ಕಾರವಾರ: ಲೋಕಾರ್ಪಣೆಯಾದ ವಜ್ರಕೋಶ ವಿಶೇಷಗಳೇನು?
ಕಾರವಾರ, ಸೆಪ್ಟೆಂಬರ್. 10: ಭಾರತೀಯ ನೌಕಾಸೇನೆಯ ಬಲ ಮತ್ತಷ್ಟು ಹೆಚ್ಚಿದೆ. ಐಎನ್ ಎಸ್ ವಜ್ರಕೋಶ ಕಾರವಾರದಲ್ಲಿ ಲೋಕಾರ್ಪಣೆಯಾಗಿದ್ದು ಸೇನೆಯ ಶಕ್ತಿ ಹೆಚ್ಚಿದೆ. ಈ ವಿಶೇಷ ಸಂಗ್ರಹ ಕೇಂದ್ರವನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಲೋಕಾರ್ಪಣೆ ಮಾಡಿದ್ದಾರೆ.
ಕಾರವಾರ ಬಳಿಯ ನೌಕಾನೆಲೆಯಿಂದ 40 ಕಿ.ಮೀ ದೂರದ ಹಟ್ಟಿಕೇರಿ ಎಂಬಲ್ಲಿ ನೌಕಾಪಡೆ ಶಸ್ತ್ರಾಸ್ತ್ರ ಸಂಗ್ರಹಾಗಾರ ನಿರ್ಮಿಸಿದೆ. ಸೀಬರ್ಡ್ ಯೋಜನೆಯ ಎರಡನೇ ಹಂತದ-ಎ ಕಾಮಗಾರಿಗಳಲ್ಲಿ ಮೊದಲ ಭಾಗವಾಗಿ ಇದನ್ನು ನಿರ್ಮಿಸಲಾಗಿದೆ. ಅತ್ಯಾಧುನಿಕ ಕ್ಷಿಪಣಿಗಳನ್ನು ಸಂಗ್ರಹಿಸಿ ಇಡಲು ವಿಶೇಷ ವ್ಯವಸ್ಥೆ ವಜ್ರಕೋಶದಲ್ಲಿದೆ.

ವಿಶೇಷ ಬಗೆಯ ಸಂಗ್ರಹಾಗಾರದಲ್ಲಿ ಯುದ್ಧ ಉಪಕರಣಗಳನ್ನು ರಕ್ಷಿಸಿ ಇಡಬಹುದು. ದೇಶದ ರಕ್ಷಣಾ ವ್ಯವಸ್ಥೆಯ ಬಲ ಹೆಚ್ಚಾಗಿದ್ದು ಕರಾವಳಿ ತೀರದಲ್ಲಿ ಇನ್ನಷ್ಟು ಕಟ್ಟೆಚ್ಚರ ವಹಿಸಬಹುದು ಎಂದು ನೌಕಾದಳದ ವಕ್ತಾರ ಡಿ ಕೆ ಶರ್ಮಾ ಹೇಳಿದರು. ಮಳೆ ನಡುವೆಯೇ ಕೇಂದ್ರವನ್ನು ಲೋಕಾರ್ಪಣೆ ಮಾಡಲಾಯಿತು. ಕ್ಯಾಪ್ಟನ್ ಅರವಿಂದ್ ಚಾರಿ ಸೇರಿದಂತೆ ಅನೇಕರು ಹಾಜರಿದ್ದರು.
ಮೀನುಗಾರನಿಗೆ ಸನ್ಮಾನ
ಗೋವಾ ತೀರದಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಪೈಲಟ್ ನ್ನು ಕಳೆದ ಮಾರ್ಚ್ ನಲ್ಲಿ ರಕ್ಷಿಸಿದ ಮೀನನುಗಾರರನ್ನು ಕೇಂದ್ರ ರಕ್ಷಣಾ ಸಚಿವ ಪರಿಕ್ಕರ್ ಸನ್ಮಾನಿಸಿದರು.

ನೌಕಾ ಪಡೆಯ ಮುಖ್ಯಸ್ಥ ಆರ್ ಕೆ. ಧವನ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಕಾರವಾರ ಸೇನೆಯ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ. ಪಶ್ಚಿಮ ಕರಾವಳಿ ಕಾಯಲು ಕಾರವಾರದಿಂದಲೇ ಕಾರ್ಯಭಾರ ನಡೆಸಲಾಗುತ್ತಿದೆ. ಸದ್ಯ ಹೊಂದಿರುವ ಬಲವನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಲಾಗುತ್ತಿದ್ದು ದೇಶದಮ ರಕ್ಷಣೆಗೆ ಸದಾ ಬದ್ಧರಾಗಿರುತ್ತೇವೆ ಎಂದು ಹೇಳಿದರು.(ಒನ್ ಇಂಡಿಯಾ ಸುದ್ದಿ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications