ಸಂಕ್ಷಿಪ್ತ ಸುದ್ದಿ: ಲಾತೂರ್ ನಲ್ಲಿ ಮೊದಲ ಮಳೆಯ ಸಿಂಚನ
ಬೆಂಗಳೂರು, ಮೇ 01: ವಿದೇಶ, ದೇಶ, ರಾಜ್ಯ, ನಗರ, ಪಟ್ಟಣ, ಹಳ್ಳಿ ಹೀಗೆ ಎಲ್ಲೆಡೆಯಿಂದ ಆಯ್ದ ಸಂಕ್ಷಿಪ್ತ ಸುದ್ದಿಗಳನ್ನು ಇಲ್ಲಿ ಓದಬಹುದು.
* ಮಹಾರಾಷ್ಟ್ರದಲ್ಲಿ ಅತ್ಯಂತ ಬರಪೀಡಿತ ಪ್ರದೇಶ ಲಾತೂರ್ ನಲ್ಲಿ ಭಾನುವಾರ ಮಧ್ಯಾಹ್ನ ಮೊದಲ ಮಳೆಯ ಸಿಂಚನದಿಂದ ಆಶಾಭಾವನೆ ಮೂಡಿದೆ.
* ಉತ್ತರಾಖಂಡ್ ನ ಕಾಡ್ಗಿಚ್ಚು ನಂದಿಸಲು ಭಾರತೀಯ ವಾಯುಸೇನೆಯ ಎಂ ಐ 17 ಹೆಲಿಕಾಪ್ಟರ್ ಬಳಸಲಾಗುತ್ತಿದ್ದು, ಭೀಮ್ ತಳ್ ಕೆರೆಯಿಂದ ನೀರು ತೆಗೆದುಕೊಂಡು ಬೆಂಕಿ ನಂದಿಸುವ ಕಾರ್ಯ ಮುಂದುವರೆಸಲಾಗಿದೆ.

* ನರೇಂದ್ರ ಮೋದಿ ಅವರು 'ಪ್ರಧಾನಮಂತ್ರಿ ಉಜ್ವಾಲ ಯೋಜನೆ' ಗೆ ಮೇ 1 ರಂದು ಚಾಲನೆ ನೀಡಲಿದ್ದಾರೆ. ಸುಮಾರು 8,000 ಕೋಟಿ ಮೌಲ್ಯದ ಈ ಯೋಜನೆಯಿಂದ ಬಡತನ ರೇಖೆಗಿಂತ ಕೆಳಗಿರುವ 5 ಕೋಟಿ ಜನರಿಗೆ ಉಚಿತವಾಗಿ ಎಲ್ ಪಿಜಿ ಸೌಲಭ್ಯ ಸಿಗಲಿದೆ.
Happiness is....
— Akash Soni (@Akashtv1) April 29, 2016
RAIN IN LATUR :) pic.twitter.com/5cMHbnAjBa
* ಉತ್ತರಾಖಂಡ್ ಅಗ್ನಿ ಆಕಸ್ಮಿಕದಿಂದ 1,900 ಹೆಕ್ಟೇರ್ ಅರಣ್ಯ ಪ್ರದೇಶ, 5 ಜಿಲ್ಲೆಗಳು ಹಾನಿಗೊಳಗಾಗಿದೆ.

* ಪ್ರಧಾನಿ ಮೋದಿ ಅವರು ವಾರಣಾಸಿಯಲ್ಲಿ ಇ ರಿಕ್ಷಾ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಸ್ಸಿ ಘಾಟ್ ನಲ್ಲಿ ಇ ಬೋಟ್ ಗಳು ಕೂಡಾ ಇಂದಿನಿಂದ ಚಲಿಸಲಿದೆ.
* ಶನಿವಾರ ಮಧ್ಯರಾತ್ರಿಯಿಂದ ಇಂಧನ ದರ ಏರಿಕೆ. ಪ್ರತಿ ಲೀಟರ್ ಪೆಟ್ರೋಲ್ 1.06 ರಿ., ಡೀಸೆಲ್ 2.94 ರು. ಹೆಚ್ಚಳವಾಗಿದೆ. ಏಪ್ರಿಲ್ 15ರಂದು ಅಲ್ಪ ಪ್ರಮಾಣದಲ್ಲಿ ತೈಲ ಬೆಲೆ ಇಳಿಕೆಯಾಗಿತ್ತು.












Click it and Unblock the Notifications