ಪೆರಿಯಾರ್ ಅವರಿಂದಾಗಿ ಇಂದು ಎಲ್ಲ ಜಾತಿಯವರೂ ಸಸ್ಯಹಾರಿ ಹೋಟೆಲ್ ತೆಗೆಯುವಂತಾಗಿದೆ: ಎ2ಬಿ ರೆಸ್ಟೋರೆಂಟ್ ಮಾಲೀಕ
ಚೆನ್ನೈ, ಅಕ್ಟೋಬರ್ 24: ದ್ರಾವಿಡ ಸಿದ್ಧಾಂತದ ನಾಯಕ ಪೆರಿಯಾರ್ ಅವರಿಂದಾಗಿ ಇಂದು ಎಲ್ಲ ಜಾತಿಯ ಜನರು ಸಸ್ಯಹಾರಿ ಹೋಟೆಲ್ ತೆಗೆಯುವಂತಾಗಿದೆ ಎಂದು ಜನಪ್ರಿಯ ಅಡ್ಯಾರ್ ಆನಂದ ಭವನ ಎ2ಬಿ ರೆಸ್ಟೋರೆಂಟ್ ಮಾಲೀಕ ಕೆಟಿ ಶ್ರೀನಿವಾಸ್ ರಾಜ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ದ್ರಾವಿಡ ನಾಯಕ ಪೆರಿಯಾರ್ ಅವರಿಂದಾಗಿ ಎಲ್ಲಾ ಜಾತಿಗಳ ಜನರು ಈಗ ಸಸ್ಯಾಹಾರಿ ರೆಸ್ಟೋರೆಂಟ್ಗಳನ್ನು ತೆರೆಯಲು ಸಾಧ್ಯವಾಗಿದೆ ಎಂದು ಹೇಳಿದರು. ಇದರಿಂದ ಕೆರಳಿರುವ ತಮಿಳುನಾಡಿನ ಹಿಂದೂ ಗುಂಪುಗಳು ಜನಪ್ರಿಯ ರೆಸ್ಟೋರೆಂಟ್ ಸರಪಳಿ ಅಡ್ಯಾರ್ ಆನಂದ ಭವನ (ಎ2ಬಿ) ಬಹಿಷ್ಕಾರಕ್ಕೆ ಕರೆ ನೀಡಿವೆ.

ಶ್ರೀನಿವಾಸ ರಾಜ ಅವರು ನಟ-ಚಲನಚಿತ್ರ ನಿರ್ಮಾಪಕ ಚಿತ್ರಾ ಲಕ್ಷ್ಮಣನ್ ಅವರೊಂದಿಗೆ ಯೂಟ್ಯೂಬ್ ಸೋಷಿಯಲ್ ಟಾಕೀಸ್ ಶೋಗಾಗಿ ಇತ್ತೀಚೆಗೆ ನಡೆಸಿದ ಸಂದರ್ಶನ ವಿವಾದಕ್ಕೆ ಕಾರಣವಾಗಿದೆ.
ಸಂದರ್ಶನದಲ್ಲಿ ಶ್ರೀನಿವಾಸ ರಾಜಾ ಅವರನ್ನು , "ಒಂದು ಕಾಲದಲ್ಲಿ, ಸಸ್ಯಾಹಾರಿ ರೆಸ್ಟೋರೆಂಟ್ಗಳಿಗೆ ಬಂದಾಗ, ಅವುಗಳನ್ನು ಸಂಪೂರ್ಣವಾಗಿ ಅಯ್ಯಂಗಾರ್ಗಳು ನಡೆಸುತ್ತಿದ್ದರು. ಅದು ನಿಧಾನವಾಗಿ ಬದಲಾಗಿದೆ. ಕಾರಣ ಏನು ಎಂದು ನೀವು ಭಾವಿಸುತ್ತೀರಿ? " ಅದಕ್ಕೆ A2B ಮಾಲೀಕರು ಉತ್ತರ ಹೀಗಿತ್ತು.
ಯಾವುದೇ ಜಾತಿಯು ಯಾವುದೇ ವ್ಯಾಪಾರವನ್ನು ಮಾಡಲು ಸಾಧ್ಯವಾಗುವುದಕ್ಕೆ ಕಾರಣ ತಂಥೈ ಪೆರಿಯಾರ್. ಅವರು ಕುಜ ತೊಝಿಲ್ (ಜಾತಿ ಆಧಾರಿತ ಉದ್ಯೋಗ) ಅಭ್ಯಾಸವನ್ನು ಬದಲಾಯಿಸಿದರು. ಯಾರು ಬೇಕಾದರೂ ಯಾವುದೇ ವೃತ್ತಿಯನ್ನು ತೆಗೆದುಕೊಳ್ಳಬಹುದು. ಸಮಯ ಬದಲಾಗುತ್ತಿದೆ, ಸರ್ಕಾರಗಳು ಸಾಲ ನೀಡುತ್ತಿವೆ ಮತ್ತು ಬ್ಯಾಂಕ್ಗಳು ಸಹ ಜನರನ್ನು ಬೆಂಬಲಿಸಿವೆ. ಒಂದು ನಿರ್ದಿಷ್ಟ ಸಮುದಾಯದವರು ಮಾಡುತ್ತಿದ್ದ ವೃತ್ತಿಯನ್ನು ಈಗ ಯಾರಾದರೂ ಮತ್ತು ಎಲ್ಲರೂ ಮಾಡುತ್ತಿದ್ದಾರೆ. ಯಾರು ಬೇಕಾದರೂ ಸಮುದ್ರಕ್ಕೆ ಹೋಗಿ ಮೀನು ಹಿಡಿಯುವಂತಿದೆ ಎಂದರು.
ಕೆಟಿ ಶ್ರೀನಿವಾಸ ರಾಜಾ ಅವರ ಈ ಹೇಳಿಕೆಯಿಂದ ಕ್ರೋಧಗೊಂಡ ಹಿಂದೂ ಗುಂಪುಗಳು ಅವರ ಹೋಟೆಲ್ ಔಟ್ಲೆಟ್ ಬಹಿಷ್ಕಾರಕ್ಕೆ ಕರೆ ನೀಡಿವೆ. ಆದರೆ ಕೆಟಿ ಶ್ರೀನಿವಾಸ ರಾಜಾ ಅವರ ಬೆಂಬಲಕ್ಕೆ ಕೆಲವರು ಬಂದಿದ್ದಾರೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದೆ ಕನಿಮೊಳಿ ಅವರಂತಹ ಹಲವಾರು ರಾಜಕಾರಣಿಗಳು ಎ2ಬಿಯೊಂದಿಗೆ ತಮ್ಮ ಬೆಂಬಲವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ.
ಸಂಸದೆ ಕನಿಮೊಳಿ ಅವರು ಸಂದರ್ಶನದ ಕ್ಲಿಪ್ ಅನ್ನು ಹಂಚಿಕೊಂಡಿದ್ದು, "ಸತ್ಯವನ್ನು ಮಾತನಾಡಿದ್ದಕ್ಕಾಗಿ ಧನ್ಯವಾದಗಳು" ಎಂದು ಹೇಳಿದ್ದಾರೆ. ತೂತುಕುಡಿ ಸಂಸದರು #WillEatAtA2B ಎಂಬ ಹ್ಯಾಶ್ಟ್ಯಾಗ್ ಅನ್ನು ಸಹ ಹಂಚಿಕೊಂಡಿದ್ದಾರೆ. ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ನಾಯಕರು ಕೂಡ ಶ್ರೀನಿವಾಸ ರಾಜಾ ಅವರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications