ಶನಿವಾರ ಹಣ ವಿನಿಮಯದ ಅವಕಾಶ ಹಿರಿಯರಿಗೆ ಮಾತ್ರ!
ಪ್ರತಿದಿನ ಸರದಿಯ ಸಾಲು ತಗ್ಗುತ್ತಿಲ್ಲ, ಹಿರಿಯರ ಬವಣೆ ಕೂಡ ನಿಲ್ಲುತ್ತಿಲ್ಲ. ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗಿದ್ದರಿಂದ ಹಿರಿಯರನೇಕರು ಹಣ ವಿನಿಮಯ ಮಾಡಿಕೊಳ್ಳುವುದರಿಂದ ವಂಚಿತರಾಗುತ್ತಿದ್ದರು.
ನವದೆಹಲಿ, ನವೆಂಬರ್ 19 : ಶನಿವಾರ ದೇಶದಾದ್ಯಂತ ಬ್ಯಾಂಕ್ ಗಳಲ್ಲಿ ಹಣ ವಿನಿಮಯದ ಅವಕಾಶ ಹಿರಿಯ ನಾಗರಿಕರಿಗೆ ಮಾತ್ರ ಲಭಿಸಲಿದೆ. ಬ್ಯಾಂಕ್ ಗಳಲ್ಲಿ ಕ್ಯೂನಿಂತು ಹಣ ಪಡೆಯಲು ಹಿರಿಯರು ಕಷ್ಟಪಡುತ್ತಿರುವ ಸಮಯದಲ್ಲಿ ಈ ಕ್ರಮ ಸ್ವಾಗತಾರ್ಹ.
ಹೀಗಾಗಿ ಹಿರಿಯ ನಾಗರಿಕರಲ್ಲದವರು ಹಣ ವಿನಿಮಯಕ್ಕಾಗಿ ಶನಿವಾರ ಬ್ಯಾಂಕ್ ಮುಂದೆ ಕ್ಯೂ ನಿಲ್ಲುವ ಅಗತ್ಯವಿಲ್ಲ. ಭಾನುವಾರ ಮಾತ್ರ ಎಲ್ಲ ಬ್ಯಾಂಕುಗಳಿಗೆ ರಜಾ ಇರಲಿದೆ. [ನೋಟಿಗಾಗಿ ಸಾಲಿನಲ್ಲಿ ನಿಂತಾಗ ಮಾಡಬಹುದಾದ 12 ಕೆಲಸಗಳು]

ಪ್ರತಿದಿನ ಸರದಿಯ ಸಾಲು ತಗ್ಗುತ್ತಿಲ್ಲ, ಹಿರಿಯರ ಬವಣೆ ಕೂಡ ನಿಲ್ಲುತ್ತಿಲ್ಲ. ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗಿದ್ದರಿಂದ ಹಿರಿಯರನೇಕರು ಹಣ ವಿನಿಮಯ ಮಾಡಿಕೊಳ್ಳುವುದರಿಂದ ವಂಚಿತರಾಗುತ್ತಿದ್ದರು.
ಕೆಲ ದಿನಗಳಿಂದ ಬ್ಯಾಂಕ್ ಮುಂದೆ ಮೊದಲಿನಂಥ ರಶ್ ಕಡಿಮೆಯಾಗಿದ್ದರೂ ಜನರ ಸಂಕಷ್ಟ ಇನ್ನೂ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಹಿರಿಯರಿಗೆ ವರದಾನವಾಗಲಿದೆ. [ಕಂತೆ ಕಂತೆ ನೋಟಿನ ಮಧ್ಯೆ ಹೃದಯ ಹಿಂಡಿದ ಚಿತ್ರ]












Click it and Unblock the Notifications