ಚಿತ್ರಗಳಲ್ಲಿ: ಹೋಳಿ ಬಣ್ಣದಲ್ಲಿ ಮಿಂದೆದ್ದ ಭಾರತ
ನವದೆಹಲಿ, ಮಾ. 6: ದೇಶದಲ್ಲೆಡೆ ಶುಕ್ರವಾರ ಹೋಳಿ ಹಬ್ಬದ ಸಂಭ್ರಮ. ಬಣ್ಣಗಳಲ್ಲಿ ಮಿಂದೆದ್ದ ಯುವಕರು ಹಬ್ಬಕ್ಕೆ ಹೊಸ ಮೆರುಗು ತಂದಿದ್ದರು. ಮುಂಬೈ, ಕೋಲ್ಕತ್ತಾ, ನವದೆಹಲಿ, ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಹಬ್ಬದ ಸಡಗರ ಮನೆ ಮಾಡಿತ್ತು.
ಕೇಂದ್ರ ಸಚಿವ ರಾಜ್ ನಾಥ್ ಸಿಂಗ್, ಮನೋಹರ್ ಪರಿಕ್ಕರ್ ಸೇರಿದಂತೆ ಅನೇಕ ಗಣ್ಯರು ಹಬ್ಬ ಆಚರಿಸಿದರು. ಗಡಿ ಕಾಯುವ ಯೋಧರು ಪರಸ್ಪರ ಬಣ್ಣ ಎರಚಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಇವುಗಳನ್ನೆಲ್ಲ ಒಟ್ಟುಗೂಡಿಸಿ ಇಲ್ಲಿ ನೀಡಿದ್ದೇವೆ.[ದೇಶಕ್ಕೆ ರಂಗು ಚೆಲ್ಲಿದ ಬಣ್ಣದ ಹಬ್ಬದ ಸಂಭ್ರಮ]
ಬೆಂಗಳೂರಿನ ಕಚೇರಿಗಳಲ್ಲಿಯೂ ಹೋಳಿಯ ಕಲರ್ ತುಂಬಿತ್ತು. ಶಾಲಾ ಮಕ್ಕಳು ತಾವೇನು ಕಡಿಮೆ ಎಂಬಂತೆ ಬಣ್ಣ ಬಣ್ಣ ಎಂದು ಹಾಡಿದರು. ಹೋಳಿ ಓಕುಳಿಯ ಚಿತ್ರಗಳು ನಿಮಗಾಗಿ...(ಪಿಟಿಐ ಚಿತ್ರಗಳು)

ಬಣ್ಣ ಒಲವಿನ ಬಣ್ಣ
ಜೈಪುರದಲ್ಲಿ ಹೋಳಿ ಆಚರಣೆ ವೇಳೆ ಬಣ್ಣದಲ್ಲಿ ಮಿಂದೆದ್ದ ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು.

ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಯುವಕರ ಜತೆ ವಿದೇಶಿಯರ ಬಣ್ಣದಾಟ ಹೀಗಿತ್ತು.

ಅಹಮದಾಬಾದ್
ಅಹಮದಾಬಾದ್ ನಲ್ಲಿ ಹೋಳಿ ಸಡಗರದಲ್ಲಿ ಯುವತಿಯರು.

ವಿದೇಶಿಯರ ಹಬ್ಬ
ಜೈಪುರದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ವಿದೇಶಿಯರು.

ಯೋಧರ ಹಬ್ಬ
ಶ್ರೀನಗರದಲ್ಲಿ ಹಬ್ಬ ಆಚರಿಸಿದ ಯೋಧರು.

ಗಡಿ ಕಾಯುವುದು ಇದ್ದೇ ಇದೆ
ದೇಶದ ಗಡಿ ಕಾಯುತ್ತ ರಕ್ಷಣೆಗೆ ಬದ್ಧರಾಗಿರುವ ಸೈನಿಕರು ಶುಕ್ರವಾರ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

ಉಜ್ಜಯಿನಿ
ಉಜ್ಜಯಿನಿಯ ದೇವಾಲಯದಲ್ಲಿ ಭಕ್ತರಿಂದ ವಿಶೇಷ ರೀತಿಯಲ್ಲಿ ಹಬ್ಬ ಆಚರಣೆ.

ರಾಜ್ ನಾಥ್ ಸಿಂಗ್
ಬಣ್ಣದೋಕುಳಿ ಆಡಿ ಡೋಲು ಬಾರಿಸಿದ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್

ಮಧ್ಯ ಪ್ರದೇಶ ಮುಖ್ಯಮಂತ್ರಿ
ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೆಂಡತಿ ಸಾಧನಾ ಸಿಂಗ್ ಜತೆ ಹೋಳಿ ಆಚರಿಸಿದರು.

ವಿದೇಶಿಯರ ಸಂಭ್ರಮ
ಭಾರತೀಯರೊಂದಿಗೆ ಮುಂಬೈನಲ್ಲಿ ಹಬ್ಬ ಆಚರಿಸಿದ ವಿದೇಶಿ ಯುವತಿಯರು.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications