ಇವಿಎಂ ಟ್ಯಾಂಪರ್ ಮಾಡಿ ತೋರಿಸಿ - ಇಸಿ ಸವಾಲ್
ರಾಜಕೀಯ ಪಕ್ಷಗಳು, ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಚಾಲೆಂಜ್ ಮಾಡಿರುವ ಚುನಾವಣಾ ಆಯೋಗ ಇವಿಎಂ ತಿರುಚಬಹುದು ಎಂಬುದನ್ನು ಬಂದು ಸಾಬೀತುಪಡಿಸಿ ನಮಗೆ ತೋರಿಸಿ ಎಂದು ಹೇಳಿದೆ.
ನವದೆಹಲಿ, ಏಪ್ರಿಲ್ 13: ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಗಳನ್ನು ತಿರುಚಬಹುದು ಎಂಬ ಕಾಂಗ್ರೆಸ್, ಎಡಪಕ್ಷಗಳು ಮತ್ತು ಎಎಪಿಯ ಆರೋಪಕ್ಕೆ ಚುನಾವಣಾ ಆಯೋಗ ಹೊಸ ಚಾಲೆಂಜ್ ಮುಂದಿಟ್ಟಿದೆ.
ರಾಜಕೀಯ ಪಕ್ಷಗಳು, ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಚಾಲೆಂಜ್ ಮಾಡಿರುವ ಚುನಾವಣಾ ಆಯೋಗ ಇವಿಎಂ ತಿರುಚಬಹುದು ಎಂಬುದನ್ನು ಬಂದು ಸಾಬೀತುಪಡಿಸಿ ಎಂದು ಹೇಳಿದೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ LIVE]

ವಿಚಿತ್ರವೆಂದರೆ 2009ರಲ್ಲೂ ಇದೇ ರೀತಿ ಇವಿಎಂಗಳ ವಿರುದ್ಧ ಹಲವು ರಾಜಕೀಯಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದವು. ಆ ಸಂದರ್ಭದಲ್ಲಿಯೂ ಚುನಾವಣಾ ಆಯೋಗ ಇದೇ ರೀತಿಯ ಚಾಲೆಂಜ್ ಮುಂದಿಟ್ಟಿತ್ತು.
ಈ ಹೊಸ ಚಾಲೆಂಜ್ ಪ್ರಕಾರ ಚುನಾವಣಾ ಆಯೋಗ ತನ್ನ ಕೇಂದ್ರ ಕಚೇರಿಯಲ್ಲಿ ಒಂದು ವಾರದಿಂದ 10 ದಿನಗಳ ಕಾಲ ಇವಿಎಂಗಳನ್ನು ಇಡಲಿದೆ. ಸಂಶಯ ಇದ್ದವರು ಬಂದು ಈ ಇವಿಎಂಗಳನ್ನು ಟ್ಯಾಂಪರ್ ಮಾಡಬಹುದು ಎಂಬುದನ್ನು ಸಾಬೀತುಮಾಡಬಹುದು. ಚುನಾವಣಾ ಆಯೋಗದ ತಂತ್ರಜ್ಞರ ತಂಡ ಸಾಬೀತು ಮಾಡಿದನ್ನು ಗಮನಿಸಲಿದೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಸುದ್ದಿ-ಗದ್ದಲ!]
ಈ ಮೂಲಕ ಮತದಾರರ ಮತಗಳು ಸುರಕ್ಷಿತವಾಗಿವೆ ಎಂಬುದನ್ನು ಚುನಾವನಾ ಆಯೋಗ ಬಿಂಬಿಸಲು ಹೊರಟಿದೆ.
ಆದರೆ ಈ ರೀತಿ ನಡೆಸುವ ಪ್ರಯೋಗಗಳನ್ನು ಲೈವ್ ಮಾಡಲು ಯಾವುದೇ ಚಾನಲ್ಲುಗಳಿಗೆ ಅವಕಾಶ ನೀಡಿಲ್ಲ. ಬದಲಿಗೆ ಪ್ರತೀ ಪ್ರದರ್ಶನಗಳನ್ನೂ ವಿಡಿಯೋ ಮಾಡಿ ಚುನಾವಣಾ ಆಯೋಗದ ವೆಬ್ಸೈಟ್ ಗೆ ಅಪ್ಲೋಡ್ ಮಾಡಲಾಗುತ್ತದೆ.
2009ರ ಆಗಸ್ಟ್ 3 ರಿಂದ 8ರ ನಡುವೆ 100 ಇವಿಎಂಗಳನ್ನು ತನ್ನ ಕೇಂದ್ರ ಕಚೇರಿಯಲ್ಲಿಟ್ಟು ಇದೇ ರೀತಿ ಚಾಲೆಂಜ್ ನೀಡಿದಾಗ ಯಾವುದೇ ತಾಂತ್ರಿಕ ತಜ್ಞರಾಗಲೀ, ರಾಜಕೀಯ ಪಕ್ಷದವರಿಗಾಗಲೀ ಇವಿಎಂ ತಿರುಚಲು ಸಾಧ್ಯವಾಗಿರಲಿಲ್ಲ. ಹೀಗಿದ್ದು ಈ ಹೊಸ ಚಾಲೆಂಜನ್ನು ಚುನಾವಣಾ ಆಯೋಗ ನೀಡಿದೆ. ಈ ಬಾರಿ ಯಾರಾದರೂ ಸಾಬೀತಿಪಡಿಸಿ ತೋರಿಸುತ್ತಾರೋ ಕಾದು ನೋಡಬೇಕಾಗಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications