Breaking: ಬ್ರಿಟನ್ನ ರಾಣಿ ಎರಡನೇ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ
ನವದೆಹಲಿ, ಸೆ.14: ಇತ್ತಿಚೆಗೆ ನಿಧನರಾದ ವಿಶ್ವದ ಅತ್ಯಂತ ಹಿರಿಯ ಬ್ರಿಟನ್ನ ರಾಣಿ ಎರಡನೇ ಎಲಿಜಬೆತ್ ಅವರ ಅಂತಿಮ ಸಂಸ್ಕಾರದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 19 ರಂದು ರಾಣಿ ಎರಡನೇ ಎಲಿಜಬೆತ್ ಅವರ ಅಂತಿಮ ಸಂಸ್ಕಾರದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸುತ್ತಾರೆ.
ಬ್ರಿಟನ್ ರಾಣಿಗೆ ನೀವ್ಯಾರು ಎಂದಿದ್ದ ಅದೊಬ್ಬ ಪ್ರವಾಸಿಗ; ಮುಂದೆ ಏನಾಯ್ತು!?
ರಾಷ್ಟ್ರಪತಿ ದ್ರೌಪದಿ ಮುರ್ಮು ಸೆಪ್ಟೆಂಬರ್ 17-19 ರ ಅವಧಿಯಲ್ಲಿ ಯುನೈಟೆಡ್ ಕಿಂಗ್ಡಮ್ಗೆ ಭೇಟಿ ನೀಡಲಿದ್ದು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.
ಬ್ರಿಟನ್ನ ಮಾಜಿ ಮುಖ್ಯಸ್ಥೆ ಮತ್ತು ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರಾಗಿದ್ದ ರಾಣಿ ಎರಡನೇ ಎಲಿಜಬೆತ್ 70 ವರ್ಷಗಳ ಕಾಲ ಆಳ್ವಿಕೆ ನಡೆಸಿ ಸೆಪ್ಟೆಂಬರ್ 8, 2022 ರಂದು ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧನಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಣಿ ಎಲಿಜಬೆತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ರಾಣಿ ಎಲಿಜಬೆತ್ ಅವರ ಗೌರವಾರ್ಥವಾಗಿ ಸೆಪ್ಟೆಂಬರ್ 11 ರಂದು ಭಾರತ ಸರ್ಕಾರವು ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಿತು.
ಭಾರತದ ಸಂತಾಪವನ್ನು ತಿಳಿಸಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸೆಪ್ಟೆಂಬರ್ 12 ರಂದು ನವದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ಗೆ ಭೇಟಿ ನೀಡಿದ್ದರು.
''70 ವರ್ಷಗಳ ಆಡಳಿತದಲ್ಲಿ ರಾಣಿ ಎಲಿಜಬೆತ್ II, ಭಾರತ-ಯುಕೆ ಸಂಬಂಧಗಳು ವಿಕಸನಗೊಂಡಿವೆ, ಪ್ರವರ್ಧಮಾನಕ್ಕೆ ಬಂದಿವೆ ಮತ್ತು ಅಗಾಧವಾಗಿ ಬಲಗೊಂಡಿವೆ. ಕಾಮನ್ವೆಲ್ತ್ನ ಮುಖ್ಯಸ್ಥರಾಗಿ ವಿಶ್ವದಾದ್ಯಂತ ಲಕ್ಷಾಂತರ ಜನರ ಕಲ್ಯಾಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ರಾಣಿ ಎರಡನೇ ಎಲಿಜಬೆತ್ ನಿಧನದ ಬಗ್ಗೆ ಶನಿವಾರ ತಮ್ಮ ಬ್ರಿಟಿಷ್ ಕೌಂಟರ್ಪಾರ್ಟ್ ಲಿಜ್ ಟ್ರಸ್ ಅವರೊಂದಿಗೆ ದೂರವಾಣಿ ಸಂಭಾಷಣೆಯ ಸಮಯದಲ್ಲಿ ಪ್ರಧಾನಿ ಮೋದಿ ಅವರು ಬ್ರಿಟಿಷ್ ರಾಜಮನೆತನ ಮತ್ತು ಯುಕೆ ಜನರಿಗೆ ಭಾರತೀಯ ಜನರ ಪರವಾಗಿ ಸಂತಾಪವನ್ನು ತಿಳಿಸಿದರು.
ಡೌನಿಂಗ್ ಸ್ಟ್ರೀಟ್ ವಕ್ತಾರರು, ನಾಯಕರು "ಯುಕೆ ಮತ್ತು ಭಾರತದ ಅನೇಕ ಜನರು ಅನುಭವಿಸಿದ ದುಃಖವನ್ನು ಒಪ್ಪಿಕೊಂಡರು ಮತ್ತು ರಾಣಿಯ ಜೀವಿತಾವಧಿಯ ಸೇವೆಗೆ ಗೌರವ ಸಲ್ಲಿಸಿದರು" ಎಂದು ಹೇಳಿದರು.