ಗಾಂಧಿ ಸ್ಮಾರಕವನ್ನು ಗೋದಾಮು ಮಾಡಿಕೊಂಡಿತೇ ಪತಂಜಲಿ ಕಂಪನಿ?
ಗುಜರಾತ್ ನಲ್ಲಿರುವ ಗಾಂಧಿ ಸ್ಮಾರಕದ ಕೆಲ ಕೊಠಡಿಗಳನ್ನು ಪತಂಜಲಿ ಕಂಪನಿಯು ತನ್ನ ಗೋದಾಮಾಗಿ ಬಳಸಿಕೊಳ್ಳುತ್ತಿದೆ ಎಂದ ಕೆಲ ವರದಿಗಳು. ಬಾಬಾ ರಾಮ್ ದೇವ್ ಅವರಿಂದ ವರದಿ ನಿರಾಕರಣೆ.
ನವದೆಹಲಿ, ಜೂನ್ 20: ಬಾಬಾ ರಾಮ್ ದೇವ್ ಅವರ ಪತಂಜಲಿ ಕಂಪನಿಯು ಮಹಾತ್ಮಗಾಂಧಿಯವರ ಸ್ಮಾರಕವೊಂದನ್ನು ತನ್ನ ಗೋದಾಮನ್ನಾಗಿ ಪರಿವರ್ತಿಸಿಕೊಂಡಿರುವುದಾಗಿ ಕೆಲ ವರದಿಗಳು ಬಂದಿವೆ. ಆದರೆ, ಬಾಬಾ ರಾಮ್ ದೇವ್ ಈ ವರದಿಗಳನ್ನು ತಳ್ಳಿಹಾಕಿದ್ದಾರೆ.
ಗುಜರಾತ್ ನ ಶಾಹೀಬಾಂಗ್ ನಲ್ಲಿರುವ ಓಲ್ಡ್ ಸರ್ಕೀಟ್ ಹೌಸ್ ಪ್ರಾಂತ್ಯದಲ್ಲಿ ಮಹಾತ್ಮಾಗಾಂಧಿ ಸ್ಮೃತಿ ಖಾಂಡ್ (ಸ್ಮಾರಕ) ಇದೆ. 95 ವರ್ಷಗಳ ಹಿಂದೆ ಮಹಾತ್ಮಗಾಂಧಿಯವರು ವಕೀಲರಾಗಿದ್ದಾಗ ವೇಳೆ, ಈ ಕಟ್ಟಡ ನ್ಯಾಯಾಲಯವಾಗಿತ್ತು. ಇಲ್ಲಿ ಗಾಂಧೀಜಿಯವರು ಹಲವಾರು ಕೇಸುಗಳಿಗಾಗಿ ವಾದ ಮಂಡಿಸಿದ್ದರು. ಅವರ ನಿಧನಾ ನಂತರ ಈ ಕಟ್ಟಡವನ್ನು ಮಹಾತ್ಮಾ ಗಾಂಧಿಯವರ ಸ್ಮಾರಕವಾಗಿ ಬದಲಾಯಿಸಲಾಗಿದೆ.

ಈ ಕಟ್ಟಡದಲ್ಲಿ ಒಟ್ಟು 28 ರೂಮುಗಳಿದ್ದು, ಇವುಗಳಲ್ಲಿ 12 ರೂಮುಗಳನ್ನು ಪತಂಜಲಿ ಕಂಪನಿಯು ತನ್ನ ಸರಕುಗಳನ್ನು ತುಂಬಿಡಲು ಬಳಸಿಕೊಳ್ಳುತ್ತಿದೆ ಎಂಬುದು ಕೆಲ ವರದಿಗಳ ಸಾರಾಂಶ.
ಪತಂಜಲಿ ಕಂಪನಿಯು ಹೀಗೆ ಸ್ಮಾರಕವನ್ನು ಉಪಯೋಗಿಸಿಕೊಳ್ಳುತ್ತಿರುವುದು ತೀರಾ ಇತ್ತೀಚೆಗಷ್ಟೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಅಹ್ಮದಾಬಾದ್ ಮತ್ತಿತರ ಕಡೆ ನಡೆಯುತ್ತಿರುವ ಯೋಗ ಪ್ರದರ್ಶನಗಳಲ್ಲಿ ತನ್ನ ಉತ್ಪನ್ನಗಳ ಪ್ರಚಾರ ಕಾರ್ಯ ನಡೆಸಲು ಪತಂಜಲಿ ಮುಂದಾಗಿದೆ. ಹಾಗಾಗಿ, ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸಿಡಲು ತಾತ್ಕಾಲಿಕವಾಗಿ ಗಾಂಧಿ ಸ್ಮಾರಕದ ಕೆಲ ಕೊಠಡಿಗಳನ್ನು ಅದು ಉಪಯೋಗಿಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ.
ಆದರೆ, ಈ ವರದಿಗಳನ್ನು ಬಾಬಾ ರಾಮ್ ದೇವ ತಳ್ಳಿಹಾಕಿದ್ದಾರೆ. ಸ್ಮಾರಕಗಳನ್ನು ಉಪಯೋಗಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್ ನ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ಈ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications