Get Updates
Get notified of breaking news, exclusive insights, and must-see stories!

ಮುರ್ಶಿದಾಬಾದ್‌ನಲ್ಲಿ ಹಿಂಸಾಚಾರ: ವಕ್ಫ್ ಹೋರಾಟದಲ್ಲಿ ಮಮತಾ ಮೌನವೇಕೆ?

ವಕ್ಫ್ ಆಸ್ತಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ಅಂತ್ಯಗೊಳಿಸಲು ಕಾನೂನಿನ ಮೂಲಕ ಅಮೂಲಾಗ್ರ ಬದಲಾವಣೆಯನ್ನು ತರಲು ವಕ್ಫ್‌ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ ದೇಶದಲ್ಲಿ ಆಳವಾಗಿ ಬೇರೂರಿರುವ ಮನಸ್ಥಿತಿ ವಕ್ಫ್‌ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಮೂಲಕ ಬೆಳಕಿಗೆ ಬಂದಿದೆ. ವಕ್ಫ್ ತಿದ್ದುಪಡಿ ಕಾಯ್ದೆ-2025 ಅನ್ನು ಧಾರ್ಮಿಕ ಆಸ್ತಿ ವ್ಯವಹಾರಗಳಲ್ಲಿ ನ್ಯಾಯ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಲು ಜಾರಿಗೊಳಿಸಲಾಗಿದೆ ಎಂದು ಬಿಜೆಪಿ ಹೇಳಿದೆ. ಈ ಧೈರ್ಯಶಾಲಿ ಹೆಜ್ಜೆ ದೇಶದಾದ್ಯಂತ ಹೋರಾಟಕ್ಕೆ ಕಾರಣವಾಗಿ, ವಿರೋಧವನ್ನು ಎದುರಿಸುವಂತೆ ಮಾಡಿದೆ.

ದೇಶದ ಹಲವು ಕಡೆ ವಕ್ಫ್ ತಿದ್ದುಪಡಿ ಕಾಯ್ದೆ-2025 ವಿರುದ್ಧ ಹೋರಾಟ ನಡೆಯುತ್ತಿದೆ. ಆದರೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹೋರಾಟದ ಚಿತ್ರಗಳು ದೇಶದ ಗಮನ ಸೆಳೆಯುತ್ತಿವೆ. ಹೋರಾಟದ ಹೆಸರಿನಲ್ಲಿ ಹಿಂದೂ ಕುಟುಂಬಗಳನ್ನು ಗುರಿಯಾಗಿಸಲಾಗುತ್ತಿದೆ, ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ. ಶುಕ್ರವಾರದ ಪ್ರಾರ್ಥನೆ ಬಳಿಕ ಮುಸ್ಲಿಂ ಸಮುದಾಯದ ಗುಂಪು ನಡೆಸುತ್ತಿರುವ ಹಿಂಸಚಾರ, ಕಲ್ಲು ತೂರಾಟ ಹಿಂದುಗಳು ಆತಂಕಗೊಳ್ಳುವಂತೆ ಮಾಡಿದೆ. ಸದ್ಯದ ಪರಿಸ್ಥಿತಿ ಆತಂಕ ಮೂಡಿಸಿದ್ದು, ಇದುವರೆಗೂ 150ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ.

Murshidabad Burns Hindus Flee Waqf Protests Expose Dangerous Radical Underbelly

ಭಯಾನಕ ವಿಡಿಯೋಗಳು

ಮುರ್ಶಿದಾಬಾದ್‌ನಲ್ಲಿ ನಡೆಯುತ್ತಿರುವ ಹೋರಾಟದ ವಿಡಿಯೋಗಳು, ಹಿಂಸಾಚಾರದಿಂದ ಬಳಲುತ್ತಿರುವ ಪ್ರದೇಶದ ಬಗ್ಗೆ ಆತಂಕ ಮೂಡಿಸುತ್ತಿವೆ. ಮುಖವನ್ನು ಮುಚ್ಚಿಕೊಳ್ಳದ ವ್ಯಕ್ತಿಯೊಬ್ಬ "ಹಿಂದೂಗಳು ನಾಯಿಗಳು ನಾವು ಅಧಿಕಾರಕ್ಕೆ ಬಂದಾಗ ಅವರನ್ನು ನೋಡಿಕೊಳ್ಳುತ್ತೇವೆ" ಎಂದು ಹೇಳುತ್ತಿದ್ದಾನೆ.

ಪಶ್ಚಿಮ ಬಂಗಾಳದ ಈ ಹೋರಾಟವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ರಾಜ್ಯ ಸರ್ಕಾರದ ಓಲೈಕೆ ರಾಜಕಾರಣಕ್ಕೆ ಇದು ಸ್ಪಷ್ಟವಾದ ಸಾಕ್ಷಿಯೆಂದು ಹೇಳಿದೆ, ಕಠಿಣ ಕ್ರಮದ ಅಗತ್ಯವಿದೆ ಎಂದು ಒತ್ತಾಯಿಸಿದೆ.

ಬಿಜೆಪಿಯ ಹಿರಿಯ ನಾಯಕರಾದ ಸುವೆಂದು ಅಧಿಕಾರಿ, ಸುಕಾಂತ ಮಜುಂದಾರ್, ದಿಲೀಪ್ ಘೋಷ್ ಮತ್ತು ಅಭಿಜಿತ್ ಗಂಗೋಪಾಧ್ಯಾಯ ಮುಂತಾದವರು ಟಿಎಂಸಿಯ ಮೌನವನ್ನು ಪ್ರಶ್ನಿಸುತ್ತಿದ್ದಾರೆ. ಹಿಂದೂಗಳನ್ನು ತಮ್ಮ ಮನೆಗಳಿಂದ ಹೊರಹಾಕುತ್ತಿರುವಾಗ ರಾಜ್ಯ ಸರ್ಕಾರ ಕಣ್ಣು ಮುಚ್ಚಿಕೊಂಡಿದೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರವ್ಯಾಪಿ ಪ್ರತಿಭಟನೆ

ಮುರ್ಶಿದಾಬಾದ್‌ನ ಹೋರಾಟ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ. ಹಿಂಸಾತ್ಮಕ ಘಟನೆಗಳು ನಡೆದಿದ್ದರೂ ಸಹ ಮುಂಬೈ, ಹೈದರಾಬಾದ್, ಕೋಲ್ಕತ್ತಾ, ಪಾಟ್ನಾ, ಲಕ್ನೋ ಮತ್ತು ತಮಿಳುನಾಡಿನ ಹೊಸೂರಿನಂತಹ ಪ್ರದೇಶಗಳಲ್ಲಿಯೂ ಪ್ರತಿಭಟನೆಗಳು ನಡೆದಿವೆ.

ಹೈದರಾಬಾದ್‌ನಲ್ಲಿ ಪ್ರತಿಭಟನೆ ನಡೆಸಲಾಗಿದೆ ಮತ್ತು ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಕಾಯ್ದೆಯನ್ನು ತಿರಸ್ಕಾರ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಅಸ್ಸಾಂನ ಸಿಲ್ಚರ್‌ನಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಗುಂಪು ಪೊಲೀಸರೊಂದಿಗೆ ಘರ್ಷಣೆಗಿಳಿದಿವೆ. ಈ ಪ್ರತಿಭಟನೆಯಲ್ಲಿ 400ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ. ದೆಹಲಿಯ ಜಾಮಾ ಮಸೀದಿಯಲ್ಲಿ ನಡೆದ ಪ್ರತಿಭಟನೆ ಶಾಂತಿಯುತವಾಗಿತ್ತು.

ಬಿಜೆಪಿ ನಿಲುವು: ಕಾಂಗ್ರೆಸ್ ಗೊಂದಲ ಬಗೆಹರಿಸುವುದು

ವಕ್ಫ್‌ (ತಿದ್ದುಪಡಿ) ಕಾಯ್ದೆಯ ವಿಚಾರದಲ್ಲಿ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ವಕ್ಫ್‌ (ತಿದ್ದುಪಡಿ) ಕಾಯ್ದೆ ಸಂವಿಧಾನಕ್ಕಿಂತ ಮೇಲಲ್ಲ ಎಂದು ಹೇಳಿದೆ. ಬಹಳ ಕಾಲದಿಂದ, ವಕ್ಫ್ ಆಸ್ತಿಗಳನ್ನು ದುರುಪಯೋಗ ಮಾಡಲಾಗುತ್ತಿತ್ತು, ಅಲ್ಲದೇ ಇದರಿಂದ ಬಡ ಮುಸ್ಲಿಮರನ್ನು ದೂರ ಇಡಲಾಗುತ್ತಿತ್ತು. ತಿದ್ದುಪಡಿ ತಂದು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ವಂಶಪಾರಂಪರ್ಯ ಧರ್ಮಗುರುಗಳು ಮತ್ತು ಭೂ ಮಾಫಿಯಾಗಳ ಏಕಾಧಿಪತ್ಯಕ್ಕೆ ಅಂತ್ಯ ಹಾಡಲಾಗುತ್ತಿದೆ ಎಂದು ಪಕ್ಷ ಹೇಳಿದೆ.

ವಿರೋಧ ಪಕ್ಷಗಳ ದ್ವಂದ್ವ: ಮತಕ್ಕಾಗಿ ಬೆಂಕಿ ಹಚ್ಚುವುದು?

ಕಾಂಗ್ರೆಸ್, ಟಿಎಂಸಿ, ಮತ್ತು ಎಐಎಂಐಎಂ ಕಾಯ್ದೆಯನ್ನು ವಿರೋಧಿಸಿವೆ. ಆದರೆ ಉಗ್ರವಾದ ಮಾತುಗಳಿಂದ ಅದನ್ನು ಖಂಡಿಸಿ, ಹಿಂಸೆಯನ್ನು ಪ್ರಚೋದಿಸಿ ಅವರನ್ನು ತೃಪ್ತಿಪಡಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ರಾಷ್ಟ್ರೀಯ ಭದ್ರತೆಯ ಬಗ್ಗೆ ಚಿಂತಿಸದೇ ಮತ ಬ್ಯಾಂಕ್ ಗಟ್ಟಿಗೊಳಿಸಲು ನೋಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಮಮತಾ ಬ್ಯಾನರ್ಜಿ ಆಧುನಿಕ ಜಿನ್ನಾ: ಬಿಜೆಪಿ ನಾಯಕ ತರುಣ್ ಚುಗ್

ಬಿಜೆಪಿ ನಾಯಕ ತರುಣ್ ಚುಗ್, ಮಮತಾ ಬ್ಯಾನರ್ಜಿ ಅವರನ್ನು "ಆಧುನಿಕ ಜಿನ್ನಾ" ಎಂದು ಹೋಲಿಸಿ, ಅಲ್ಪಸಂಖ್ಯಾತರಿಗಾಗಿ ಹಿಂದೂಗಳ ಸುರಕ್ಷತೆಯನ್ನು ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ, ಅವರ ನಡೆಯನ್ನು ಖಂಡಿಸಿದ್ದಾರೆ. ಮುರ್ಶಿದಾಬಾದ್‌ನಲ್ಲಿ ಮೂವರು ಸಾವನ್ನಪ್ಪಿದ್ದರೂ ಸಹ ಮಮತಾ ಬ್ಯಾನರ್ಜಿ ಮೌನವೇಕೆ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯ ಶಹಜಾದ್ ಪೂನಾವಾಲಾ ಈ ಪ್ರತಿಭಟನೆಗಳನ್ನು ಹಿಂದೂಗಳ ವಿರುದ್ಧ "ರಾಜ್ಯ ಪ್ರಾಯೋಜಿತ ಹಿಂಸೆ" ಎಂದು ಕರೆದಿದ್ದಾರೆ. ದೇವಾಲಯ ಧ್ವಂಸ, ಬಲವಂತದ ವಲಸೆ ಮತ್ತು ಹಿಂದೂಗಳ ವಿರುದ್ಧದ ದ್ವೇಷ ಭಾಷಣವನ್ನು ಮಮತಾ ಬ್ಯಾನರ್ಜಿ ಯಾಕೆ ಖಂಡಿಸಿಲ್ಲ?, ಇದು ಮೌನ ಅನುಮೋದನೆಯೇ?" ಎಂದು ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಪ್ರಶ್ನಿಸಿದೆ.

ವಿಶಾಲ ದೃಷ್ಟಿಕೋನ: ದ್ವೇಷ ಮತ್ತು ಬೆಂಕಿಯ ನಡುವೆ ಬಿಜೆಪಿ ದೃಢ

ಒತ್ತಡದ ನಡುವೆಯೂ ಮೋದಿ ಸರ್ಕಾರ ದೃಢವಾಗಿ ನಿಂತಿದೆ. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲಾಗುವುದಿಲ್ಲ. ವಿಶೇಷವಾಗಿ ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಧಾರ್ಮಿಕ ಭ್ರಷ್ಟಾಚಾರವನ್ನು ಸ್ವಚ್ಛಗೊಳಿಸುವುದು ಮತ್ತು ಸಾಮಾನ್ಯ ನಾಗರಿಕರನ್ನು ರಕ್ಷಿಸುವುದರ ಮೇಲೆ ಗಮನ ಹರಿಸಲಾಗಿದೆ ಎಂದು ಹೇಳಿದೆ.

ವಿಪಕ್ಷಗಳು ವಕ್ಫ್ ಕಾಯ್ದೆಗೆ ವಿರೋಧಿಸುತ್ತಿರುವಾಗಲೇ ಬಿಜೆಪಿ ಏಪ್ರಿಲ್ 20 ರಿಂದ ಮೇ 5 ರ ತನಕ 'ವಕ್ಫ್ ಸುಧಾರಣೆ ಜಾಗೃತಿ ಅಭಿಯಾನ'ವನ್ನು ಆರಂಭಿಸಿದೆ. ಇದರ ಮೂಲಕ ತಿದ್ದುಪಡಿ ಮಾಡಿದ ಬಳಿಕ ಆಗುವ ಕಾನೂನು ಪರಿಣಾಮಗಳು ಮತ್ತು ಲಾಭಗಳನ್ನು ಮುಸ್ಲಿಂ ಸಮುದಾಯಕ್ಕೆ ತಿಳಿಸಲು ಉದ್ದೇಶಿಸಲಾಗಿದೆ. ಬಿಜೆಪಿ ಹಿಂದೆ ಸರಿಯುವುದಿಲ್ಲ ಎಂಬುದು ದೆಹಲಿಯಿಂದ ಮುರ್ಶಿದಾಬಾದ್‌ಗೆ ರವಾನೆ ಮಾಡಿರುವ ಸಂದೇಶವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+