Get Updates
Get notified of breaking news, exclusive insights, and must-see stories!

ನಿಪಾಹ್ ಪ್ರಕರಣದಲ್ಲಿ ಗಣನೀಯ ಇಳಿಕೆ: ಕೇರಳ ನಿರಾಳ

ಕೋಞಕ್ಕೊಡ್, ಜೂನ್ 11: ಮಾರಣಾಂತಿಕ ನಿಪಾಹ್ ವೈರಸ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಕೇರಳಿಗರಲ್ಲಿ ನಿರಾಳವನ್ನುಂಟು ಮಾಡಿದೆ.

ಕೊಞಕ್ಕೊಡ್ ಮತ್ತು ಮಲಪ್ಪುರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಈ ರೋಗ ಒಂದು ಜಾತಿಯ ಬಾವಲಿಗಳಿಂದ ಹರಡುತ್ತದೆ ಎನ್ನಲಾಗಿತ್ತು. ಆದರೆ ಹಲವು ಸಂಶೋಧನೆಗಳ ನಂತರ ಇದು ಬಾವಲಿಗಳಿಂದ ಬರುವುದಲ್ಲ ಎಂದು ಸಾಬೀತಾಗಿತ್ತು. ಇದುವರೆಗೂ ಸ್ಪಷ್ಟ ಮಾಹಿತಿ, ಪರಿಹಾರವೂ ಇಲ್ಲದೆ ಕೇರಳದಲ್ಲಿ ಭೀತಿ ಎಬ್ಬಿಸಿದ್ದ ನಿಪಾಹ್ ಸೋಂಕು ಇದೀಗ ಗಣನೀಯ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ.

ಇಲ್ಲಿನ ಸರ್ಕಾರ ‍ಸರಿಯಾದ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇ ಸೋಂಕಿನ ನಿಯಂತ್ರಣಕ್ಕೆ ಕಾರಣವಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಕೇರಳದಲ್ಲಿ ಇದುವರೆಗೂ ನಿಪಾಹ್ ಸೋಂಕಿನಿಂದ 15 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

Nipah Virus cases come under control in Kerala

ಇತ್ತೀಚೆಗೆ ನಿಪಾಹ್ ಲಕ್ಷಣವನ್ನೇ ಹೋಲುವ ಹಲವು ಪ್ರಕರಣಗಳಲ್ಲಿ ರೋಗಿಯ ರಕ್ತಪರೀಕ್ಷೆ ಮಾಡಿದ ವೈದ್ಯರು ಇವು ನಿಪಾಹ್ ಪ್ರಕರಣವನ್ನ ಎಂದಿವೆ. ಆದ್ದರಿಂದ ನಿಪಾಹ್ ಸೋಂಕು ನಿಯಂತ್ರಣಕ್ಕೆ ಬಂದು ಕೇರಳಿಗ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಇಲ್ಲಿನ ಸರ್ಕಾರ ಹೇಳಿದೆ.

ಮಲೇಶಿಯಾದ ನಿಪಾಹ್ ಎಂಬ ಊರಿನಲ್ಲಿ ಈ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಿದ್ದರಿಂದ ರೋಗಕ್ಕೆ ಈ ಹೆಸರು! ಒಂದು ರೀತಿಯ ಬಾವಲಿಗಳಿಂದ ಈ ರೋಗ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಸಾಮಾನ್ಯ ಜ್ವರದಂತೆ ಆರಂಭವಾಗುವ ಲಕ್ಷಣ ನಂತರ ರೋಗಿಯನ್ನು ಸಾವಿನಂಚಿಗೂ ಕೊಂಡೊಯ್ಯುತ್ತಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+