ವೈರಲ್: ಬಾಲಿವುಡ್ ಸ್ಟಾರ್ಗಳ ಜೊತೆ ಸೆಲ್ಫಿಗೆ ಫೋಸು ನೀಡಿದ ಮೋದಿ
ನವದೆಹಲಿ, ಜನವರಿ 10: ಬಾಲಿವುಡ್ನ ರಂಗು-ರಂಗು ಸ್ಟಾರ್ಗಳ ಮಧ್ಯ ನಿಂತು ನರೇಂದ್ರ ಮೋದಿ ಅವರು ಸೆಲ್ಫಿಗೆ ಫೋಸು ನೀಡಿದ್ದಾರೆ. ಈ ಸೆಲ್ಫಿ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.
ಹೌದು, ರಣವೀರ್ ಸಿಂಗ್, ರಣಬೀರ್ ಕಪೂರ್, ವರುಣ್ ಧವನ್, ರೋಹಿತ್ ಶೆಟ್ಟಿ, ವಿಕ್ಕಿ ಕೌಶನ್, ಆಲಿಯಾ ಭಟ್, ಕರಣ್ ಜೋಹರ್ ಅಂತಹಾ ಯಂಗ್ ಆಂಡ್ ಬಿಗ್ ಸ್ಟಾರ್ಗಳ ನಡುವೆ ನಿಂತಿರುವ ಮೋದಿ ಸೆಲ್ಫಿಗೆ ಮುಖವೊಡ್ಡಿದ್ದಾರೆ, ಬಾಲಿವುಡ್ ಮಂದಿಯ ಮಧ್ಯದಲ್ಲೂ ಪ್ರಧಾನಿ ಹುದ್ದೆಯ ಗಂಭಿರ ನಗುವನ್ನೇ ಸೂಸಿದ್ದಾರೆ.
ಬಾಲಿವುಡ್ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರು ನಿನ್ನೆ ಸಂಜೆ ಮೋದಿ ಅವರ ಬಳಿಗೆ ಬಾಲಿವುಡ್ ಯುವ ಸ್ಟಾರ್ಗಳ ನಿಯೋಗವೊಂದನ್ನು ಕೊಂಡೊಯ್ದಿದ್ದರು. ಆಗಲೇ ಈ ಸೆಲ್ಫಿಯನ್ನು ನಟ ರಣವೀರ್ ಸಿಂಗ್ ತೆಗೆದಿದ್ದಾರೆ.

ಕರಣ್ ಜೋಹರ್ ಅವರು ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಚಿತ್ರವನ್ನು ಪ್ರಕಟಿಸಿದ್ದು, ಕೆಲವೇ ನಿಮಿಷಗಳಲ್ಲಿ ಭಾರಿ ವೈರಲ್ ಆಗಿದೆ. ಲಕ್ಷಾಂತರ ಜನ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ಬಾಲಿವುಡ್ ಮಂದಿ ತಮ್ಮ ಎಂದಿನ ಮಸ್ತಿಯಲ್ಲಿರುವಂತೆ ಕಾಣುತ್ತಿದ್ದಾರೆ. ಅವರಿಗೆ ತಕ್ಕಂತೆ ಮೋದಿ ಅವರು ಸಹ ನಗುತ್ತಲೇ ಎಲ್ಲರ ಮಧ್ಯೆ ನಿಂತು ಫೋಸು ನೀಡಿದ್ದಾರೆ.
ಕರಣ್ ಜೋಹರ್, ರಣಬೀರ್ ಕಪೂರ್, ರಣ್ವೀರ್ ಸಿಂಗ್, ಸುಶಾಂತ್ ಸಿಂಗ್, ವಿಕ್ಕಿ ಕೌಶಲ್, ರೋಹಿತ್ ಶೆಟ್ಟಿ, ರಾಜಕುಮಾರ್ ರಾವ್, ಆಯುಷ್ಮಾನ್ ಖುರೇಷಿ, ವರುಣ್ ಧವನ್, ಆಲಿಯಾ ಭಟ್, ಇನ್ನೂ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
View this post on InstagramA post shared by Karan Johar (@karanjohar) on
ಈ ಬಗ್ಗೆ ಇನ್ಸ್ಟಾ ಖಾತೆಯಲ್ಲಿ ಬರೆದುಕೊಂಡಿರುವ ಕರಣ್ ಜೋಹರ್, ಮೋದಿ ಅವರನ್ನು ಭೇಟಿ ಮಾಡಿ ದೇಶ ಕಟ್ಟುವ ಮಹತ್ಕಾರ್ಯದಲ್ಲಿ ನಾವು ಮಾಡಬಹುದಾದ ಸಹಾಯದ ಬಗ್ಗೆ ನಡೆಸಿದ ಚರ್ಚೆ ಅಭೂತಪೂರ್ವವಾಗಿತ್ತು ಎಂದು ಹೇಳಿದ್ದಾರೆ.
ಚಲನಚಿತ್ರಗಳ ಟಿಕೆಟ್ ಮೇಲಿನ ಜಿಎಸ್ಟಿ ಕಡಿಮೆಗೊಳಿಸಿರುವುದಕ್ಕೆ ಅಭಿನಂದನೆಯನ್ನೂ ಅವರು ಸಲ್ಲಿಸಿದ್ದಾರೆ. ಮೋದಿ ಅವರು ಕಳೆದ ವಾರವಷ್ಟೆ ಬಾಲಿವುಡ್ನ ಚಿತ್ರ ನಿರ್ಮಾಪಕರ ಜೊತೆ ಚರ್ಚೆ ನಡೆಸಿದ್ದರು.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications