ಚಿತ್ರಗಳಲ್ಲಿ: ಮಂಗಳವಾರದ ಸುದ್ದಿಗಳ ಮೇಲೆ ಪಕ್ಷಿನೋಟ
ನವದೆಹಲಿ, ಮಾರ್ಚ್. 29: ದಿನ ಕಳೆದು ಹೋಗಿರಬಹುದು. ಆದರೆ ಕೆಲವೊಂದಿಷ್ಟು ಸುದ್ದಿಗಳು ಆ ದಿನಕ್ಕೆ, ಕೆಲವೊಂದಿಷ್ಟು ಇನ್ನು ಸ್ವಲ್ಪ ದಿನ ಇರುವಂತೆ ಸುದ್ದಿ ಮಾಡಿ ಮರೆಯಾಗುತ್ತವೆ.
ಬೆಂಗಳೂರಿಗೆ ಬಂದ ಬರೋಬ್ಬರಿ 1 ಕೋಟಿ ರು. ಮೌಲ್ಯದ ನಾಯಿ. ರಂಗೇರುತ್ತಿರುವ ಪಂಚರಾಜ್ಯಗಳ ಚುನಾವಣಾ ಕಣ. ಅಸ್ಸಾಂನಲ್ಲಿ ಒಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಚಾರ ಮಾಡುತ್ತಿದ್ದರೆ, ಇನ್ನೊಂದೆಡೆ ರಾಹುಲ್ ಗಾಂಧಿ ಪ್ರಚಾರ ಕೈಗೊಂಡಿದ್ದಾರೆ.
ಅಬಕಾರಿ ಸುಂಕ ಹೆಚ್ಚಳ ಖಂಡಿಸಿ ನವದೆಹಲಿಯಲ್ಲಿ ಬೀದಿಗಿಳಿದು ಮತ್ತೆ ಪ್ರತಿಭಟನೆ ನಡೆಸಿದ ಆಭರಣ ವರ್ತಕರು. ಲಕ್ನೋದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದದ ಮೋಹನ್ ಭಾಗವತ್, ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ...(ಪಿಟಿಐ ಚಿತ್ರಗಳು)

ಕೋಟಿ ಮೌಲ್ಯದ ನಾಯಿ ನೋಡಿ
ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ನಾಯಿ. ಸತೀಶ್ ಎಂಬುವರು ನಾಯಿಯನ್ನು ಕರೆತಂದಿದ್ದು ಇದರ ಮೌಲ್ಯ ಬರೋಬ್ಬರಿ 1 ಕೋಟಿ ರು.

ವರ್ತಕರ ಪ್ರತಿಭಟನೆ
ಬಜೆಟ್ ನಲ್ಲಿ ಆಭರಣಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದನ್ನು ಖಂಡಿಸಿ ನವೆದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಆಭರಣ ವರ್ತಕರು.

ಕೋಲ್ಕತ್ತಾ
ಚೀಟ್ ಫಂಡ್ ಹಗರಣವೊಂದಕ್ಕೆ ಸಂಬಂಧಿಸಿ ಕೋಲ್ಕತ್ತಾದಲ್ಲಿ ಪ್ರತಿಭಟನಾನಿರತರಾಗಿದ್ದವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ರಾಹುಲ್ ಗೆ ಸ್ವಾಗತ
ಚುನಾವಣಾ ಪ್ರಚಾರದ ನಿಮಿತ್ತ ಅಸ್ಸಾಂಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರಿಗೆ ಭವ್ಯ ಸ್ವಾಗತ.

ಅಮಿತ್ ಆರ್ಭಟ
ಅಸ್ಸಾಂ ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಅಮಿತ್ ಶಾ.

ಮೋಹನ್ ಭಾಗವತ್
ಲಕ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಗೌರವ ವಂದನೆ ಸ್ವೀಕರಿಸಿದರು.












Click it and Unblock the Notifications