ದೂರು ನೀಡಲು ಹೋದರೆ ಪಾಠ ಹೇಳಿದ ಪೊಲೀಸರು!
ವಿಕೃತ ಕಾಮಿಯ ಕುರಿತು ದೂರು ನೀಡಲು ಹೋದ ಮಹಿಳೆಗೇ ಪೊಲೀಸರು ಬುದ್ಧಿವಾದ ಹೇಳಿದ ಘಟನೆ ರಾಜಸ್ತಾನದ ಉದಯಪುರದಲ್ಲಿ ನಡೆದಿದೆ.
ಉದಯಪುರ, ಏಪ್ರಿಲ್ 11: ಭಾರತದಲ್ಲಿ ಬೇಲಿಯೇ ಎದ್ದು ಹೊಲಮೇಯುವ ಸನ್ನಿವೇಶವೇ ಹೆಚ್ಚು. ರಕ್ಷಣೆಯ ನಿರೀಕ್ಷೆಯಿಟ್ಟುಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದರೆ, ರಕ್ಷಣೆಯ ಭರವಸೆಯ ಬದಲು ಒಂದಷ್ಟು ಪುಕ್ಕಟೆ ಪಾಠ ಕೇಳಬೇಕಾಗುತ್ತದೆ. ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ಇಂಥದೇ
ಘಟನೆ ನಡೆದಿದೆ.
ವಿಕೃತ ಕಾಮಿಯೊಬ್ಬನ ಕುರಿತು 17 ವರ್ಷದ ಯುವತಿ ಪೊಲೀಸರಿಗೆ ದೂರು ನೀಡುವುದಕ್ಕೆ ತೆರಳಿದಾಗ ಪೊಲೀಸರು ಆಕೆಗೆ ನೀಡಿದ ಪುಕ್ಕಟೆ ಸಲಹೆಗಳ ಕುರಿತು ಆಕೆಯ ಅಕ್ಕ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಸಹಾಯ ಮಾಡಬೇಕಾದ ಪೊಲೀಸರೇ, ಅಪರಾಧಿಗಳದ್ದೇನೂ ತಪ್ಪಿಲ್ಲ ಎಂಬಂತೆ ಅವರ ಪರ ನಿಂತರೆ ನಮ್ಮನ್ನೆಲ್ಲ ಕಾಪಾಡುವವರು ಯಾರೆಂದು ಆಕೆ ಪ್ರಶ್ನಿಸಿದ್ದಾರೆ.[ಬಿಗ್ ಬಜಾರ್ ಮ್ಯಾನೇಜರ್ ಮೇಲೆ ಲೈಂಗಿಕ ಕಿರುಕುಳ ಆರೋಪ]

ಆಕೆಯ ಫೇಸ್ ಬುಕ್ ಪೋಸ್ಟ್ ನೋಡಿದ ಕೇಂದ್ರ ಸಚಿವೆ ಮನೇಕಾ ಗಾಂಧಿ, ಆಕೆಯ ಸಂಪರ್ಕ ಸಂಖ್ಯೆ ನೀಡುವಂತೆ ಕೇಳಿದ್ದಾರಲ್ಲದೆ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ, ನ್ಯಾಯ ಒದಗಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.[ಬೆಂಗಳೂರಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ]
https://twitter.com/Manekagandhibjp/status/851312002572013568?ref_src=twsrc%5Etfw&ref_url=http%3A%2F%2Fwww.oneindia.com%2Findia%2Fno-country-for-women-pervert-blackmails-udaipur-teen-police-indulge-in-victim-shaming-2401012.htmlಘಟನೆಯ ವಿವರ
ರಾಜಸ್ತಾನದ ಉದಯಪುರದಲ್ಲಿ 17 ವರ್ಷದ ಯುವತಿಯೊಬ್ಬಳು ತನಗೆ ಸಾಮಾಜಿಕ ಜಾಲತಾಣಗಳ ಮೂಲಕ ತೊಂದರೆ ನೀಡುತ್ತಿದ್ದ ವಿಕೃತ ಕಾಮಿಯೊಬ್ಬನಿಂದಾಗಿ ತೀರಾ ತೊಂದರೆ ಅನುಭವಿಸುತ್ತಿದ್ದಳು. ಆಕೆಯ ಚಿತ್ರಗಳನ್ನು ಎಡಿಟ್ ಮಾಡಿ, ಅಶ್ಲೀಲಗೊಳಿಸಿ ಕಳಿಸುತ್ತಿದ್ದ ಆತನ ಉಪಟಳ ದಿನೇ ದಿನ ಹೆಚ್ಚಾಗುತ್ತಿದ್ದಂತೆ ಭಯಗೊಂಡ ಯುವತಿ ಮನೆ ಜನರಿಗೆ ಈ ವಿಷಯ ತಿಳಿಸಿದ್ದಳು.[ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ: ಯುವತಿ ಬಂಧನ]
ಘಟನೆಯನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ ಎಂದು ಈ ಬಗ್ಗೆ ದೂರು ನೀಡುವುದಕ್ಕೆ ತನ್ನ ತಂದೆಯೊಂದಿಗೆ ಯುವತಿ ಸೂರಜ್ ಪೊಲ್ ಸೈಬರ್ ಅಪರಾಧ ಶಾಖೆಗೆ ಬಂದು ದೂರುನೀಡಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು, ಹುಡುಗಿಯರು ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಆಕೆಗೆ ಗಂಟೆಗಟ್ಟಲೆ ಪಾಠ ಕೂಡ ಮಾಡಿದ್ದಾರೆ!
ಸಾಮಾಜಿಕ ಜಾಲತಾಣಗಳಲ್ಲಿರುವ ನಿಮ್ಮ ಎಲ್ಲಾ ಖಾತೆಗಳನ್ನೂ ಇಂದೇ ನಿಷ್ಕ್ರಿಯಗೊಳಿಸಿಬಿಡಿ, ಆಗ ಇಂಥ ತೊಂದರೆಗಳು ಹುಟ್ಟಿಕೊಳ್ಳುವುದೇ ಇಲ್ಲ, ಹಾಗೇ ನಿಮ್ಮ ಮಗಳಿಗೆ ಫೋನ್ ಉಪಯೋಗಿಸುವುದಕ್ಕೂ ಬಿಡಬೇಡಿ ಎಂದು ಯುವತಿಗೆ ಮಾತ್ರವಲ್ಲದೆ ಆಕೆಯ ತಂದೆಗೂ ಪಾಠ ಮಾಡಿದ್ದಾರೆ.
ಇದರಿಂದ ಕುಪಿತಗೊಂಡ ಆಕೆ ಮನೆಗೆ ಬಂದು ತನ್ನ ಅಳಲನ್ನು ತನ್ನ ಸಹೋದರಿಯ ಬಳಿ ತೋಡಿಕೊಂಡಿದ್ದಾರೆ. ಇದೀಗ ಅವರು ಫೇಸ್ ಬುಕ್ ಗೆ ಹಾಕಿರುವ ಪೋಸ್ಟ್ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications