ಹೃದಯದಲ್ಲಿ ಸಮಸ್ಯೆಯಿರುವ ಈ ಪುಟ್ಟ ಮಗುವಿಗೆ ನೆರವಾಗಿ...
ಎಲ್ಲರಂತೆ ಈ ಪೋಷಕರು ಕೂಡ ತಮ್ಮ ಮಗು ಆರೋಗ್ಯವಾಗಿ ಹುಸಟ್ಟಿದರೆ ಸಾಕು ಎಂದುಕೊಂಡಿದ್ದರು. ಹಾಗೆ ಮಗುವೂ ಆರೋಗ್ಯವಾಗಿಯೇ ಜನಿಸಿತು. ಆದರೆ ಐದು ತಿಂಗಳಾಗುತ್ತಿದ್ದಂತೆ ಮಗುವಿನಲ್ಲಿ ಸಣ್ಣದಾಗಿ ಉಸಿರಾಟ ಸಮಸ್ಯೆ ಶುರುವಾಯಿತು. ಆ ಸಮಸ್ಯೆ ದಿನಗಳೆದಂತೆ ದೊಡ್ಡದಾಗಿ ಬೆಳೆಯುತ್ತಾ ಹೋಯಿತು ಕೂಡ.
ಇದೀಗ ದೇವಾಂಶ್ಗೆ ಒಂದೂವರೆ ವರ್ಷ. 2019ರಲ್ಲಿ ಹುಟ್ಟಿದ ದೇವಾಂಶ್ಗೆ ಉಸಿರಾಟದಲ್ಲಿ ತೀವ್ರ ಕಷ್ಟ ಕಾಣಿಸಿಕೊಂಡಿದೆ. ಎದೆಯಲ್ಲಿ ಕಫ ತುಂಬಿಕೊಂಡಿದ್ದು, ಚಿಕಿತ್ಸೆ ನಡೆಸಲೇಬೇಕಾದ ಅನಿವಾರ್ಯತೆ ಬಂದಿದೆ. ಅಪರೂಪದ ಹೃದಯ ಸಮಸ್ಯೆಯಿಂದ ಈ ಪುಟಾಣಿ ಬಳಲುತ್ತಿದ್ದು, ಪೋಷಕರಿಗೆ ಆರ್ಥಿಕವಾಗಿ ದುರ್ಬಲರಾಗಿರುವ ಕಾರಣ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮ ನೆರವು ಈ ಪುಟ್ಟ ಜೀವವನ್ನು ಉಳಿಸಬಹುದಾಗಿದೆ.

ಮಗುವಿಗೆ ಉಸಿರಾಟದಲ್ಲಿ ತೊಂದರೆ
ದೇವಾಂಶ್ ಪೋಷಕರಾದ ನಾಗರಾಜನ್ ಹಾಗೂ ರಾಜೇಶ್ವರಿ ಆಂಧ್ರದ ಅನಂತಪುರ ಜಿಲ್ಲೆಯ ಗುಟ್ಟಿಮಂಡಲ್ನವರು. ತಮ್ಮ ಮಗುವಿಗೆ ಉಸಿರಾಡಲು ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ ಅವರು ಮೊದಲು ಹೋಗಿದ್ದು ಅನಂತಪುರ ಜಿಲ್ಲಾಸ್ಪತ್ರೆಗೆ. ಅಲ್ಲಿ ವೈದ್ಯರು ಪರಿಶೀಲನೆ ನಡೆಸಿ, ಇದು ಹೃದಯ ನಾಳದ ವ್ಯವಸ್ಥೆಯಲ್ಲಿನ ಸಮಸ್ಯೆ (chest congestion) ಎಂದು ತಿಳಿಸಿ, ಚೆನ್ನೈನಲ್ಲಿನ ಮಕ್ಕಳ ಆಸ್ಪತ್ರೆಯಲ್ಲಿ ತೋರಿಸುವಂತೆ ಹೇಳಿದರು. ಅದರಂತೆ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಶಸ್ತ್ರಚಿಕಿತ್ಸೆಗೆ ಸೂಚಿಸಿರುವ ವೈದ್ಯರು
ಈ ಆಸ್ಪತ್ರೆಯಲ್ಲಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಚೆನ್ನೈನ MIOT ಆಸ್ಪತ್ರೆಗೆ ಬರುವಂತೆ ನಿರ್ದೇಶನ ನೀಡಲಾಗಿದೆ. ಉಸಿರಾಟದ ನೆರವಿಗೆ ನಾಳ ಅಳವಡಿಸಿದ್ದು, ಇಲ್ಲಿಯವರೆಗೂ ನಿರ್ವಹಣೆ ಮಾಡಲಾಗಿದೆ. ಆದರೆ ಈಗ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲೇಬೇಕೆಂದು ಪೋಷಕರಿಗೆ ಸೂಚಿಸಿದ್ದಾರೆ.

ಅಪರೂಪದ ಹೃದಯ ಸಮಸ್ಯೆ
ಹೃದಯ ಹಾಗೂ ಶ್ವಾಸಕೋಶದ ರಕ್ತನಾಳಗಳಲ್ಲಿ ತೊಂದರೆ ಕಾಣಿಸಿಕೊಳ್ಳುವ Scimitar syndrome ಸಮಸ್ಯೆ ಮಗುವಿನಲ್ಲಿದ್ದು, ಭಾಗಶಃ ಶ್ವಾಸಕೋಶ ನಾಳದ ತೊಂದರೆ (Two systemic collaterals from abdominal Aorta to R Lower lobe), ಹೃದಯದಲ್ಲಿ ಕಾಣಿಸಿಕೊಳ್ಳುವ ಅಪರೂಪದ ಸಮಸ್ಯೆ ಮಗುವಿನಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದಕ್ಕೆ ಎಲೆಕ್ಟಿವ್ ಶಸ್ತ್ರಚಿಕಿತ್ಸೆ ನಡೆಸಬೇಕಿದ್ದು, ಶ್ವಾಸಕೋಶದ ರಕ್ತನಾಳಗಳ ಮರುಹೊಂದಿಸುವಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
Recommended Video

ಚಿಕಿತ್ಸೆಗೆ 3,00,000 ರೂ ಅಗತ್ಯವಿದೆ
ಆದರೆ ಐಸಿಯು, ಶಸ್ತ್ರಚಿಕಿತ್ಸೆ ಔಷಧಗಳು ಸೇರಿ ಸುಮಾರು 3,00,000 ರೂ ಖರ್ಚಾಗಲಿದ್ದು, ಕ್ಯಾಬ್ ಡ್ರೈವರ್ ಆಗಿರುವ ನಾಗರಾಜನ್ ಅವರಿಗೆ ಈ ಹಣವನ್ನು ಭರಿಸಲು ಸಾಧ್ಯವಿಲ್ಲ. ಜೊತೆಗೆ ಕೊರೊನಾ ಸೋಂಕಿನ ಲಾಕ್ಡೌನ್ ಕೂಡ ಅವರ ಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ತಮ್ಮ ಮಗುವನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿರುವ ಈ ಪೋಷಕರಿಗೆ ನಿಮ್ಮ ನೆರವಿನ ಅಗತ್ಯವಿದೆ...
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications