ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: ಸಂಚರಿಸುವಾಗಲೇ ರೈಲು ಕ್ಲೀನ್; AI ತಂತ್ರಜ್ಞಾನದ ಮೂಲಕ ನಿಗಾ
ನವದೆಹಲಿ: ಭುವನೇಶ್ವರ-ಬೆಂಗಳೂರು ಪ್ರಶಾಂತಿ ಎಕ್ಸ್ಪ್ರೆಸ್ ಸೇರಿದಂತೆ ಅದರ ವಿವಿಧ ಆರು ಪ್ರಮುಖ ದೀರ್ಘ-ದೂರದ ರೈಲು ಸೇವೆಗಳನ್ನು ಹೊಸ ರಾಷ್ಟ್ರೀಯ ಸುಧಾರಣೆಗೆ ಆಯ್ಕೆ ಆಗಿವೆ. ಇದರ ಬೆನ್ನಲ್ಲೆ ಪೂರ್ವ ಕರಾವಳಿ ರೈಲ್ವೆಯು (ECoR) ರೈಲುಗಳು ಶುಚೀಕರಣ, ನೈರ್ಮಲ್ಯ ಕಾಪಾಡಲು ಪ್ರಮುಖ ಬದಲಾವಣೆ ತರಲು ಸಜ್ಜಾಗಿದೆ. ಇದಕ್ಕೆ ಸಂಬಂಧಿಸಿದ ಉಪಕ್ರಮಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಚಾಲನೆ ನೀಡಿದ್ದಾರೆ.
'ಉತ್ತಮ ಆನ್ಬೋರ್ಡ್ ಸೇವೆಗಳು' ಶೀರ್ಷಿಕೆಯಡಿ ಉಪಕ್ರಮ ಅನುಷ್ಠಾನಕ್ಕೆ ತರಲಾಗುತ್ತಿದೆ. 2026 ರ ಸಮಗ್ರ '52 ವಾರಗಳಲ್ಲಿ 52 ಸುಧಾರಣೆಗಳು' ಹೆಸರಿನಡಿ ನೀಡಿರುವ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಯಿತು. ಈ ನಿಯಮಗಳಡಿ ರೈಲುಗಳ ಶುಚಿತ್ವದಲ್ಲಿ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಮೂಲಕ ಈವರೆಗೆ ಇದ್ದ ಸಾಂಪ್ರದಾಯಿಕ ರೈಲು ಸ್ವಚ್ಛಗೊಳಿಸುವ ವಿಧಾನಗಳಿಗೆ ತಿಲಾಂಜಲಿ ಹಾಡಲು ರೈಲ್ವೆ ಇಲಾಖೆ ಮುಂದಾಗಿದೆ. ಆದರೆ ಸದ್ಯಕ್ಕೆ ಇದು ಭಾರತಾದ್ಯಂತ ಜಾರಿ ಆಗದೇ, ದೇಶದ ಅತಿ ಹೆಚ್ಚು ಜನರು ಸಂಚರಿಸುವ 80 ರೈಲುಗಳಲ್ಲಿ ಅನುಷ್ಠಾನಕ್ಕೆ ತರಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಮುಂದಿನ ಮೂರೇ ವರ್ಷಗಳಲ್ಲಿ ದೇಶದ ಎಲ್ಲ ರೈಲುಗಳಿಗೆ ವಿಸ್ತರಣೆ ಆಗಲಿದ್ದು, ಆಗ ಆಧುನಿಕ ವ್ಯವಸ್ಥೆಯಡಿ ರೈಲುಗಳು ಶುಚಿಗೊಳ್ಳಲಿವೆ.

ರೈಲು ಸಂಚಾರದುದ್ದಕ್ಕೂ ಶುಚಿ ಕಾರ್ಯ
ಈ ಹೊಸ ಬದಲಾವಣೆಯಿಂದ ನಿರ್ದಿಷ್ಟ ನಿಲ್ದಾಣದಲ್ಲಿ ಮಾತ್ರ ಶುಚಿಗೊಳಿಸುವ ರೈಲುಗಳು ಎಲ್ಲ ನಿಲ್ದಾಣಗಳಲ್ಲಿ ನಿರಂತರ ಶುಚಿಗೊಳಿಸುವ ವ್ಯವಸ್ಥೆಯಡಿ ಬರಲಿವೆ. ಅಲ್ಲದೇ ತ್ವರಿತ ಶುಚಿಗೊಳಿಸುವಿಕೆ ಸಾಧ್ಯವಾಗುತ್ತದೆ. ವೃತ್ತಿಪರ ತಂಡಗಳು (ಆನ್ಬೋರ್ಡ್ ತಂಡ) ರೈಲಿನ ಪ್ರಯಾಣದುದ್ದಕ್ಕೂ ಇರುತ್ತಾರೆ. ಸುಧಾರಣೆಯು ಮೊದಲ ಬಾರಿಗೆ ಸಾಮಾನ್ಯ (ಕಾಯ್ದಿರಿಸದ) ಬೋಗಿಗಳನ್ನು ವೃತ್ತಿಪರ ಶುಚಿಗೊಳಿಸುವ ವೇಳಾಪಟ್ಟಿಯಲ್ಲಿ ಸಂಪೂರ್ಣವಾಗಿ ಸಂಯೋಜಿಸಲಾಗಿದೆ. ಕಾಯ್ದಿರಿಸಿದ ವಿಭಾಗಗಳ ಮೇಲೆ ಕೇಂದ್ರೀಕರಿಸಿದ್ದ ಶುಚಿಗೊಳಿಸುವ ತಂಡಗಳು, ಈಗ ಗೊತ್ತುಪಡಿಸಿದ ನಿಲ್ದಾಣಗಳಲ್ಲಿ ಸಾಮಾನ್ಯ ಬೋಗಿಗಳನ್ನೂ ಶುಚಿಗೊಳಿಸುತ್ತಾರೆ. ರೈಲುಗಳಲ್ಲಿ ನೈರ್ಮಲ್ಯತೆ ಕಾಪಾಡುತ್ತಾರೆ. ಎಲ್ಲ ವರ್ಗದ ಪ್ರಯಾಣದಲ್ಲಿ ನೈರ್ಮಲ್ಯ ಮಾನದಂಡಗಳು ಒಂದೇ ತೆರನಾಗಿರುತ್ತವೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಆನ್ಬೋರ್ಡ್ ತಂಡದಿಂದ ಇತರ ಸಮಸ್ಯೆಗಳಿಗೆ ಪರಿಹಾರ
ಶುಚಿಗೊಳಿಸುವ ಸಿಬ್ಬಂದಿಯನ್ನು ವಿವಿಧ ಕಾರ್ಯ ನಿರ್ವಹಣೆಗೆ ಘಟಕಗಳಾಗಿ ಮಾಡಲಾಗುತ್ತದೆ. ಅಂದರೆ ಬರೀ ನೈರ್ಮಲ್ಯದೆಡೆ ಗಮನಹರಿಸುವ ಜೊತೆಗೆ ಬೆಳಕಿನ ವೈಫಲ್ಯಗಳು ಅಥವಾ ನೀರು ಸರಬರಾಜು ಸಮಸ್ಯೆ, ಸಣ್ಣ ವಿದ್ಯುತ್, ಯಾಂತ್ರಿಕ ಲೋಪದೋಷಗಳನ್ನು ನಿವಾರಿಸುವಷ್ಟು ಸಾಮರ್ಥ್ಯ ಹೊಂದಿವರಾಗಿರುತ್ತಾರೆ. ಜೊತೆಗೆ ರೈಲಿನಲ್ಲಿ ಕಸ ವಿಲೇವಾರಿ, ನಿಯಮಿತ ಶೌಚಾಲಯ ತಪಾಸಣೆ, ಇನ್ನಿತರ ಶುಚಿತ್ವವನ್ನು ಆಗಾಗ್ಗೆ ಮೇಲ್ವಿಚಾರಣೆ ಮಾಡುತ್ತಿರುತ್ತಾರೆ.
ರೈಲು ಪ್ರಯಾಣದಲ್ಲಿ ಗುಣಮಟ್ಟ ತರಲು ತಂತ್ರಜ್ಞಾನ-ಚಾಲಿತ ಮೇಲ್ವಿಚಾರಣೆ ಮಾಡಲು ತೀರ್ಮಾನಿಸಲಾಗಿದೆ. ನೈಜ ಸಮಯದಲ್ಲಿ ಸ್ವಚ್ಛತೆಯನ್ನು ನಿರ್ಣಯಿಸಲು ನಿಯಂತ್ರಣ ಕೇಂದ್ರಗಳು, ಎಐ ಸಹಾಯ, ಎಐ ಆಧಾರಿತ ಪರಿಶೀಲನಾ ವ್ಯವಸ್ಥೆ, ಅದರ ಮೇಲೆ ಅಧಿಕಾರಿಗಳ ನಿಗಾ ವಹಿಸುವುದು, ತ್ವರಿತವಾಗಿ ಲೋಪದೋಷ ಸರಿಪಡಿಸುವುದೆಲ್ಲವು ಈ ಉಪಕ್ರಮದಲ್ಲಿದೆ. ಪ್ರಯಾಣಿಕರಿಗೆ ಶುಚಿತ್ವದಕ್ಕೆ ಧಕ್ಕೆ ಉಂಟಾದಲ್ಲಿ ದಂಡ ಕ್ರಮ ಜರುಗಿಸಲು ಈ ತಂತ್ರಜ್ಞಾನ ಸಹಾಯಕ್ಕೆ ಬರುತ್ತದೆ.
ರೈಲು ಸಂಚಾರ ಆರಂಭಿಸಿದ ನಿಲ್ದಾಣದಿಂದ ಗಮ್ಯಸ್ಥಾನ ತಲುಪುವವರೆಗೂ ಅದನ್ನು ನಿರಂತರವಾಗಿ ಸ್ವಚ್ಚಗೊಳಿಸಲಾಗುತ್ತದೆ. ಶೌಚಾಲಯಗಳು, ಕಸದ ತೊಟ್ಟಿಗಳು, ನೀರಿನ ಲಭ್ಯತೆ ಮತ್ತು ಯಾಂತ್ರಿಕ ದೋಷಗಳ ತಕ್ಷಣದ ದುರಸ್ತಿ ಮಾಡಲಾಗುತ್ತದೆ. ರೈಲಿನಲ್ಲಿ ಉತ್ತಮ ಪರಿಸರ, ಒಳ್ಳೆಯ ಅನುಭವ ನೀಡಲು, ಪ್ರಯಾಣ ಸುಧಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
New Railway Line: 6000 ಕಿಮೀ ರೈಲ್ವೆ ಜಾಲ ವಿಸ್ತರಣೆ, 100 ಯೋಜನೆಗಳ ಜಾರಿಗೆ ₹1.53 ಲಕ್ಷ ಕೋಟಿ ಹೂಡಿಕೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ












Click it and Unblock the Notifications