ಮಂಗಳವಾರ ಘಟನಾವಳಿಗಳ ಮೇಲೆ ಚಿತ್ರ ನೋಟ
ನವದೆಹಲಿ, ಆಗಸ್ಟ್. 18: ಪಾರ್ಸಿ ಸಮುದಾಯದವರಿಗೆ ಮಂಗಳವಾರ ಆಗಸ್ಟ್ 18 ರಂದು ಹೊಸ ವರ್ಷಾಚರಣೆ. ಬಿಹಾರದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ 1.25 ಲಕ್ಷ ಕೋಟಿ ರುಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದರು.
ಬಾಂಗ್ಲಾ ಬಂದ್ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ಜನ ಸಂಚಾರ ವಿರಳವಾಗಿತ್ತು. ಸದಾ ವಾಹನ ಸಂಚಾರದಿಂದ ಗಿಜಿಗುಡುತ್ತಿದ್ದ ಮಹಾನಗರ ಮಂಗಳವಾರ ಸ್ಥಬ್ದವಾಗಿತ್ತು. ಬಾಲಿವುಡ್ ಬೆಡಗಿಯರಾದ ಕತ್ರೀನಾ ಕೈಪ್ ಮತ್ತು ಸೋನಾಕ್ಷಿ ಸಿನ್ಹಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಮಂಗಳವಾರ ದೇಶಾದ್ಯಂತ ನಡೆದ ಘಟನಾವಳಿಗಳ ಚಿತ್ರ ಸುದ್ದಿ ಇಲ್ಲಿದೆ. (ಪಿಟಿಐ ಚಿತ್ರಗಳು)

ಹೊಸ ವರ್ಷಕ್ಕೆ ಸ್ವಾಗತ
ಪಾರ್ಸಿ ಸಮುದಾಯದವರು ಮಂಗಳವಾರ ಆಗಸ್ಟ್ 18 ರಂದು ಹೊಸ ವರ್ಷಾಚರಣೆ ಮಾಡಿದರು. ನಾಗಪುರದಲ್ಲಿ ನವರೋಜ್ ಆಚರಣೆ ಮಾಡಿದ ಪಾರ್ಸಿ ಸಮುದಾಯದ ಗೃಹಿಣಿಯರು.

ವಾಸ್ತುಶಿಲ್ಪ ನೋಡಿರಿ
ಪಾರ್ಸಿ ಸಮುದಾಯದವರು ಮುಂಬೈನ ದೇವಾಲಯವೊಂದಕ್ಕೆ ಭೇಟಿ ನೀಡಿ ವಾಸ್ತುಶಿಲ್ಪಗಳನ್ನು ವೀಕ್ಷಣೆ ಮಾಡಿದರು. ಪಾರ್ಸಿ ಪಂಚಾಗದ ಪ್ರಕಾರ ಆಗಸ್ಟ್ 18 ರಂದು ಹೊಸ ವರ್ಷ ಆರಂಭವಾಗುತ್ತದೆ.

ಬಂದ್ ಎಫೆಕ್ಟ್
ಬಾಂಗ್ಲಾ ಬಂದ್ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಫ್ಲೈ ಓವರ್ ವೊಂದು ಮಂಗಳವಾರ ಕಂಡಿದ್ದು ಹೀಗೆ. ಸದಾ ವಾಹನ ಸಂಚಾರದಿಂದ ಗಿಜಿಗುಡುತ್ತಿದ್ದ ಮಹಾನಗರ ಮಂಗಳವಾರ ಸ್ಥಬ್ದವಾಗಿತ್ತು.

ಕಾಂಗ್ರೆಸ್ ನಿಂದ ರೈಲು ತಡೆ
ಸಸ್ನಾಗರ್ ರೈಲ್ವೆ ನಿಲ್ದಾಣದ ಬಳಿ ರೈಲು ತಡೆದು ಆಕ್ರೋಶ ಹೊರಹಾಕಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಯಿತು.

ಬಿಹಾರಕ್ಕೆ ವಿಶೇಷ ಪ್ಯಾಕೇಜ್
ಬಿಹಾರದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 1.25 ಲಕ್ಷ ಕೋಟಿ ರುಪಾಯಿ ವಿಶೇಷ ನೆರವು ಘೋಷಿಸಿದರು. ಅಲ್ಲದೇ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಸ್ವದೇಶಕ್ಕೆ ಮೋದಿ
ಅರಬ್ ರಾಷ್ಟ್ರಗಳ ಪ್ರವಾಸ ಮುಗಿಸಿ ಸ್ವದೇಶಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೀಳ್ಕೊಡಲಾಯಿತು.

ಬೆಳ್ಳಿ ಹುಡುಗಿ
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ ಸಿಂಗಲ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿ ಆಗಮಿಸಿದ ಸೈನಾ ನೆಹ್ವಾಲ್ ಹೈದ್ರಾಬಾದ್ ನಲ್ಲಿ ಪದಕ ಪ್ರದರ್ಶನ ಮಾಡಿದ್ದು ಹೀಗೆ.

ಶಂಕಿತ ಉಗ್ರರು
ಉದ್ದಮ್ ಪುರ್ ಉಗ್ರ ದಾಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ ಶಂಕಿತರ ಚಿತ್ರಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಮಾಡೆಲ್ ಗಳು
ಶಾನ್ ಇ ಪಾಕಿಸ್ತಾನ ವಸ್ತು ಪ್ರದರ್ಶನ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿ ವೇಳೆ ಗಮನ ಸೆಳೆದ ಮಾಡೆಲ್ ಗಳು.

ಬಾಲಿವುಡ್ ಲುಕ್
ಬಾಲಿವುಡ್ ಚಿತ್ರವೊಂದರ ಪ್ರಮೋಶನ್ ವೇಳೆ ಜತೆಯಾಗಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿಯರಾದ ಕತ್ರೀನಾ ಕೈಪ್ ಮತ್ತು ಸೋನಾಕ್ಷಿ ಸಿನ್ಹಾ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications