Hindenburg: ಅದಾನಿ ಕುರಿತು ವರದಿ ಪ್ರಕಟಿಸಿದ್ದ ಹಿಂಡೆನ್ಬರ್ಗ್ ರಿಸರ್ಚ್ ವಿಸರ್ಜನೆಗೆ ನಿರ್ಧಾರ: ಸಂಸ್ಥಾಪಕ
ಬೆಂಗಳೂರು, ಜನವರಿ 16: ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥೆಯು ನಾನಾ ಉದ್ಯಮಿಗಳು, ಸಂಸ್ಥೆಗಳ ಕುರಿತು ನಡೆಸಿದ ಸಂಶೋಧನಾ ವರದಿಗಳು ಸಾಕಷ್ಟು ಚರ್ಚೆ ಆಗಿವೆ. ಕೆಲವು ಖ್ಯಾತ ಉದ್ಯಮಿಗಳು, ಶೇರು ಮಾರುಕಟ್ಟೆ ಮೇಲೆ ವರದಿಗಳು ಪ್ರಭಾವ ಭೀರಿವೆ. ಇದೀಗ ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥಾಪಕ ನಾಥನ್ ಆಂಡರ್ಸನ್ ಸಂಸ್ಥೆ ವಿಸರ್ಜನೆ ಮಾಡುವುದಾಗಿ ಘೋಷಿಸಿದ್ದಾರೆ.
ಹಿಂಡೆನ್ಬರ್ಗ್ ರಿಸರ್ಚ್ನ ವರದಿಗಳ ಬಿತ್ತರ ಬಳಿಕ ಹೂಡಿಕೆದಾರರಿಂದ ಭಾರೀ ಶಾರ್ಟ್ ಸೆಲ್ಲಿಂಗ್ ಆಗಿತ್ತು. ಅಧಿಕಾರಿಗಳ ವಿವಿಧ ತನಿಖೆಗಳು ನಡೆಯಲು ಕಾರಣವಾಗಿತ್ತು. ಮುಖ್ಯವಾಗಿ ದೇಶದ ಶ್ರೀಮಂತ ಉದ್ಯಮಿ ಅದಾನಿ ಗ್ರೂಪ್ ಹಾಗೂ ಯುಎಸ್ ಮೂಲದ ನಿಕೋಲಾ ಹತ್ತಾರು ಕಂಪನಿಗಳ ಕುರಿತು ಹಿಂಡೆನ್ಬರ್ಗ್ ವರದಿ ಬಿಡುಗಡೆ ಮಾಡಿತ್ತು. ಕೆಲವು ವರದಿಗಳು ವ್ಯಾಪಕ ಚರ್ಚೆಗೆ, ಟೀಕೆಗೂ ಒಳಗಾಗಿವೆ.

ಹಿಂಡೆನ್ಬರ್ಗ್ ವರದಿ ಬಿಡುಗಡೆ ಆದ ಬಳಿಕ ಮಾರುಕಟ್ಟೆ ಮೌಲ್ಯಗಳು ಕುಸಿತಗೊಳ್ಳುತ್ತಿದ್ದವು. ಶೇರ್ಗಳಲ್ಲಿ ಕುಸಿತ, ಆರ್ಥಿಕ ಹೊಡೆತ ನೀಡಿದ್ದ ಈ ಸಂಸ್ಥೆಯಿಂದ ವಿಸರ್ಜನೆ ಮಾಡುವುದಾಗಿ ಸಂಸ್ಥಾಪಕ ನಾಥನ್ ಆಂಡರ್ಸನ್ ಅವರು ಹೇಳಿದ್ದಾರೆ. ಈ ಕುರಿತು ಅವರು ಕಾರಣ ನೀಡಿ ಪೋಸ್ಟ್ ಮಾಡಿದ್ದಾರೆ.
2017ರಲ್ಲಿ ಹಿಂಡೆನ್ಬರ್ಗ್ ಸ್ಥಾಪಿಸಿದ್ದ ನಾಥನ್ ಆಂಡರ್ಸನ್ ಅವರು, ತೀವ್ರ ಸ್ವರೂಪದ ವರದಿ, ಕೆಲವು ಬಾರಿ ಅತ್ಯಧಿಕ ಹಾನಿ ಉಂಟು ಮಾಡಬಹುದಾದ ವರದಿ ಹಿನ್ನೆಲೆಯಲ್ಲಿ ತಾವು ವಿಸರ್ಜನೆಯ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿ ಅವರು ಪತ್ರವೊಂದನ್ನು ಬರೆದಿದ್ದಾರೆ.
ಸಂಸ್ಥೆ ವಿಸರ್ಜನೆಗೆ ಅವರು ಉದ್ಯಮಿಗಳಿಂದ ಬೆದರಿಕೆ ಆಗಲಿ, ಅನಾರೋಗ್ಯ ಸಮಸ್ಯೆ, ಯಾವುದೇ ದೊಡ್ಡ ವೈಯಕ್ತಿಕ ಸಮಸ್ಯೆಗಳು ಹಾಗೂ ಇನ್ನಿತರ ನಿರ್ದಿಷ್ಟ ಕಾರಣ ತಿಳಿಸಿಲ್ಲ. ಕೇವಲ ವರದಿಯ ಹಾನಿ ವಿಚಾರವನ್ನು ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದು, ಗೊತ್ತಾಗಿದೆ.
ಸಂಸ್ಥೆ ಉದ್ಯಮ, ಕಂಪನಿಗಳು ಇನ್ನಿತರ ಕ್ಷೇತ್ರದವರ ಮೇಲೆ ಸಂಶೋಧನೆ ನಡೆಸಿ ಬಿಡುಗಡೆ ಮಾಡುವ ವರದಿಯ ತೀವ್ರತೆ ಬಗ್ಗೆ ಅವರು ಮಾತನಾಡಿದ್ದಾರೆ. ಅದರಿಂದ ಉಂಟಾಗುವ ಹಾನಿ, ದೇಶದಲ್ಲಿ ಇಂತಹ ಹಾನಿ, ನಕಾರಾತ್ಮಕ ಬದಲಾವಣೆಗೆ ಕಾರಣವಾಗಬಾರದೆಂದು ಕಾಳಜಿ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.
ಹಿಂಡೆನ್ಬರ್ಗ್ ಎನ್ನವುದು ನನ್ನ ಜೀವನದ ಅಧ್ಯಾಯವಾಗಿದೆ. ಅದನ್ನು ಕೇವಲ ಒಂದು ಅಧ್ಯಾಯದಂತೆ ಕಾಣಲು ಬಯಸುತ್ತೇನೆ. ಭವಿಷ್ಯದ ಕಾಳಜಿಯಿಂದ ಹೀಗೆ ಮಾಡಿದ್ದೇನೆ. ಈ ಬಗ್ಗೆ ಇಂತದ್ದೇ ಕಾರಣ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಸರ್ಜನೆ ಬಳಿಕ ನಾಥನ್ ಆಂಡರ್ಸನ್ಗೆ ಮುಂದೇನು?
ಹಿಂಡೆನ್ಬರ್ಗ್ ಸಂಸ್ಥೆಯ ಕೆಲವು ಯೋಜನೆಗಳ ಮಾಹಿತಿ ನಿಯಂತ್ರಿಕರಿಗೆ ಹಸ್ತಾಂತರಿಸಿದ್ದೇನೆ. ಕೆಲವು ಸಲಹೆಗಳನ್ನು ನೀಡಲಾಗಿದ್ದು, ಬುಧವಾರ ತಮ್ಮ ಕಾರ್ಯ ಮುಕ್ತಾಯಗೊಳಿಸಲಾಗಿದೆ.
ಮುಂದಿನ ಆರು ತಿಂಗಳುಗಳಲ್ಲಿ ಹಿಂಡೆನ್ಬರ್ಗ್ ಮಾದರಿಯ ವೀಡಿಯೋ ಬಿಡುಗಡೆ ಆಗಲಿವೆ. ಸರಣಿ ರೀತಿಯ ವಿಡಿಯೋಗಳು, ಸಂಸ್ಥೆಯ ತನಿಖೆಯ ಹಾದಿ, ಅಧ್ಯಯ, ಸಂಶೋಧನೆ ನಡೆಸಿದ್ದರ ಕುರಿತು ಮಾಹಿತಿ ಇದರಲ್ಲಿ ಸಿಗಲಿವೆ ಎಂದು ಅವರು ತಿಳಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications