ವಿಕಿಲೀಕ್ಸ್ ಸ್ಪಷ್ಟನೆ : ತೀವ್ರ ಮುಜುಗರಕ್ಕೀಡಾದ ಮೋದಿ
ನವದೆಹಲಿ, ಮಾ 18: ಜಗತ್ತಿನ ಪ್ರಮುಖ ನಾಯಕರ ಬಣ್ಣ ಬಯಲು ಮಾಡುತ್ತಿರುವ ವಿಕಿಲೀಕ್ಸ್, ಭಾರತೀಯ ಜನತಾ ಪಕ್ಷ ಮತ್ತು ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಮುಜುಗರಕ್ಕೀಡು ಮಾಡುವ ಸತ್ಯವನ್ನು ತೆರೆದಿಟ್ಟಿದೆ.
ನರೇಂದ್ರ ಮೋದಿ ಭ್ರಷ್ಟರಾಗಲು ಸಾಧ್ಯವೇ ಇಲ್ಲ ಎಂದು ತಾನು ಯಾವತ್ತೂ ಹೇಳಿ ಕೊಂಡಿಲ್ಲವೆಂದು ವಿಕಿಲೀಕ್ಸ್ ಸರಣಿ ಟ್ವೀಟ್ ಗಳ ಮೂಲಕ ಸಮಜಾಯಿಷಿ ನೀಡಿದೆ. ಮೋದಿ ಒಬ್ಬ ಪ್ರಾಮಾಣಿಕ ವ್ಯಕ್ತಿ ಮತ್ತು ಭಾರತದ ಏಕೈಕ ಕಳಂಕರಹಿತ ರಾಜಕಾರಣಿ ಎನ್ನುವ ಅರ್ಥದಲ್ಲಿ ನಮ್ಮ ಸಂಸ್ಥೆಯ ಮುಖ್ಯಸ್ಥ ಜೂಲಿಯನ್ ಅಸಾಂಜ್ ಎಂದೂ ಹೇಳಿಲ್ಲ ಎಂದು ವಿಕಿಲೀಕ್ಸ್ ಸ್ಪಷ್ಟನೆ ನೀಡಿದೆ.
ಮೋದಿ ಪ್ರಾಮಾಣಿಕತೆಗೆ ವಿಕಿಲೀಕ್ಸ್ ಶಹಬ್ಬಾಸ್ ಗಿರಿ ನೀಡಿದೆ ಎನ್ನುವ ಅಂಶವನ್ನು ಬಿಜೆಪಿ ತನ್ನ ಚುನಾವಣಾ ಪೋಸ್ಟರ್ ಗಳಲ್ಲಿ ಬಳಸಿಕೊಂಡಿತ್ತು. ಅಸಾಂಜ್ ಬೆಂಬಲ ತನಗಿರುವ ಅರ್ಥದಲ್ಲಿ ಬಿಜೆಪಿ ತನ್ನ ಜಾಹೀರಾತುಗಳಲ್ಲಿ ಬಳಸಿಕೊಳ್ಳುತ್ತಿದೆ. ಬಿಜೆಪಿಯ ಈ ಜಾಹೀರಾತುಗಳು ಸತ್ಯಕ್ಕೆ ದೂರವಾದುದು ಮತ್ತು ಇದಕ್ಕೂ ವಿಕಿಲೀಕ್ಸಿಗೂ ಸಂಬಂಧವಿಲ್ಲ ಎಂದು ವಿಕಿಲೀಕ್ಸ್ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದೆ.

ವಿಕಿಲೀಕ್ಸ್ ಮತ್ತು ಮೋದಿ: ಏನಿದು ವಿವಾದ? 2006ರಲ್ಲಿ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿ ಮೈಕಲ್ ಓವೆನ್, ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ಪ್ರಮುಖವಾಗಿ ಬಂಡವಾಳ ಹೂಡಿಕೆಯ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದ್ದರು. ಭೇಟಿಯ ನಂತರ ಓವೆನ್ ತನ್ನ ಭೇಟಿಯಲ್ಲಿ ನಡೆದ ಮಾತುಕತೆಯ ಸಾರಾಂಶವನ್ನು ಅಮೆರಿಕಾಕ್ಕೆ ಕಳುಹಿಸಿದ್ದರು.
ಓವೆನ್ ಕಳುಹಿಸಿದ ರಹಸ್ಯ ದಾಖಲೆಗಳನ್ನು ವಿಕಿಲೀಕ್ಸ್ 2011ರಲ್ಲಿ ಸೋರಿಕೆ ಮಾಡಿತ್ತು. ಇದಾದ ನಂತರ ಕಳೆದ ವರ್ಷ ಅಮೆರಿಕ ರಾಯಭಾರಿ ನ್ಯಾನ್ಸಿ ಪೊವೆಲ್ ಗುಜರಾತ್ ರಾಜಧಾನಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಆಗ 2011ರಲ್ಲಿ ಬಿಡುಗಡೆ ಮಾಡಿದ್ದ ದಾಖಲೆಗಳನ್ನು ಮತ್ತೆ ಸುದ್ದಿಗೆ ತಂದ ವಿಕಿಲೀಕ್ಸ್, ಗುಜರಾತಿನ ಪ್ರಮುಖ ಕಾಂಗ್ರೆಸ್ ಮುಖಂಡರೊಬ್ಬರು ಮೋದಿ ಕಾರ್ಯವೈಖರಿಯನ್ನು ಶ್ಲಾಘಿಸಿದ್ದ ಹೇಳಿಕೆಯನ್ನು ಬಳಸಿಕೊಂಡಿತ್ತು.
ಈಗ ಬಿಜೆಪಿ ಅಂದು ತಾವು ಬಳಸಿಕೊಂಡಿದ್ದ ಹೇಳಿಕೆಯನ್ನು ಜಾಹೀರಾತುಗಳಲ್ಲಿ ಬಳಸಿ ಕೊಳ್ಳುತ್ತಿದೆ. ನಿಜಾಂಶ ಏನಂದರೆ ಅದು ನಮ್ಮ ಹೇಳಿಕೆಯಾಗಿರಲಿಲ್ಲ, ಕಾಂಗ್ರೆಸ್ ಮುಖಂಡರೊಬ್ಬರ ಹೇಳಿಕೆಯನ್ನು ನಾವು ಉಲ್ಲೇಖಿಸಿದ್ದೇವೆ. ಮೋದಿ ಪ್ರಾಮಾಣಿಕತೆಗೆ ನಾವು ಸರ್ಟಿಫಿಕೇಟ್ ನೀಡಿಲ್ಲ ಎನ್ನುವುದು ವಿಕಿಲೀಕ್ಸ್ ಈಗ ಕೊಡುತ್ತಿರುವ ಸಮಜಾಯಿಷಿ.
ಬಿಜೆಪಿ ಪ್ರತಿಕ್ರಿಯೆ : ವಿಕಿಲೀಕ್ಸ್ ಮತ್ತು ಅಸಾಂಜ್ ಅವರಿಂದ ಪ್ರಾಮಾಣಿಕತೆಯ ಸರ್ಟಿಫಿಕೇಟ್ ಪಡೆದು ಬಿಜೆಪಿಗೆ ಚುನಾವಣೆಯಲ್ಲಿ ಗೆಲ್ಲುವ ಅನಿವಾರ್ಯತೆ ಇಲ್ಲ. ನರೇಂದ್ರ ಮೋದಿ ಅವರಿಗೆ ಯಾರ ಪ್ರಮಾಣಪತ್ರದ ಅವಶ್ಯಕತೆಯೂ ಇಲ್ಲ ಎಂದು ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ












Click it and Unblock the Notifications