ಭಾರತದ ವಾಯುಪ್ರದೇಶಕ್ಕೆ ಪ್ರವೇಶಿಸಿದ ಪಾಕಿಸ್ತಾನ ವಿಮಾನ: ಮೂರು ರಾಜ್ಯಗಳ ಮೇಲೆ ಹಾರಾಟ- ಯಾವ ರಾಜ್ಯಗಳು ತಿಳಿಯಿರಿ
ನವದೆಹಲಿ, ಜುಲೈ 29: ಪಾಕಿಸ್ತಾನದ ವಿಮಾನವೊಂದು ಸೋಮವಾರ ಸಂಜೆ ಹಠಾತ್ತನೆ ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ವಿಮಾನವು ಒಂದು ಗಂಟೆಗೂ ಹೆಚ್ಚು ಕಾಲ ಭಾರತದ ಮೇಲೆ ಹಾರಾಟವನ್ನು ನಡೆಸಿದೆ. ಇದು ರಾಜಸ್ಥಾನ ಸೇರಿದಂತೆ ಭಾರತದ ಮೂರು ರಾಜ್ಯಗಳ ಮೇಲೆ ಹಾರಾಡಿದೆ.
ಪಾಕಿಸ್ತಾನ ವಿಮಾನ ( PIA-308 ) ಕರಾಚಿಯಿಂದ ಇಸ್ಲಾಮಾಬಾದ್ಗೆ ಸಂಜೆ 4:31 ಕ್ಕೆ ಹೊರಟಿತು. ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಹವಾಮಾನ ಹದಗೆಟ್ಟಿತು. ಹವಾಮಾನ ಪರಿಸ್ಥಿತಿಯಿಂದಾಗಿ, ವಿಮಾನವು ತನ್ನ ಟ್ರ್ಯಾಕ್ ಅನ್ನು ಕಳೆದುಕೊಂಡಿದೆ. ಸಂಜೆ 5:02 ಕ್ಕೆ ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿತು.

ವಿಮಾನವು ಪಾಕಿಸ್ತಾನದ ಹೈದರಾಬಾದ್ನಿಂದ ರಾಜಸ್ಥಾನದ ಮೂಲಕ ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿತು. ಹರಿಯಾಣ ಮತ್ತು ಪಂಜಾಬ್ ಮೇಲೆ ಹಾರಾಟ ನಡೆಸಿತು. ಅದು ಸುಮಾರು 1 ಗಂಟೆ 12 ನಿಮಿಷಗಳ ಕಾಲ ಭಾರತದ ವಾಯುಪ್ರದೇಶದಲ್ಲಿಯೇ ಹಾರಾಡಿತು. ವಿಮಾನವು ಪಂಜಾಬ್ನಿಂದ ಸಂಜೆ 6.14 ಕ್ಕೆ ಪಾಕಿಸ್ತಾನದ ವಾಯುಪ್ರದೇಶಕ್ಕೆ ಹಿಂತಿರುಗಿತು ಎಂದು ವರದಿಯಾಗಿದೆ.
ಪಾಕಿಸ್ತಾನದ ವಾಯುಪ್ರದೇಶದಲ್ಲಿ ಇಂಡಿಗೋ ವಿಮಾನ ಹಾರಾಟ
ಕಳೆದ ತಿಂಗಳು ಪ್ರತಿಕೂಲ ವಾತಾವರಣದ ಕಾರಣ ಇಂಡಿಗೋ ವಿಮಾನವು ಪಾಕಿಸ್ತಾನದ ವಾಯುಪ್ರದೇಶದಲ್ಲಿ ನುಗ್ಗಿತ್ತು. ಇದು ಪಾಕ್ನ ಗುಜ್ರಾನ್ವಾಲಾ ಪ್ರದೇಶದ ಮೇಲೆ ಹಾರಾಟ ನಡೆಸಿತ್ತು ಎಂದು ವರದಿಯಾಗಿದೆ. ಶೀಘ್ರದಲ್ಲೇ, ಅದು ಸುರಕ್ಷಿತವಾಗಿ ಭಾರತಕ್ಕೆ ಮರಳಿತ್ತು. ಪ್ರತಿಕೂಲ ಹವಾಮಾನದಿಂದಾಗಿ ವಿಮಾನವನ್ನು ಪಾಕಿಸ್ತಾನದ ಅಟಾರಿಗೆ ತಿರುಗಿಸಬೇಕಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿಕೆ ನೀಡಿದೆ.

ಅಮೃತಸರ ಎಟಿಸಿ ಪಾಕಿಸ್ತಾನದೊಂದಿಗೆ ದೂರವಾಣಿ ಮೂಲಕ ಸಮನ್ವಯ ಸಾಧಿಸುವ ಮೂಲಕ ತಿರುವನ್ನು ಉತ್ತಮವಾಗಿ ನಿರ್ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಇಡೀ ಸಿಬ್ಬಂದಿ ಪಾಕಿಸ್ತಾನದೊಂದಿಗೆ ಸಂವಹನ ನಡೆಸಿತು. ವಿಮಾನವು ಅಂತಿಮವಾಗಿ ಅಹಮದಾಬಾದ್ನಲ್ಲಿ ಸುರಕ್ಷಿತವಾಗಿ ಇಳಿಯಿತು. ಇಂಡಿಗೋ ವಿಮಾನ ( 6E-645 ) ಅಮೃತಸರದಿಂದ ಹೊರಟಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಂಜಾಬ್ನಲ್ಲಿ ಪಾಕ್ ಡ್ರೋನ್ಗೆ ಬಿಎಸ್ಎಫ್ ತಡೆ
ಕಳೆದ ತಿಂಗಳು, ಪಂಜಾಬ್ನ ತರ್ನ್ ತರನ್ನಲ್ಲಿ ಭಾರತ ವಾಯುಪ್ರದೇಶವನ್ನು ಪ್ರವೇಶಿಸಿದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ ತಡೆದಿತ್ತು. ಬಿಎಸ್ಎಫ್ ಮತ್ತು ಪಂಜಾಬ್ ಪೊಲೀಸರ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಡ್ರೋನ್ ಅನ್ನು ತಡೆಯಲಾಗಿತ್ತು.

ಶಂಕಿತ ಡ್ರೋನ್ನ ಚಲನೆಯನ್ನು ಗಮನಿಸಿದಾಗ, ಬಿಎಸ್ಎಫ್ ಸಿಬ್ಬಂದಿ ತರ್ನ್ ತರನ್ ಜಿಲ್ಲೆಯ ಮೆಹದಿಪುರ ಗ್ರಾಮದ ಬಳಿ ಡ್ರೋನ್ ಅನ್ನು ತಡೆಹಿಡಿಯಲು ತಕ್ಷಣ ಕ್ರಮ ಕೈಗೊಂಡಿದ್ದರು.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications