳನ್ನು ತನ್ನ ಕೇಂದ್ರ ಕಚೇರಿಯಲ್ಲಿಟ್ಟು ಇದೇ ರೀತಿ ಚಾಲೆಂಜ್ ನೀಡಿದಾಗ ಯಾವುದೇ ತಾಂತ್ರಿಕ ತಜ್ಞರಾಗಲೀ, ರಾಜಕೀಯ ಪಕ್ಷದವರಿಗಾಗಲೀ ಇವಿಎಂ ತಿರುಚಲು ಸಾಧ್ಯವಾಗಿರಲಿಲ್ಲ. ಹೀಗಿದ್ದು ಈ ಹೊಸ ಚಾಲೆಂಜನ್ನು ಚುನಾವಣಾ ಆಯೋಗ ನೀಡಿದೆ. ಈ ಬಾರಿ ಯಾರಾದರೂ ಸಾಬೀತಿಪಡಿಸಿ ತೋರಿಸುತ್ತಾರೋ ಕಾದು ನೋಡಬೇಕಾಗಿದೆ.
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications