ISRO: 2025ಕ್ಕೆ ಮಾನವ ಅಂತರಿಕ್ಷಯಾನ ಜಾರಿ: ಇಸ್ರೋ ಜತೆ ಪ್ರಧಾನಿ ಮೋದಿ ಸಭೆಯ ಅಂಶಗಳು ಇವು
ಬೆಂಗಳೂರು, ಅಕ್ಟೋಬರ್ 17: ಭಾರತದ ಮೊದಲ ಮಾನವ ಸಹಿತ ಅಂತರಿಕ್ಷಯಾನ ಮುಂದಿನ 2025ರಲ್ಲಿ ಜಾರಿ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಚಂದ್ರಯಾನ ಯಶಸ್ಸಿನ ನಂತರದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಂಸ್ಥೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ಮುಂದಿನ 2025ರಿಂದ ಹದಿನೈದು ವರ್ಷಗಳ ಕಾಲ ಭಾರತ ಬಾಹ್ಯಾಕಾಶ ವಿಚಾರದಲ್ಲಿ ಮಾಡಬೇಕಿರುವ ಸಾಧನೆಗಳನ್ನು ಇಸ್ರೋ ಅಧಿಕಾರಿಗಳು ಮತ್ತು ಪ್ರಧಾನಿ ಮೋದಿ ಚರ್ಚಿಸಿದರು.

ಮುಂದಿನ 2025ರಲ್ಲಿ ಮಾನವ ಸಹಿತ ಅಂತರಿಕ್ಷಯಾನದ ಪ್ರಕ್ರಿಯೆ ಆರಂಭವಾಗಲಿದೆ. ನಂತರ 2040ರ ಹೊತ್ತಿಗೆ ಭೂಮಿಯಿಂದ ಚಂದ್ರನ ಅಂಗಳಕ್ಕೆ ಮೊದಲ ಬಾರಿಗೆ ಮಾನವನನ್ನು ಕಳಹಿಸುವ ಯೋಜನೆಗಳನ್ನು ಸಾಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋಗೆ ತಿಳಿಸಿದ್ದಾರೆ. ಸಭೆ ಬಳಿಕೆ ಬಿಡುಗಡೆಯಾದ ಪ್ರಧಾನಿ ಮೋದಿ ಕಾರ್ಯಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ 'ಗಗನ್ ಯಾನ್ ಮಿಷನ್' ಭಾಗವಾಗಿ ಅಕ್ಟೋಬರ್ 21ರಂದು ಶ್ರೀಹರಿಕೋಟಾದ ಬಾಹ್ಯಾಕಾಶದಿಂದ ಬೆಳಗ್ಗೆ 7ರಿಂದ 9ರವರೆಗೆ ಪರೀಕ್ಷಾ ವಾಹಕ ಉಡಾವಣೆಗೊಳಿಸುವ ಮುಖೇನ ಮಾನವ ಸಹಿತ ಹಾರಾಟ ಪರೀಕ್ಷೆ ನಡೆಸುವುದು ಸೇರಿದಂತೆ ಯೋಜನೆ ಇನ್ನಿತರ ಅಂಶಗಳು ಕುರಿತು ಮಾಹಿತಿ ಪಡೆದ ಪ್ರಧಾನಿ ಮೋದಿಯವರು ಕೆಲವು ನಿರ್ದೇಶನಗಳನ್ನು ಇಸ್ರೋಗೆ ನೀಡಿದರು.
ಚಂದ್ರಾನ್ವೇಷಣೆ, ಬೇರೆ ಗ್ರಹಗಳ ಕಾರ್ಯಾಚರಣೆಯ ಮಾಹಿತಿ
ಬಾಹ್ಯಾಕಾಶದಲ್ಲಿನ ಭವಿಷ್ಯ, ಮುಂದಾಗಬೇಕಾದ ಕೆಲಸಗಳ ಜತೆ ಜತೆಗೆ ವೀನಸ್ (ಶುಕ್ರ) ಆರ್ಬಿಟರ್ ಮಿಷನ್, ಮಾರ್ಸ್ ಲ್ಯಾಂಡರ್ ಒಳಗೊಂಡಂತೆ ಬೇರೆ ಬೇರೆ ಗ್ರಹಗಳ ಕಾರ್ಯಾಚರಣೆ, ಚಂದ್ರನ ಮೇಲಿನ ಅನ್ವೇಷಣೆ ಮುಂದುವರಿಸುವುದು ಕುರಿತಂತೆ ವಿವಿಧ ಕೆಲಸಗಳನ್ನು ಮಾಡುವ ಕುರಿತು ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಕೇಳಿದರು.

2040ರ ಹೊತ್ತಿಗೆ ಮಾನವ ಸಹಿತ ಅಂತರಿಕ್ಷ ಉಡಾವಣೆ ಆಗಬೇಕಿದೆ. ಇದಕ್ಕು ಮೊದಲು 2035ರಲ್ಲಿ ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಬೇಕು. ಇವೆರೆಡು ಗುರಿಗಳನ್ನು ಹೊಂದಬೇಕು ಎಂದು ಪ್ರಧಾನಿ ಮೋದಿ ಇಸ್ರೋ ಅಧ್ಯಕ್ಷರಿಗೆ ಮತ್ತು ವಿಜ್ಞಾನಿಗಳಿಗೆ ಅವರು ನಿರ್ದೇಶಿಸಿದರು. ಇದರೊಂದಿಗೆ ವಿವಿಧ ವಿಚಾರಗಳು ಕುರಿತು ಪ್ರಧಾನಿ ಮೋದಿಯವರು ಚರ್ಚೆ ನಡೆಸಿದರು ಎಂದು ಕಾರ್ಯಾಲಯ ಮಾಹಿತಿ ನೀಡಿದೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications