ಅಫ್ಘಾನಿಸ್ತಾನ ದಾಳಿಯನ್ನು ಕಟುಶಬ್ದಗಳಿಂದ ಖಂಡಿಸಿದ ಮೋದಿ
ನವದೆಹಲಿ, ಜೂನ್ 02: ಅಫ್ಘಾನಿಸ್ತಾನದ ಜಲಾಲಾಬಾದ್ ನಗರದಲ್ಲಿ ನಡೆದ ಆತ್ಮಾಹುತಿ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಖಂಡಿಸಿದ್ದಾರೆ.
ಇಲ್ಲಿನ ಜಲಾಲಾಬಾದ್ ನಲ್ಲಿ ಭಾನುವಾರ ಆತ್ಮಾಹುತಿ ದಾಳಿ ನಡೆದಿದ್ದು, ಮುಖ್ಯವಾಗಿ ಸಿಕ್ಖ್ ಮತ್ತು ಹಿಂದು ಸಮುದಾಯವನ್ನೇ ಗುರಿಯಾಗಿಸಿ ನಡೆದ ಈ ದಾಳಿಯಲ್ಲಿ 19 ಜನ ಮೃತರಾಗಿದ್ದಾರೆ. 20 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ, 24 ಸೈನಿಕರು ಬಲಿ
ಮೃತರಾದ 19 ರಲ್ಲಿ 10 ಜನ ಅಫ್ಘಾನಿಸ್ತಾನ್ ಸಿಕ್ಖ್ ಸಮುದಾಯಕ್ಕೆ ಸೇರಿದವರೆಂಬುದು ತಿಳಿದುಬಂದಿದೆ. ಘಟನೆಯನ್ನು ಭಾರತ ಕಟುಶಬ್ದಗಳಿಂದ ಖಂಡಿಸಿದೆ.
|
ಭಾರತ ಇದನ್ನು ಖಂಡಿಸುತ್ತದೆ!
ಅಫ್ಘಾನಿಸ್ತಾನದಲ್ಲಾದ ಆತ್ಮಾಹುತಿ ಬಾಂಬ್ ದಾಳಿಯನ್ನು ಭಾರತ ಕಟುವಾಗಿ ಖಂಡಿಸುತ್ತದೆ. ಇದು ಅಫ್ಘಾನಿಸ್ತಾನದ ಬಹುಸಂಸ್ಕೃತಿಯ ಮೇಲಾದ ದಾಳಿ. ಮೃತರ ಕುಟುಂಬಕ್ಕೆ ನನ್ನ ಸಾಂತ್ವನ. ಗಾಯಗೊಂಡವರು ಬೇಗನೇ ಗುಣಮುಖರಾಗಲಿ ಎಂದು ನಾನು ಬೇಡಿಕೊಳ್ಳುತ್ತೇನೆ. ಈ ದುಃಖದ ಸಮಯದಲ್ಲಿ ಸಂಕಷ್ಟದಲ್ಲಿರುವವರ ನೆರವಿಗೆ ಅಫ್ಘಾನಿಸ್ತಾನ ಸರ್ಕಾರದೊಂದಿಗೆ ಭಾರತ ನಿಲ್ಲುತ್ತದೆ. ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
|
ಸಂತ್ರಸ್ಥರ ಕುಟುಂಬಕ್ಕೆ ನಮ್ಮ ಪ್ರಾರ್ಥನೆ
ಅಫ್ಘಾನಿಸ್ತಾನ ದಾಳಿಯ ಸಂತ್ರಸ್ಥರ ಕುಟುಂಬಗಳಿಗೆ ನಮ್ಮ ಸಾಂತ್ವನಗಳು. ಈ ದುರಂತದ ಸಮಯದಲ್ಲಿ ನಾವು ನಿಮ್ಮೊಂದಿಗಿದ್ದೇವೆ. ಮೃತರ ಸಂಬಂಧಿಗಳನ್ನು ನಾನು ಇಂದು ಭೇಟಿ ಮಾಡುತ್ತೇನೆ ಎಂದು ವಿದೇಶಾಂಕ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
|
ಇದು ನೈತಿಕತೆಗೆ ಒಡ್ಡಿದ ಸವಾಲು!
ಈ ಬಾಂಬ್ ಸ್ಫೋಟವನ್ನು ನಾನು ಕಟುವಾಗಿ ಖಂಡಿಸುತ್ತೇನೆ. ಈ ಘಟನೆ ಅತುಂತ ಹೀನಾಯ ಮತ್ತು ನಾವು ನಂಬಿದ ಎಲ್ಲ ತತ್ವಗಳಿಗೂ ವಿರುದ್ಧವಾದುದು, ನೈತಿಕತೆಗೆ ಒಡ್ಡಿದ ಸವಾಲು. ಈ ಘಟನೆಯಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನಾನು ಸಾಂತ್ವನ ಕೋರುತ್ತೇನೆ ಎಂದಿದ್ದಾರೆ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮಿದ್ ಕರ್ಜಾಯ್.
|
ಸಂತ್ರಸ್ಥರಿಗೆ ನ್ಯಾಯ ಸಿಗಲಿ
ಈ ಹೀನಾಯ ಘಟನೆಯನ್ನು ನಾನು ಖಂಡಿಸುತ್ತೇನೆ. ಇದು ಸಿಕ್ಖರನ್ನೇ ಗುರಿಯಾಗಿಸಿ ನಡೆಸಿದ ದಾಳಿ. ಸಂತ್ರಸ್ಥ ಕುಟುಂಬಗಳಿಗೆ ನನ್ನ ಸಾಂತ್ವನ ಮತ್ತು ಪ್ರಾರ್ಥನೆ. ಸಂತ್ರಸ್ಥರಿಗೆ ನ್ಯಾಯ ಸಿಗಲಿ ಎಂಬುದೇ ನನ್ನ ಪ್ರಾರ್ಥನೆ ಎಂದಿದ್ದಾರೆ ಪತ್ರಕರ್ತ ರಜತ್ ಶರ್ಮಾ.