200 ಕಿ.ಮೀ ವೇಗದಲ್ಲಿ ಚಲಿಸುವ ಅತ್ಯಾಧುನಿಕ 'ತೇಜಸ್' ರೈಲಿಗೆ ಚಾಲನೆ
ಬರೋಬ್ಬರಿ 200 ಕಿಲೋಮೀಟರ್ ವೇಗದಲ್ಲಿ ಚಲಿಸುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ 'ತೇಜಸ್ ಎಕ್ಸ್ ಪ್ರೆಸ್' ಎಂಬ ಸೆಮಿ ಹೈ ಸ್ಟೀಪಡ್ ರೈಲಿಗೆ ಸೋಮವಾರ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದ್ದಾರೆ.
ಮುಂಬೈ, ಮೇ 23: ಸೋಮವಾರ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಸೆಮಿ ಹೈ ಸ್ಟೀಪಡ್ ರೈಲಿಗೆ ಚಾಲನೆ ನೀಡಿದ್ದಾರೆ. ಅಂದ ಹಾಗೆ ಇದರ ವೇಗ ಗಂಟೆಗೆ ಬರೋಬ್ಬರಿ 200 ಕಿಲೋಮೀಟರ್. ಹಲವು ಪ್ರಯತ್ನಗಳ ನಂತರ ಇಂಥಹದ್ದೊಂದು ರೈಲು ಮೊದಲ ಬಾರಿಗೆ ಭಾರತದಲ್ಲಿ ಓಡುತ್ತಿದೆ. ಇದರ ಹೆಸರು 'ತೇಜಸ್ ಎಕ್ಸ್ ಪ್ರೆಸ್'.
ಕೇವಲ ವೇಗದ ಕಾರಣಕ್ಕೆ ಮಾತ್ರವಲ್ಲ ಈ ರೈಲು ಹಲವು ಕಾರಣಗಳಿಗೆ ಪ್ರಯಾಣಿಕರ ಗಮನ ಸೆಳೆದಿದೆ. ಉತ್ತಮ ಪ್ರಯಾಣಿಕ ಸ್ನೇಹಿ ಆಸನ ವ್ಯವಸ್ಥೆಗಳು ಈ ರೈಲಿನಲ್ಲಿವೆ. ಜತೆಗೆ ಭಾರತದ ಭವಿಷ್ಯದ ರೈಲ್ವೇ ಯೋಜನೆಗಳ ಬಗ್ಗೆಯೂ ಇದು ನಿರೀಕ್ಷೆ ಹೆಚ್ಚಿಸಿದೆ.
ನೋಡಲು ರೈಲು ಆಕರ್ಷಕವಾಗಿದೆ. ಕಾಲು ಚಾಚಿ ಕುಳಿತುಕೊಳ್ಳಲು ಹೆಚ್ಚಿನ ಸ್ಥಳಾವಕಾಶವೂ ಇದೆ. ವೈಫೈ, ಎಲ್.ಸಿ.ಡಿ ಪರದೆಗಳು ಜತೆಗೆ ರೈಲಿನಲ್ಲೇ ಆಹಾರ ಸಿದ್ದಪಡಿಸಲು ವ್ಯವಸ್ಥೆಗಳಿವೆ.

ಅತ್ಯುತ್ತಮ ವಿನ್ಯಾಸ
ಈ ರೈಲಿನ ವಿನ್ಯಾಸ ಅತ್ಯಧ್ಭುತವಾಗಿದೆ. ಆದರೆ ಸಾಮಾನ್ಯ ರೈಲಿಗಿಂತ ತುಸು ಹೆಚ್ಚಿನ ದರವನ್ನು ಪ್ರಯಾಣಿಕರು ತೆರಬೇಕಾಗುತ್ತದೆ. ರೈಲಿನಲ್ಲಿ ಸಿಸಿಟಿವಿಗಳೂ ಇದ್ದು ಹೆಚ್ಚಿನ ಭದ್ರತೆಯೂ ಸಿಗುತ್ತದೆ. ಇನ್ನು ಸ್ವಯಂಚಾಲಿತ ಬಾಗಿಲು, ಪ್ರಯಾಣಿಕರ ಸಹಾಯಕ್ಕಾಗಿ ಬೋಗಿಯಲ್ಲೊಬ್ಬರು ಸಿಬ್ಬಂದಿ ಇರುತ್ತಾರೆ.

ಮೊದಲ ರೈಲಿಗೆ ಚಾಲನೆ
ಸೋಮವಾರ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ ಗೋವಾದ ಕರ್ಮಾಲಿ ರೈಲ್ವೇ ನಿಲ್ದಾಣಕ್ಕೆ ಪ್ರಯಾಣಿಸಿದ ಮೊದಲ ರೈಲಿಗೆ ರೈಲ್ವೇ ಸಚಿವ ಸುರೇಶ್ ಪ್ರಭು ಹಸಿರು ನಿಶಾನೆ ತೋರಿಸಿದರು.

200 ಕಿಲೋಮೀಟರ್ ವೇಗ
ಈ ತೇಜಸ್ ರೈಲಿನ ಬೋಗಿಗಳನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಪರಿಣಾಮ 200 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸುವ ಸಾಮಾರ್ಥ್ಯವನ್ನು ಈ ತೇಜಸ್ ರೈಲು ಹೊಂದಿದೆ. ಆದರೆ ಸದ್ಯ ಟ್ರಾಕ್ ನಲ್ಲಿರುವ ಸಮಸ್ಯೆಯಿಂದಾಗಿ ರೈಲು ಕೇವಲ 160 ಕಿಲೋಮೀಟರ್ ವೇಗದಲ್ಲಿ ಮಾತ್ರ ಸಂಚರಿಸಲಿದೆ.

ತೇಜಸ್ ಮಾರ್ಗಗಳು
ಸದ್ಯಕ್ಕೆ ತೇಜಸ್ ಬೆಂಗಳೂರಿಗೆ ಮಾತ್ರ ಬರುತ್ತಿಲ್ಲ ಎಂಬುದೇ ಬೇಸರದ ಸಂಗತಿ. ಇದನ್ನು ಹೊರತುಪಡಿಸಿ ನವದೆಹಲಿಯಿಂದ ಚಂಡೀಗಢಕ್ಕೆ ವಾರದಲ್ಲಿ 6 ದಿನ, ಲಕ್ನೋದಿಂದ ಆನಂದ್ ವಿಹಾರ್, ಮುಂಬೈನಿಂದ ಗೋವಾದ ಕರ್ಮೋಲಿಗೆ ವಾರಕ್ಕೆ 5 ದಿನ ಈ ರೈಲು ಪ್ರಯಾಣಿಸಲಿವೆ.

ಬಯೋ ಟಾಯ್ಲೆಟ್
ಇದರ ಎಲ್ಲಾ ಟಾಯ್ಲೆಟ್ ಗಳೂ ಬಯೋ ವಾಕ್ಯುಮ್ ಟಾಯ್ಲೆಟ್ ಗಳಾಗಿವೆ. ಟ್ಯಾಂಕಿನಲ್ಲಿ ನೀರೆಷ್ಟಿದೆ, ಟ್ಯಾಪ್ ಸೆನ್ಸಾರ್ ಗಳು, ಹ್ಯಾಂಡ್ ಡ್ರೈಯರ್ಸ್, ಬ್ರೈಲ್ ಡಿಸ್ಪ್ಲೇ, ಎಲ್ಲ ಪ್ರಯಾಣಿಕರಿಗೂ ಎಲ್.ಸಿ.ಡಿ ಟಿವಿ, ಫೋನ್ ಸಾಕೆಟ್, ವೈಫೈ, ಟೀ ಕಾಫಿ ವೆಂಡಿನ್ ಮೇಷೀನ್ಗ ಳು, ಮ್ಯಾಗಜೀನ್, ಉಪಹಾರ ಟೇಬಲ್ ಗಳು, ಸಿಸಿಟಿವಿ, ಬೆಂಕಿ ಮತ್ತು ಹೊಗೆ ಗುರುತಿಸುವ ಸೆನ್ಸಾರುಗಳು ಇದರಲ್ಲಿವೆ. ಹೀಗೆ ಇದೊಂದು ಅತ್ಯದ್ಭುತ ರೈಲೇ ಸರಿ.
-
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ












Click it and Unblock the Notifications