ಗುಲಾಂ ಮೊಹಮ್ಮದ್ ಮೀರ್ ನಿಧನಕ್ಕೆ ಪ್ರಧಾನಿ ಮೋದಿ ಕಂಬನಿ
ಶ್ರೀನಗರ, ಮೇ 05: ಅನಂತ್ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿದ್ದ ಗುಲ್ ಮೊಹಮ್ಮದ್ ಮಿರ್ ಅವರ ನಿಧನಕ್ಕೆ ಪ್ರಧಾನಿ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮುಖಂಡ ಮೀರ್ ಅವರ ಹತ್ಯೆ ಮಾಡಿದ ಉಗ್ರಗಾಮಿಗಳ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಮೀರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಮೋದಿ ಅವರು ಭಾನುವಾರದಂದು ಟ್ವೀಟ್ ಮಾಡಿ, ಇಂಥ ಕುಕೃತ್ಯಗಳು ದೇಶದಲ್ಲಿ ನಡೆಯಬಾರದು ಎಂದಿದ್ದಾರೆ.

ಶನಿವಾರದಂದು ಆನಂತ್ ನಾಗ್ ಜಿಲ್ಲೆಯ ನೌಗಾಮ್ ವೆರಿನಾಗ್ ಪ್ರದೇಶದಲ್ಲಿದ್ದ ಮೀರ್ ಅವರ ಮೇಲೆ ಗುಂಡಿನ ಮಳೆಗೈದು ಹತ್ಯೆ ಮಾಡಲಾಗಿದೆ. ಮೂರು ಮಂದಿ ಉಗ್ರರು ವಾಹನದಲ್ಲಿ ಬಂದಿದ್ದರು ಎಂದು ತಿಳಿದು ಬಂದಿದೆ.
Strongly condemn the killing of @BJP4JnK leader Shri Ghulam Mohammed Mir. His contribution towards strengthening the party in J&K will always be remembered. There is no place for such violence in our country. Condolences to his family and well-wishers.
— Chowkidar Narendra Modi (@narendramodi) May 5, 2019
ಜಮ್ಮು ಮತ್ತು ಕಾಶ್ಮೀರ ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಎನ್ ಸಿಪಿ ಮುಖಂಡ ಒಮರ್ ಅಬ್ದುಲ್ಲಾ ಸೇರಿದಂತೆ ಹಲವಾರು ಗಣ್ಯರು, ಮೀರ್ ಅವರ ಹತ್ಯೆಯನ್ನು ಖಂಡಿಸಿದ್ದಾರೆ.












Click it and Unblock the Notifications