Get Updates
Get notified of breaking news, exclusive insights, and must-see stories!

ದೆಹಲಿಯ ಈ ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ: ಯೂಟ್ಯೂಬರ್ ಧ್ರುವ್ ರಾಠಿ, ಏನದು ?

ದೆಹಲಿಯ ಹೃದಯಭಾಗದಲ್ಲಿ ಸಂಭವಿಸಿದ ಭೀಕರ ಬಾಂಬ್ ಸ್ಫೋಟದಿಂದ ದೇಶವೇ ಬೆಚ್ಚಿಬಿದ್ದಿದೆ. ದೆಹಲಿಯ ಬಾಂಬ್ ಸ್ಫೋಟದಲ್ಲಿ 9 ಜನ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ನಡುವೆ ಯೂಟ್ಯೂಬರ್ ಧ್ರುವ್‌ ರಾಠಿ ಟ್ವೀಟ್ ಅವರು ದೆಹಲಿ ಸಮಸ್ಯೆಯ ಬಗ್ಗೆ ಮಾಡಿರುವ ಟ್ವೀಟ್‌ವೊಂದು ವೈರಲ್ ಆಗುತ್ತಿದೆ. ಆದರೆ ಈ ಟ್ವೀಟ್‌ ದೆಹಲಿಯ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ್ದಾಗಿಲ್ಲ.

ದೆಹಲಿಯಲ್ಲಿ ಸಂಭವಿಸಿರುವ ಬಾಂಬ್ ಸ್ಫೋಟದ ನಡುವೆ ಕಳೆದ ಒಂದು ವಾರದಿಂದಲೂ ದೆಹಲಿ ಹಾಗೂ ದೇಶದಾದ್ಯಂತ ದೆಹಲಿಯ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆಗಳು ನಡೆದಿವೆ. ಇದೇ ಮೊದಲ ಬಾರಿ ಎನ್ನುವಂತೆ ದೆಹಲಿಯ ಜನ ವಾಯುಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಹಾಗೂ ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಡಬೇಕು ಎಂದು ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ನಡುವೆ ಧ್ರುವ್ ರಾಠಿ ಅವರು ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.

Prime Minister Narendra Modi is responsible for this problem in Delhi YouTuber Dhruv Rathi what is it

ಯೂಟ್ಯೂಬರ್ ಧ್ರುವ್ ರಾಠಿ ಟ್ವೀಟ್‌ನಲ್ಲಿ ಏನಿದೆ ?

ವಾಯು ಮಾಲಿನ್ಯ ದೆಹಲಿ ಸಮಸ್ಯೆಯಲ್ಲ ಎಂದು ಯೂಟ್ಯೂಬರ್‌ ಧ್ರುವ್ ರಾಠಿ ಟ್ವೀಟ್ ಮಾಡಿದ್ದಾರೆ. ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೂ ಅದನ್ನು ಪರಿಹರಿಸಲು ಸಾಧ್ಯವಾಗಲಿಲ್ಲ. ರೇಖಾ ಗುಪ್ತಾಗೂ ಸಹ ಇದನ್ನು ಪರಿಹರಿಸಲು ಸಾಧ್ಯವಾಗಲಿಲ್ಲ ಏಕೆಂದರೆ ಪ್ರದೇಶವಾರು ದೆಹಲಿ ಉತ್ತರ ಭಾರತದ 2% ಕ್ಕಿಂತ ಕಡಿಮೆ ಇದೆ.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ಕೂಳೆ ಸುಡುವಿಕೆ (ಕೃಷಿ ತ್ಯಾಜ್ಯ) ನಡೆಯುತ್ತಿದೆ. ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ಕಾರ್ಯ ನಿರ್ವಹಿಸುತ್ತಿವೆ, ಈ ಎಲ್ಲಾ ರಾಜ್ಯಗಳಲ್ಲಿ ಅಂತರರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸುತ್ತಿವೆ. ದೆಹಲಿಯಾದ್ಯಂತ ಈ ಎಲ್ಲಾ ರಾಜ್ಯಗಳಲ್ಲಿನ ಕೈಗಾರಿಕೆಗಳು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿವೆ ಏಕೆಂದರೆ ಕೇಂದ್ರ ಸರ್ಕಾರವು ನಿಯಮಗಳನ್ನು ಜಾರಿಗೊಳಿಸಲು ವಿಫಲವಾಗಿದೆ. ನಿರ್ಮಾಣ ಸ್ಥಳಗಳು ಎಲ್ಲೆಡೆ ಮಾನದಂಡಗಳನ್ನು ಉಲ್ಲಂಘಿಸುತ್ತಿವೆ. ಅಲ್ಲದೇ ಇತ್ತೀಚಿನ ಮಾನದಂಡಗಳನ್ನು ಅನುಸರಿಸದ ಕಾರುಗಳು ಮತ್ತು ಹಳೆಯ ಟ್ರಕ್‌ಗಳಿಂದ ವಾಹನ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಂದುವರಿದು ದೆಹಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಮಟ್ಟದಲ್ಲಿ ಪರಿಹಾರಗಳನ್ನು ಜಾರಿಗೆ ತರುವುದು ಒಂದೇ ಪರಿಹಾರ. ಪ್ರಧಾನಿ ಮತ್ತು ಪರಿಸರ ಸಚಿವರು ಈ ರಾಜ್ಯಗಳ ಎಲ್ಲಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಎಲ್ಲಾ ಅಂಶಗಳ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ಆದರೆ, ಅವರು ಏನು ಮಾಡುತ್ತಿದ್ದಾರೆ? ಏನೂ ಇಲ್ಲ.

ಅವರು ಸಂಪೂರ್ಣವಾಗಿ ಮೌನವಾಗಿದ್ದಾರೆ. ಜನರ ಕೋಪವನ್ನು ನರೇಂದ್ರ ಮೋದಿಯವರ ಕಡೆಗೆ ತಿರುಗಬೇಕು. ಈ ವಿಚಾರದಲ್ಲಿ ಅವರು ಬಹುದೊಡ್ಡ ಅಪರಾಧಿ ಎಂದು ದೂರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+