ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಭರದ ಸಿದ್ಧತೆ
ಬೆಂಗಳೂರು,
ಜೂ. 18: ಅಂತಾರಾಷ್ಟ್ರೀಯ ಯೋಗ ದಿನ ಸಮೀಪಿಸುತ್ತಿದ್ದು ದೇಶದ ಎಲ್ಲೆಡೆ ತಯಾರಿ ಭರ್ಜರಿಯಾಗಿದೆ. ಯೋಗ ದಿನಕ್ಕೆ ಅಲಹಬಾದ್, ದೆಹಲಿ ಸೇರಿದಂತೆ ಎಲ್ಲೆಡೆ ಪೂರ್ವಭಾವಿ ಸಿದ್ಧತೆಗಳು ಜೋರಾಗಿವೆ. id="toptextpromo"> id='are-slot-1' class='oiad oi-axt oiadv'>ವಿದೇಶಾಂಗ
ಸಚಿವೆ ಸುಷ್ಮಾ ಸ್ವರಾಜ್ ಸಹ ಯೋಗ ದಿನದ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಂಜಾಬ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಾಂತ್ವನ ಹೇಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮುಂಬೈ ಬಳಿ ತುಂಡಾದ ರೈಲ್ವೆ ಹಳಿ. ಭಗವದ್ಗೀತೆ ಸ್ಫರ್ಧೆಯಲ್ಲಿ ಬಹುಮಾನಗಳಿಸಿದ ಬಾಲಕಿ ಮರಿಯಮ್ ಸಿದ್ಧಕ್ವಿ ಕುಟುಂಬ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. .. ಹತ್ತು ಹಲವು ಸುದ್ದಿಗಳು ಚಿತ್ರಗಳಲ್ಲಿ.(ಪಿಟಿಐ ಚಿತ್ರಗಳು) id='are-slot-2' class='oiad oi-axt oiadv'>
ಯೋಗಾನುಯೋಗ
ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾದ ಯೋಗಾಸನದಲ್ಲಿ ತೊಡಗಿರುವ ಯುವತಿಯರು. ಜೂನ್ 21 ರಂದು ಯೋಗ ದಿನ ಹಮ್ಮಿಕೊಳ್ಳಲಾಗಿದ್ದು ದೇಶಾದ್ಯಂತ ಕಾರ್ಯಕ್ರಮ ನಡೆಯಲಿದೆ.

ಜೋಧಪುರದಲ್ಲೂ ಪೂರ್ವತಯಾರಿ
ಯೋಗ ದಿನದ ಹಿನ್ನೆಲೆಯಲ್ಲಿ ಜೋಧಪುರದಲ್ಲಿ ಪೂರ್ವತಯಾರಿ. ದೆಹಲಿಯಲ್ಲಿ ಜೂನ್ 21 ರಂದು ನಡೆಯುವ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುವ ನಿರರೀಕ್ಷೆಯಿದೆ.

ಸುಷ್ಮಾ ಭಾಷಣ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹ ಯೋಗ ದಿನದ ಭಾಷಣದ ತಯಾರಿಯಲ್ಲಿ ನಿರತರಾಗಿದ್ದಾರೆ. ಸಂಸತ್ ಭವನದ ಎದುರು ಹಾಕಿರುವ ಸ್ಕ್ರೀನ್ ನಲ್ಲಿ ಗುರುವಾರ ಕಂಡುಬಂದ ದೃಶ್ಯ.

ರೈಲು ವಿಳಂಬ
ಥಾಣೆ ಮತ್ತು ವಾಶಿ ನಡುವಿನ ರೈಲ್ವೆ ಹಳಿ ತುಂಡಾದ ಪರಿಣಾಮ ವಿವಿಧೆಡೆ ಸಂಚರಿಸಬೇಕಾಗಿದ್ದ ರೈಲುಗಳು ಸುಮಾರು 5 ಗಂಟೆ ತಡವಾದವು. ಬೆಂಗಳೂರಿನ ಬಳಿ ಎರಡು ತಿಂಗಳ ಹಿಂದೆ ಇಂಥದ್ದೆ ಕಾರಣದಿಂದ ಅವಘಡ ಸಂಭವಿಸಿತ್ತು.

ರಾಹುಲ್ ಗಾಂಧಿ ಸಾಂತ್ವನ
ಆತ್ಮಹತ್ಯೆ ಮಾಡಿಕೊಂಡ ಪಂಜಾಬ್ ನ ರೂತ ಸುರ್ ಜಿತ್ ಸಿಂಗ್ ರೈತರ ಕುಟುಂಬಕ್ಕೆ ಸಾಂತ್ವನ ಹೇಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ದೆಹಲಿ ಆಮ್ ಆದ್ಮಿ ಸರ್ಕಾರದ ಮೇಲೆ ನಿರಂತರ ವಾಗ್ದಾಳಿ ಮಾಡುತ್ತಿದ್ದಾರೆ.

ಕ್ರಿಕೆಟ್ ಜನಕರಿಗೆ ಸ್ಮರಣೀಯ ಗೆಲುವು
ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅವಿಸ್ಮರಣೀಯ ಗೆಲುವು ದಾಖಲಿಸಿದೆ. ನಾಯಕ ಇಯಾನ್ ಮಾರ್ಗನ್ ಅವರ ಭರ್ಜರಿ ಶತಕದ ನೆರವಿನಿಂದ 350 ರನ್ ಗಳ ಬೃಹತ್ ಮೊತ್ತವಮನ್ನು ಚೇಸ್ ಮಾಡಿದ ಇಂಗ್ಲೆಂಡ್ ಸರಣಿಯಲ್ಲಿ ಸಮಬಲ ಸಾಧಿಸಿದೆ.

ಕಡಿಮೆಯಾಗದ ಆಕ್ರೋಶ
ಲಲಿತ್ ಮೋದಿ ಗೆ ವೀಸಾ ನೀಡಿಕೆ ಸಂಬಂಧ ಆರೋಪಕ್ಕೆ ಗುರಿಯಾಗಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಮುಂದುವರಿದಿದೆ.

ಸಾಧಕಿಗೆ ಅಭಿನಂದನೆ
ಭಗವದ್ಗೀತೆ ಸ್ಫರ್ಧೆಯಲ್ಲಿ ಬಹುಮಾನಗಳಿಸಿದ ಬಾಲಕಿ ಮರಿಯಮ್ ಸಿದ್ಧಕ್ವಿ ಕುಟುಂಬ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.












Click it and Unblock the Notifications