ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯುವ ಉದ್ಯೋಗಿಗಳ ಕೆಲಸಕ್ಕೆ ಕುತ್ತು ತರವಲ್ಲ: ಮೂರ್ತಿ
ನವದೆಹಲಿ, ಜೂನ್ 1: ಮಾಹಿತಿ ತಂತ್ರಜ್ಞಾನ ವಲಯವನ್ನೇ ಬೆಚ್ಚಿ ಬೀಳಿಸಿರುವ ಐಟಿ ಕಂಪನಿಗಳ ಉದ್ಯೋಗ ಕಡಿತ ಅಸ್ತ್ರದ ಬಗ್ಗೆ ಐಟಿ ದಿಗ್ಗಜ, ಇನ್ಫೋಸಿಸ್ ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
''ಯುವ ಟೆಕ್ಕಿಗಳನ್ನು ಮನೆಗೆ ಕಳುಹಿಸುವ ವಿಚಾರ ಒಳ್ಳೆಯದಲ್ಲ'' ಎಂದಿರುವ ಅವರು, ಐಟಿ ಕಂಪನಿಗಳಲ್ಲಿ ಹಿರಿಯ ಸ್ಥಾನಗಳಲ್ಲಿರುವವರು ಕೊಂಚ ಹೊಂದಾಣಿಕೆ ಮಾಡಿಕೊಂಡರೆ ಕಿರಿಯ ಟೆಕಿಗಳು ಕೆಲಸ ಕಳೆದುಕೊಳ್ಳುವುದನ್ನು ತಪ್ಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.[ಐಟಿ ಪಿಂಕ್ ಸ್ಲಿಪ್, ಇದು ದುಃಖಕರ ಎಂದ ಇನ್ಫಿ ಮೂರ್ತಿ]
ದೊಡ್ಡ ಮೊತ್ತದ ಸಂಬಳ ಪಡೆಯುತ್ತಿರುವ ಐಟಿ ಕಂಪನಿಗಳ ದೊಡ್ಡ ಸ್ಥಾನಗಳಲ್ಲಿರುವವರು ತಮ್ಮ ಸಂಬಳದಲ್ಲಿ ಕಡಿತ ಮಾಡಿಕೊಳ್ಳಲು ಯತ್ನಿಸಿದರೆ ಕಂಪನಿಗಳ ಮೇಲೆ ಬೀಳುವ ಅನಗತ್ಯ ವೆಚ್ಛಗಳ ಮೇಲೆ ಕಡಿವಾಣ ಹಾಕಬಹುದು ಎಂದು ಅವರು ಕಿವಿಮಾತು ಹೇಳಿದ್ದಾರೆ.
Comments
English summary
As layoffs in the IT sector make international headlines, tech titan NR Narayana Murthy said that jobs of junior executives can be protected if bosses take pay cuts.